ಕೊರಟಗೆರೆ : ಕುರಿ ಮೇಯಿಸಲು ಹೋದ ಮಹಿಳೆಯ ಶವ ಕೆರೆಯಲ್ಲಿ ಪತ್ತೆ
Team Udayavani, Dec 13, 2021, 6:49 PM IST
ಕೊರಟಗೆರೆ : ಕುರಿ ಮೇಯಿಸಲು ಹೋದ ಮಹಿಳೆ ಅಕ್ಕಿರಾಂಪುರ ಕೆರೆಯಲ್ಲಿ ಕುರಿಗಳಿಗೆ ನೀರು ಕುಡಿಸುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ಹೊಸಹಳ್ಳಿ ಗ್ರಾಮದ ಪುಟ್ಟನಂಜಪ್ಪನ ಹೆಂಡತಿ ಲಕ್ಷ್ಮಮ್ಮ ( 55 ವರ್ಷ) ಅಕ್ಕಿ ರಾಂಪುರ ಕೆರೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ದುರ್ದೈವಿ ಯಾಗಿದ್ದು, ಈಕೆ ಭಾನುವಾರ ಮಧ್ಯಾಹ್ನ ಕುರಿಗೆ ನೀರು ಕುಡಿಸಲೂ ಅಥವಾ ಬಹಿರ್ದೆಸೆಗೆ ಹೋಗಿರುವ ಸಂದರ್ಭದಲ್ಲಿಯೋ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎನ್ನಲಾಗಿದೆ.
ಮೃತೆ ಲಕ್ಷ್ಮಮ್ಮ ಪ್ರತಿ ದಿನದಂತೆ ಭಾನುವಾರ ಸಂಜೆ ಮನೆಗೆ ವಾಪಸ್ ಬರದೇ ಇದ್ದ ಕಾರಣ ಪೋಷಕರು ಹುಡುಕಾಡಿದ್ದಾರೆ ಈ ವೇಳೆ ಕುರಿಗಳು ಮಾತ್ರ ಅಕ್ಕಿ ರಾಂಪುರ ಕೆರೆಯ ಏರಿ ಮೇಲೆ ಇದ್ದು ಲಕ್ಷ್ಮಮ್ಮ ನ ಚಪ್ಪಲಿಗಳು ಮಾತ್ರ ನೀರಿನ ದಡದಲ್ಲಿ ಬಿದ್ದಿತ್ತು, ಮನೆಯವರು ಜಮೀನು ಸೇರಿದಂತೆ ಹಲವೆಡೆ ಹುಡುಕಾಡಿ ರಾತ್ರಿಯಾದ ಕಾರಣ ನಾಳೆ ನೋಡುವ ಎಂದು ಮನೆಗೆ ವಾಪಸ್ಸಾಗಿದ್ದಾರೆ. ಆದರೆ ಸೋಮವಾರ ಬೆಳಗ್ಗೆ ಚಪ್ಪಲಿ ಪತ್ತೆಯಾದ ಕೆರೆಯಲ್ಲೇ ಲಕ್ಷ್ಮಮ್ಮ ದೇಹ ನೀರಿನಲ್ಲಿ ತೇಲುತ್ತಿರುವುದು ಪತ್ತೆಯಾಗಿದೆ.
ಈ ಸಂಬಂಧ ಕೋಟಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್ಐ ಮಂಜುಳಾ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ನಗರದಲ್ಲಿ ನೆರೆ ಹಾವಳಿ ತಡೆಗೆ ಕ್ರಮ; 30 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್