ಕ್ವಾರಂಟೈನ್ಗೆ ಹೋಗುವ ವೇಳೆ ಈ ಬಗ್ಗೆ ಗಮನವಿರಲಿ
Team Udayavani, Jun 17, 2020, 7:54 AM IST
ಸಾಂದರ್ಭಿಕ ಚಿತ್ರ
ಭಾರತದಲ್ಲಿ ಸೋಂಕಿತರ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ. ಕೋವಿಡ್ ವೈರಸ್ ಸದ್ಯಕ್ಕೆ ಹೋಗುವಂಥದ್ದಲ್ಲ. ಕೆಲ ಅವಧಿವರೆಗೆ ಇಲ್ಲೇ ಇರುವಂಥದ್ದು. ಇಂಥ ಪರಿಸ್ಥಿತಿಯಲ್ಲಿ ಸೋಂಕು ಯಾರಿಗೆ ಬೇಕಾದರೂ ತಗುಲಬಹುದು. ಹಾಗಾದಾಗ, ಹಲವು ಜನರು ಸೆಲ್ಫ್ ಕ್ವಾರಂಟೈನ್ ಕೇಂದ್ರಗಳಿಗೆ ಹೋಗುವುದು ಅನಿ ವಾರ್ಯ. ಹಾಗೆ ಹೋಗುವವರು ಯಾವ ಮುಂಜಾಗ್ರತೆ ಹೊಂದಿರಬೇಕು, ತಮ್ಮೊಂದಿಗೆ ಏನು ಕೊಂಡೊಯ್ಯಬೇಕು ಎಂಬಿತ್ಯಾದಿ ಸಲಹೆಗಳು ಇಲ್ಲಿವೆ.
ಈ ಬಗ್ಗೆ ಗಮನವಿರಲಿ
– ಉತೃಷ್ಟ ಹೈಜಿನ್ಗಾಗಿ, ನಿಮ್ಮೊಂದಿಗೆ ಸೋಪು, ಟವೆಲ್, ಶಾಂಪೂ, ಡೆಂಟಲ್ ಕಿಟ್ ಕೊಂಡೊಯ್ಯಬೇಕು.
– ನಿಮ್ಮದೇ ಆದ ಪ್ರತ್ಯೇಕ ಉಡುಪುಗಳು, ವಾಷಿಂಗ್ ಡಿಟರ್ಜೆಂಟ್ಗಳನ್ನು ಜತೆಯಲ್ಲಿ ಕೊಂಡೊಯ್ದರೆ ಅನುಕೂಲ.
– ಕ್ವಾರಂಟೈನ್ನಲ್ಲಿದ್ದಾಗ, ಆರೋಗ್ಯ ಪರಿಸ್ಥಿತಿ ಗಂಭೀರವಾದರೆ ನಿಮ್ಮನ್ನು ಐಸಿಯು ಶಿಫ್ಟ್ ಮಾಡಬಹುದು. ಆಗ, ನಿಮ್ಮದೇ ಆದ ಬಟ್ಟೆ-ಬರೆ, ಟವೆಲ್ಗಳನ್ನು ಇಟ್ಟುಕೊಂಡಿರಬೇಕು.
– ನೀವು ಬೇರೆ ಕಾರಣಗಳಿಗಾಗಿ ನಿತ್ಯವೂ ಔಷಧಿ, ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಅವನ್ನೂ ನಿಮ್ಮೊಂದಿಗೆ ಕೊಂಡೊಯ್ಯುವುದು ಅನಿವಾರ್ಯ. ಕ್ವಾರಂಟೈನ್ ಕೇಂದ್ರದ ಆಸ್ಪತ್ರೆಯಲ್ಲೇ ತರಿಸಿ ಕೊಂಡರಾಯ್ತು ಎಂಬ ನಿರ್ಲಕ್ಷ್ಯ ಬೇಡ.
– ಪೌಷ್ಟಿಕ ಅಂಶಗಳಿರುವ ಡ್ರೈ ಫ್ರೂಟ್ಸ್, ನೀರಿನ ಬಾಟಲ್, ಫ್ಲಾಸ್ಕ್ಗಳನ್ನು ಕೊಂಡೊಯ್ಯಬಹುದು.
ಕೇಂದ್ರಗಳಲ್ಲಿ ಇರುವ ಸೌಲಭ್ಯಗಳೇನು?
– ಕ್ವಾರಂಟೈನ್ ಕೇಂದ್ರದಲ್ಲಿ ಇವನ್ನು ನೀಡುವುದಿಲ್ಲ. ಹಾಸಿಗೆ, ಹೊದಿಕೆ ಮಾತ್ರ ಅವರು ಕೊಡುತ್ತಾರೆ.
– ಬೆಳಗ್ಗೆ ತಿಂಡಿ, ಮಧ್ಯಾಹ್ನ- ರಾತ್ರಿ ಊಟ ನೀಡಲಾಗುತ್ತದೆ. ನಡುವೆ ಅವಕಾಶವಿದ್ದರೆ ಚಹಾ, ಕಾಫಿ.
– ನಿಮ್ಮನ್ನು ನಡೆದಾಡಿಸುವುದು, ಕಪ್ಗೆ ಚಹಾ ಸುರಿದುಕೊಡುವಂಥ ಸಣ್ಣಪುಟ್ಟ ಕೆಲಸಗಳ ಸಹಾಯ ಸಿಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ