ಕೇರಳ ಚುನಾವಣಾ ಅಖಾಡ: ಮಹಿಳೆಯರಿಂದ ನಿಯಂತ್ರಣ ಕೊಠಡಿಯ “ಕಂಟ್ರೋಲ್”
1950 ಸಹಾಯ ನಂಬ್ರಕ್ಕೆ ದೂರು, ಸಂಶಯ ನಿವಾರಣೆ ಸಂಬಂಧ ಈ ವರೆಗೆ 96 ದೂರುಗಳು ಬಂದಿವೆ.
Team Udayavani, Mar 22, 2021, 6:26 PM IST
ಕಾಸರಗೋಡು : ವಿಧಾನಸಭೆ ಚುನಾವಣೆ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ನಿಯಂತ್ರಣ ಕೊಠಡಿಯ ನಿಯಂತ್ರಣ ಮಹಿಳೆಯರ ಕೈಯಲ್ಲಿದೆ. ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ 24 ತಾಸುಗಳೂ ಚಟುವಟಿಕೆ ನಡೆಸುತ್ತಿರುವ ನಿಯಂತ್ರಣ ಕೊಠಡಿಯು ಜಿಲ್ಲಾಧಿಕಾರಿ ಕಚೇರಿಯ ಹುಸೂರ್ ಶಿರಸ್ತೇದಾರ್ ಎಸ್.ಶ್ರೀಜಾ ಅವರ ನೇತೃತ್ವದಲ್ಲಿ ಚಟುವಟಿಕೆ ನಡೆಸುತ್ತಿದೆ.
ಇದನ್ನೂ ಓದಿ:ಉತ್ತರಾಖಂಡ್ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಗೆ ಕೋವಿಡ್ ದೃಢ
ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ದೂರುಗಳು, ಮತದಾರರ ಸಹಾಯವಾಣಿ ನಿಯಂತ್ರಣ, ಫೀಲ್ಡ್ ಇನ್ವೆಸ್ಟಿಗೇಷನ್ ಟೀಂ ಮಾನಿಟರಿಂಗ್ ಸಹಿತ ಹೊಣೆ ಈ ನಿಯಂತ್ರಣ ಕೊಠಡಿಯದು. ಇದರ ಹೊಣೆ ಅಧಿಕಾರಿ ಮುಮ್ತಾಝ್ ಹಸನ್, ಸುಜಾ ವರ್ಗೀಸ್, ಸಹಾಯಕಿಯರಾದ ಕೆ.ಪ್ರಸೀದಾ, ಕೆ.ಎಸ್.ಶ್ರೀಕಲಾ, ಪಿ.ಸುಜಾ, ಪಿ.ಮಮತಾ, ಪದ್ಮಾವತಿ. ನಿಯಂತ್ರಣ ಕೊಠಡಿ ತಂಡ ಬೆಳಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ ನಿಯಂತ್ರಣ ಕೊಠಡಿ ನಿಯಂತ್ರಿಸುತ್ತಾರೆ. ತದನಂತರ ರಾತ್ರಿ ಹೊಣೆಯ ಅಧಿಕಾರಿಗಳಾದ ಡಿ.ಎಸ್.ಸೆಲ್ವರಾಜ್, ಅನಿಲ್ ಕುಮಾರ್, ಸಹಾಯಕರಾದ ಕೆ.ಪಿ.ಶಶಿಧರನ್, ಸಲೀಂ ಕುಮಾರ್, ಶ್ರೀರಾಂ, ಅರುಣ್ ಲಾರೆನ್ಸ್ ನಿಯಂತ್ರಣ ಕೊಠಡಿಯನ್ನು ನಿಯಂತ್ರಿಸುತ್ತಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ದೂರುಗಳನ್ನು ಸ್ವೀಕರಿಸುವ ಸಿ-ವಿಜಿಲ್ ಅಪ್ಲಿಕೇಷನ್, 1950 ಎಂಬ ಟೋಲ್ ಫ್ರೀ ನಂಬ್ರ, ಸಹಾಯವಾಣಿ ನಂಬ್ರಗಳಾದ 04994-255325, 255324ಕ್ಕೆ ಬರುವ ದೂರುಗಳು , ಚುನಾವಣೆ ಸಂಬಂಧ ಸಂಶಯಗಳು ಇತ್ಯಾದಿಗಳಿಗೆ ನಿಯಂತ್ರಣ ಕೊಠಡಿಯಲ್ಲಿ ಉತ್ತರ ಲಭಿಸಲಿದೆ. 1950 ಸಹಾಯ ನಂಬ್ರಕ್ಕೆ ದೂರು, ಸಂಶಯ ನಿವಾರಣೆ ಸಂಬಂಧ ಈ ವರೆಗೆ 96 ದೂರುಗಳು ಬಂದಿವೆ.
ಸಿ-ವಿಜಿಲ್ ನಲ್ಲಿ ದಾಖಲಾಗುವ ದೂರುಗಳು 5 ನಿಮಿಷದ ಅವಧಿಯಲ್ಲಿ ಫೀಲ್ಡ್ ಇನ್ವೆಸ್ಟಿಗೇಷನ್ ಟೀಂ ಗೆ ಹಸ್ತಾಂತರಗೊಳ್ಳುತ್ತಿದ್ದು, ಇದರ ಹೊಣೆ ನಿಯಂತ್ರಣ ಕೊಠಡಿಯದ್ದಾಗಿದೆ. ನೂರು ನಿಮಿಷಗಳ ಅವಧಿಯಲ್ಲಿ ದೂರಿಗೆ ಪರಿಹಾರ ಲಭ್ಯವಾಗಲಿದೆ. ಈ ಬಾರಿಯ ಚುನಾವಣೆ ಸಂಬಂಧ ಸಿ-ವಿಜಿಲ್ಗೆ ಈ ವರೆಗೆ 666 ದೂರು ಬಂದಿದೆ. ಇವುಗಳಲ್ಲಿ ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ 292 ದೂರುಗಳು, ಕಾಸರಗೋಡು ಕ್ಷೇತ್ರದಲ್ಲಿ 191 ದೂರುಗಳು, ಉದುಮ ಕ್ಷೇತ್ರದಲ್ಲಿ 91 ದೂರುಗಳು, ಕಾಂಞಂಗಾಡ್ ಕ್ಷೇತ್ರದಲ್ಲಿ 69 ದೂರುಗಳು, ತ್ರಿಕರಿಪುರ ಕ್ಷೇತ್ರದಲ್ಲಿ 23 ದೂರುಗಳು ಬಂದಿವೆ. ಸಿ-ವಿಜಿಲ್ ಆ್ಯಪ್ ನಲ್ಲಿ ನೋಂದಣಿಗೊಂಡಿದ್ದು, ಎಲ್ಲ ದೂರುಗಳೂ ಪರಿಹಾರಗೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ