ಕಸವು ಕನ್ಯೆ! ಸೀರೆಯಲ್ಲಿ ಸುಂದರಾಂಗಿ…


Team Udayavani, Oct 1, 2020, 7:46 PM IST

ಕಸವುಕನ್ಯೆ! ಸೀರೆಯಲ್ಲಿ ಸುಂದರಾಂಗಿ…

ಮಲಯಾಳಿ ಸೆಟ್‌ ಸೀರೆ ಎಂದೇ ಹೆಸರಾಗಿರುವ ಕಸವು ಸೀರೆಗಳಿಗೆ ವಿದೇಶಗಳಲ್ಲೂ ಬೇಡಿಕೆ ಇದೆ. ನೋಡಲೂ ಅಂದ, ಉಡಲು ಆರಾಮದಾಯಕ ಆಗಿರುವುದು ಈ ಸೀರೆಗಳ ಹೆಚ್ಚುಗಾರಿಕೆ.

ಸ್ವರ್ಣದ ಜರಿ ಉಳ್ಳ ಮಬ್ಬು ಬಿಳುಪು ಅಥವಾ ಬಿಳಿಬಣ್ಣದ ಸೀರೆಯನ್ನು ಮಲಯಾಳಿ ಸೆಟ್‌ ಸೀರೆ ಅಂತ ಕರೆಯುತ್ತಾರೆ. ಆದರೆ ಇದರ ನಿಜವಾದ ಹೆಸರುಕಸವು ಸೀರೆ.ಕೈಮಗ್ಗದಿಂದ ನೇಯಲಾಗುವ ಈ ವಿಶಿಷ್ಟ ಸೀರೆಯನ್ನು ಹಿಂದೆ ರಾಜಮನೆತನಕ್ಕೆ ಸೇರಿದವರು ಉಡುತ್ತಿದ್ದರು. ನಂತರ ಜನಸಾಮಾನ್ಯರು ಮದುವೆ, ಹಬ್ಬ- ಹರಿದಿನಗಳಲ್ಲಿ ಉಡಲು ಆರಂಭಿಸಿದರು.2018ರಲ್ಲಿ ಕೇರಳದಲ್ಲಿ ಉಂಟಾದ ಪ್ರವಾಹದಿಂದ, ಬಹಳಷ್ಟು ನೇಕಾರರುಕಷ್ಟಕ್ಕೆ ಸಿಕ್ಕಿಕೊಂಡರು. ಪ್ರವಾಹದ ಸಂದರ್ಭದಲ್ಲಿ ಎಷ್ಟೋ ಕೈಮಗ್ಗಗಳು ನೀರಿನಲ್ಲಿ ಕೊಚ್ಚಿಹೋದವು,ಕೆಲವು ಮುರಿದುಹೋದವು. ಹೀಗಾಗಿ ವ್ಯಾಪಾರದಲ್ಲಿ ವಿಪರೀತ ನಷ್ಟ ಉಂಟಾಯಿತು.

ಆನಂತರದ ದಿನಗಳಲ್ಲಿ ಈ ಕೈಮಗ್ಗಕ್ಕೆ ಬೇಡಿಕೆ ಹೆಚ್ಚಿಸಲುಕೆಲವು ಎನ್‌.ಜಿ.ಓ.ಗಳು ಮುಂದಾದವು. ಮೇಕ್‌ಓವರ್‌ ಪಡೆದಕಸವು ಸೀರೆಗಳನ್ನು ತಯಾರಿಸಿ ಅವುಗಳಿಗೆ ಮಾರುಕಟ್ಟೆ ಸೃಷ್ಟಿಸಲು ಮುಂದೆಬಂದವು. ಇವುಗಳನ್ನು ಮಾಡರ್ನ್ ಕಸವು ಸೀರೆ ಎನ್ನಲಾಗುತ್ತದೆ. ತಿಳಿಹಸಿರು,ಕಂದು, ಬೂದು, ಹಳದಿ, ಗುಲಾಬಿ,ಕೇಸರಿ, ಕೆಂಪು, ನೀಲಿ, ಮುಂತಾದ ತಿಳಿಬಣ್ಣದಕಸವು ಸೀರೆಗಳನ್ನು ನೇಯಲು ನೇಕಾರರಿಗೆ ಉತ್ತೇಜನ ನೀಡಿದವು. ಇಷ್ಟಾದಮೇಲೆ, ಈ ಸೀರೆಗಳಿಗೆಕೇರಳದಲ್ಲಷ್ಟೇ ಅಲ್ಲ, ಅನ್ಯರಾಜ್ಯಗಳಲ್ಲೂ ಬೇಡಿಕೆ ಹೆಚ್ಚಾಯಿತು.

ಆನ್‌ಲೈನ್‌ ಮೂಲಕ ಬಹಳಷ್ಟು ಜನ ಈಗ ಬಟ್ಟೆ-ಬರೆ ಖರೀದಿಸುವ ಕಾರಣ, ಈ ಸೀರೆಗಳು ದೇಶದ ಮೂಲೆಮೂಲೆಗೂ ತಲುಪಿದವು. ನೋಡಲೂ ಅಂದ, ಉಡಲೂ ಆರಾಮದಾಯಿಕ ಆಗಿರುವಕಸವು ಸೀರೆಗಳಿಗ ವಿದೇಶಗಳಲ್ಲೂ ಬೇಡಿಕೆ ಇದೆ! ಇವುಗಳನ್ನುಕಚೇರಿಗೂ ಉಟ್ಟು ಕೊಂಡು ಹೋಗಬಹುದು. ಅಧ್ಯಾಪಕಿಯರು, ವಾರ್ತಾವಾಚಕರು, ಕಲೆಯತ್ತ ಒಲವು ಹೊಂದಿರುವವರು, ಶಾಸ್ತ್ರೀಯ ನೃತ್ಯಗಾರ್ತಿಯರು, ಸಾಹಿತಿಗಳು, ರಂಗಕಲಾವಿದರು, ಹೀಗೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿಕೆಲಸ ಮಾಡುವ ಮಹಿಳೆಯರಿಗೆ ಈ ಸೀರೆಗಳ ಮೇಲೆ ಒಲವು ಇದೆ.

ಇವು ತೀರಾ ಸಾಂಪ್ರದಾಯಿಕವೂ ಅಲ್ಲ, ಅತೀ ಆಧುನಿಕವೂ ಅಲ್ಲ. ಹಾಗಾಗಿಯೇ ಇವುಗಳಿಗೆ ಬೇಡಿಕೆ ಹೆಚ್ಚು ಎಂದರೆ ತಪ್ಪಾಗಲಾರದು. ಪೂರ್ತಿ ಸೀರೆ ಸಾಲಿಡ್‌ ಕಲರ್ಡ್‌ (ಒಂದೇ ಬಣ್ಣದ್ದು) ಆಗಿದ್ದು,ಕೇವಲ ರವಿಕೆ ಬೇರೆ ಬಣ್ಣದ್ದೂ ಆಗಿರಬಹುದು. ಸೀರೆಗೆ ಮ್ಯಾಚ್‌ ಆಗದೆ ಇರುವ ಬಣ್ಣದ ರವಿಕೆಯನ್ನೂ ತೊಡಬಹುದು. ನಿಮ್ಮಲ್ಲೂ ಕಸವು ಸೀರೆಗಳಿದ್ದರೆ ಅವುಗಳನ್ನು ಉಟ್ಟು ಮೆರೆಯಿರಿ. ಇಲ್ಲವೇ,ಭಾರತೀಯ ನೇಕಾರರಿಗೆ ಉತ್ತೇಜನ ನೀಡಲು ಒಂದು ಕಸವು ಸೀರೆಯನ್ನಾದರೂ ಖರೀದಿಸಿ.

 

– ಅದಿತಿಮಾನಸ ಟಿ.ಎಸ್‌.

ಟಾಪ್ ನ್ಯೂಸ್

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.