ಕೊಂಕಣ ರೈಲ್ವೆ ನಿರ್ಲಕ್ಷ್ಯ : ಜನರಿಗೆ ಜಲವಾಸ : ಮನೆ-ದೇವಾಲಯಗಳಿಗೆ ಹೊಕ್ಕ ನೀರು


Team Udayavani, Aug 13, 2020, 10:44 AM IST

ಕೊಂಕಣ ರೈಲ್ವೆ ನಿರ್ಲಕ್ಷ್ಯ : ಜನರಿಗೆ ಜಲವಾಸ : ಮನೆ-ದೇವಾಲಯಗಳಿಗೆ ಹೊಕ್ಕ ನೀರು

ಹೊನ್ನಾವರ: ದಕ್ಷಿಣೋತ್ತರವಾಗಿ ಮೈಚಾಚಿದ ಕೊಂಕಣ ರೈಲ್ವೆ ಮಾರ್ಗ ಪೂರ್ವದ ಸಹ್ಯಾದ್ರಿಯಿಂದ ಇಳಿದು ಬಂದು ಪಶ್ಚಿಮ ಸಮುದ್ರ ಸೇರುವ ಪರಂಪರೆಯ ಕಾಲುವೆಗೆ ಅಡ್ಡಲಾಗಿ ಮೈಚಾಚಿದೆ. ಇದನ್ನು ಅಧ್ಯಯನ ಮಾಡಿದ ಕೊಂಕಣ ರೈಲ್ವೆ ತನ್ನ ಮಾರ್ಗದ ಎಡಬಲದಲ್ಲಿ ರಾಜಾಕಾಲುವೆ ನಿರ್ಮಿಸಿ ನೀರು ಹರಿಯಲು ಅವಕಾಶ ಮಾಡಿಕೊಟ್ಟಿತ್ತು. ಈ ಕಾಲುವೆಗಳೆಲ್ಲ
ಮುಚ್ಚಿಹೋದ ಕಾರಣ ಅಕ್ಕಪಕ್ಕದ ಮನೆ, ದೇವಾಲಯ, ಕಟ್ಟಡ ಹಾಗೂ ಕೃಷಿ ಭೂಮಿಗಳು ಜಲಾವಾಸ
ಅನುಭವಿಸುವಂತಾಗಿದೆ.

ಕರ್ಕಿ ಗ್ರಾಮದೇವರಾದ ಮೂಡಗಣಪತಿ ನೀರಲ್ಲಿ ಮುಳುಗಿದ್ದು,  ಸರ್ಪಕರ್ಣೇಶ್ವರ ದೇವಾಲಯದ ದಾರಿಯಲ್ಲಿ ನೀರು ತುಂಬಿಕೊಂಡು ನೀರು ಮೆಟ್ಟಿಲನ್ನು ಏರಿದೆ. ಇದು ಮಾನಸಿಕ ಕಿರಿಕಿರಿಯಾದರೆ ಕರ್ಕಿಯಿಂದ ಹಳದೀಪುರ, ಧಾರೇಶ್ವರದ ತನಕ ನೀರು ಹರಿಯುವಲ್ಲಿ ತೊಂದರೆಯಾದ ಕಾರಣ ಬೆಳೆಯುತ್ತಿರುವ ಭತ್ತದ ಗದ್ದೆಗಳು ಜಲಾ ವಾಸ ಅನುಭವಿಸುತ್ತಿದ್ದು, ಹೀಗೆ ಮುಂದುವರಿದರೆ ಸಸಿಗಳು ಕೊಳೆತುಹೋಗಲಿವೆ. ವರ್ಷವರ್ಷವೂ ಸ್ವತ್ಛಗೊಳಿಸದ ಕಾರಣ ರೈಲ್ವೆ ಎಡಬಲಮಾರ್ಗದ
ರಾಜಾಕಾಲುವೆಯಲ್ಲಿ ಹೂಳು ತುಂಬಿದೆ, ಗಿಡಮರಗಳು ಬೆಳೆದಿವೆ.

ಕೊಂಕಣ ರೈಲು ಮಾರ್ಗ ಗದ್ದೆಯಿಂದ 10-15 ಅಡಿ ಎತ್ತರ ಇದ್ದ ಕಾರಣ ರೈಲ್ವೆ ಮಾರ್ಗ ಮುಳುಗುವುದಿಲ್ಲವಾದರೂ
ಬಡಹಾಲಕ್ಕಿ ರೈತರ ಮನೆಗಳಿಗೆ ನೀರು ನುಗ್ಗಿದೆ. ಇವರಿಗೆ ಉಳಿಯಲು ಸರಿಯಾದ ಸ್ಥಳವಿಲ್ಲ. ಇವರ ಮನೆ ಮುಳುಗಿದ್ದನ್ನು ನೋಡಲೂ ಯಾರು ಹೋಗುವುದಿಲ್ಲ. ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಪ್ರತಿವರ್ಷ ಗದ್ದೆಯಲ್ಲಿ ನೀರು ನಿಂತು ಎರಡುಮೂರು ಬಾರಿ ನಾಟಿ ಮಾಡಿದರೂ ಬೆಳೆಹಾಳಾದ ಕಾರಣ ಕಡಿಮೆಬೆಲೆಯಲ್ಲಿ ರೈತರು ಭೂಮಿಯನ್ನು ಮಾರಿ ಮನೆಯಲ್ಲಿ
ಉಳಿದುಕೊಂಡಿದ್ದರು. ಭೂಮಿ ಕೊಂಡವರು ಇವುಗಳನ್ನು ಸೈಟ್‌ ಗಳಾಗಿ ಪರಿವರ್ತಿಸಿ ದುಬಾರಿ ಬೆಲೆಗೆ ಮಾರಿಕೊಂಡಿದ್ದು ಹಲವು
ಕಟ್ಟಡಗಳು ತಲೆ ಎತ್ತಿವೆ. ಸಾವಿರಾರು ಎಕರೆಗಳು ಇದರ ಅವಲಂಬಿತರು ಅಸಹಾಯ ಸ್ಥಿತಿಯಲ್ಲಿದ್ದಾರೆ. ಇವರ ಕಣ್ಣೀರು ಮಳೆಗಾಲದ ನೀರಿನಲ್ಲಿ ಸೇರಿ ಹೋಗುತ್ತದೆ. ದೇವರಿಗೂ ಕಷ್ಟ, ದೇವರನ್ನು ನಂಬಿದ ಬಡರೈತರಿಗೂ ಕಷ್ಟ. ಕೊಂಕಣ ರೈಲು ಮಾತ್ರ ಓಡುತ್ತಿದೆ. ಅಕ್ಕಪಕ್ಕದವರ ಬದುಕು ಮೂರಾಬಟ್ಟೆಯಾಗಿದೆ.

– ಜೀಯು ಹೊನ್ನಾವರ

ಟಾಪ್ ನ್ಯೂಸ್

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

1-weqwwqe

Joida Tragedy: ನದಿಗಿಳಿದ ಒಂದೇ ಕುಟುಂಬದ 6 ಮಂದಿ ಮೃತ್ಯು!

shiv Hebbar

BJP ಪರ ಪ್ರಚಾರಕ್ಕೆ ಹೋಗಲ್ಲ: ಶಾಸಕ ಶಿವರಾಮ್‌ ಹೆಬ್ಬಾರ್

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.