ಕೊಲ್ಲೂರು ಗಡಿ ಪ್ರದೇಶ: ಬಿಗುಗೊಂಡ ವ್ಯವಸ್ಥೆ
Team Udayavani, Apr 24, 2020, 5:29 AM IST
ಕೊಲ್ಲೂರು: ಕೊಲ್ಲೂರು ಗಡಿ ಪ್ರದೇಶದಲ್ಲಿ ಪೋಲಿಸ್ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು ವಾಹನಗಳ ಸಂಚಾರದ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ.
ಚೆಕ್ ಪೋಸ್ಟ್ ನಲ್ಲಿ ಎಲ್ಲಾ ವಾಹನಗಳ ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಿರುವ ಪೊಲೀಸರು ನಿಗದಿತ ಸಮಯದೊಳಗೆ ಹಿಂದಿರುಗುವಂತೆ ಪ್ರತಿಯೋರ್ವರನ್ನು ಎಚ್ಚರಿಸುತ್ತಿರುವುದು ಕಂಡು ಬಂತು. ಚೆಕ್ಪೋಸ್ಟ್ ಬಳಿ ಇರುವ ಅರಣ್ಯ ಪ್ರದೇಶದ ಮೂಲಕ ಅಪರಿಚಿತರು ನುಸು ಳದಂತೆ ಎಲ್ಲೆಡೆ ಪೊಲೀಸ್ ಸರ್ಪಗಾವಲು ಇದ್ದು ಪ್ರತಿಯೋರ್ವರ ಚಲನ ವಲನವನ್ನು ಸೂಕ್ಷ್ಮವಾಗಿ ಗಮನಿಸಿ ಯಾರೂ ಗಡಿ ಯೊಳಗೆ ಪ್ರವೇಶಿಸದಂತೆ ಭದ್ರತಾ ನೆಲೆಯಲ್ಲಿ ಕ್ರಮಕೈಗೊಂಡಿದ್ದಾರೆ.
ದೇಗುಲದ ಮುಖ್ಯ ಗೇಟಿಗೆ ಬೀಗ
ದೇಗುಲದ ಪ್ರವೇಶ ದ್ವಾರದ ಮುಖ್ಯ ಗೇಟಿಗೆ ಬೀಗ ಜಡಿಯಲಾಗಿದ್ದು ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರ ಲಾಗಿದೆ. ದೇಗುಲದಲ್ಲಿ ಪೊಲೀಸ್, ಭದ್ರತಾ ಸಿಬಂದಿಗಳು, ಆರ್ಚಕರಲ್ಲದೇ ಮತ್ಯಾರು ಕಂಡುಬಂದಿಲ್ಲ. ಕೊಡಚಾದ್ರಿಯ ಸರ್ವಜ್ಞ ಪೀಠವು ಭಕ್ತರ ಸಂಚಾರವಿಲ್ಲದೇ ಪ್ರಕೃತಿ ರಮ್ಯ ಸೌಂದರ್ಯದ ನಡುವೆ ಮೌನ ಅವರಿಸಿದೆ. ಕೊಡಚಾದ್ರಿಯ ತಪ್ಪಲಿನ ಶ್ರೀ ಮೂಕಾಂಬಿಕಾ ದೇವಿಯ ಸನ್ನಿ ಯಲ್ಲಿ ಭಕ್ತರಿಲ್ಲದೇ ನಿಶ್ಯಬ್ಧ ವಾತಾವರಣ ಕಂಡು ಬಂದಿದೆ. ಪೇಟೆಯ ಉದ್ದಗಲಕ್ಕೂ ಭಕ್ತ ಸಂಚಾವಿಲ್ಲದೇ ಬಿಕೋ ಅನ್ನುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?