ವಸತಿ ಶಾಲೆ ಸಮಸ್ಯೆ ಇತ್ಯರ್ಥ : ವಾರದೊಳಗೆ ಶಿಲಾನ್ಯಾಸ : ಸಚಿವ ಕೋಟ


Team Udayavani, Apr 2, 2022, 12:31 PM IST

ವಸತಿ ಶಾಲೆ ಸಮಸ್ಯೆ ಇತ್ಯರ್ಥ : ವಾರದೊಳಗೆ ಶಿಲಾನ್ಯಾಸ : ಸಚಿವ ಕೋಟ

ಕುಂದಾಪುರ: ಸಿದ್ದಾಪುರ ಹಾಗೂ ಶಂಕರನಾರಾಯಣ ವಸತಿ ಶಾಲೆ ಸಮಸ್ಯೆ ಇತ್ಯರ್ಥಪಡಿಸಿ ವಾರದಲ್ಲಿ ಶಾಸಕರಿಂದ ಶಿಲಾನ್ಯಾಸ ಆಗುವಂತೆ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಅವರು ಶುಕ್ರವಾರ ಇಲ್ಲಿನ ಪ್ರವಾಸಿಮಂದಿರದಲ್ಲಿ ಇಲಾಖಾಧಿಕಾರಿಗಳ ಸಭೆ ನಡೆಸಿದರು.

ಇಂದಿರಾ ಗಾಂಧಿ ಶಾಲೆ ಸಿದ್ದಾಪುರ ಇಂದಿರಾ ಗಾಂಧಿ ವಸತಿ ಶಾಲೆಯ ಸಮಸ್ಯೆ ನಿವಾರಿಸಲು ವಿಫ‌ಲರಾದ ಬೈಂದೂರು ಆರ್‌ಎಫ್ಒ ಸತೀಶ್‌ಬಾಬು ಅವರನ್ನು ವರ್ಗ ಮಾಡಲಾಗಿದೆ. ಸಚಿವನಾಗಿ ಹೇಳಿದರೂ ಆದೇಶ ಪಾಲಿಸಿರಲಿಲ್ಲ. ಇನ್ನೂ ಕಠಿನ ಕ್ರಮ ಕೈಗೊಳ್ಳುವಂತೆ ಮಾಡಬೇಡಿ. ಇಂದು ಸಂಜೆಯೊಳಗೆ ಕಡತ ತಯಾರಿಸಿ ಡಿಸಿ ಕಚೇರಿಗೆ ಕಳುಹಿಸಿ ಎಂದು ಡಿಎಫ್ಒಗೆ ಸೂಚಿಸಿದರು. ಮಂಗಳವಾರದ ಒಳಗೆ ಮರಗಳ ತೆರವಾಗಬೇಕು. ಶನಿವಾರದೊಳಗೆ ಬೈಂದೂರು ಶಾಸಕ ಸುಕುಮಾರ ಶೆಟ್ಟರ ಅನುಕೂಲ ನೋಡಿ ಅವರಿಂದ ಶಿಲಾನ್ಯಾಸ ಮಾಡಿಸಿ ಸಮಾಜ ಕಲ್ಯಾಣ ಇಲಾಖಾಧಿಕಾರಿ ಗಳಿಗೆ, ಗುತ್ತಿಗೆದಾರರಿಗೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್‌) ಅಧಿಕಾರಿಗಳಿಗೆ ತಿಳಿಸಿದರು.

ಅಂಬೇಡ್ಕರ್‌ ಶಾಲೆ
ಶಂಕರನಾರಾಯಣದಲ್ಲಿ ಅಂಬೇಡ್ಕರ್‌ ವಸತಿ ಶಾಲೆ ಸಮಸ್ಯೆಯೂ ಇತ್ಯರ್ಥವಾಗಿದ್ದು ಶೀಘ್ರ ಶಿಲಾನ್ಯಾಸ ನಡೆಯಲಿದೆ. ಉಡುಪಿ, ದ.ಕ. ಜಿಲ್ಲೆಯ ಹಾಸ್ಟೆಲ್‌ಗ‌ಳಲ್ಲಿ ವಾರ್ಡ್‌ನ್‌ ಕೊರತೆ ಇರುವ ಕುರಿತು ಅಧಿಕಾರಿಗಳು ಗಮನಕ್ಕೆ ತಂದರು. ಸಂಬಂಧಪಟ್ಟವರನ್ನು ಸಂಪರ್ಕಿಸಿದ ಸಚಿವರು, ಕೌನ್ಸಿಲಿಂಗ್‌ ಮೂಲಕ ವಾರ್ಡನ್‌ ನೇಮಕಾತಿ ನಡೆಯಲಿದ್ದು ದ.ಕ., ಉಡುಪಿ, ಉ.ಕ. ಜಿಲ್ಲೆಗೆ ಮೊದಲ ಆದ್ಯತೆ ನೀಡಿ. ಉಡುಪಿ ಜಿಲ್ಲೆಗೆ 11 ವಾರ್ಡನ್‌ಗಳ ಅಗತ್ಯವಿದೆ ಎಂದರು. ಉಡುಪಿಯ ಅಜ್ಜರಕಾಡಿನಲ್ಲಿ ವಸತಿ ಶಾಲೆ ಸ್ಥಾಪಿಸಲು ಜಾಗ ಮೀಸಲಿಡಲಾಗಿದೆ ಎಂದರು.

ನಾರಾಯಣ ಗುರು ಶಾಲೆ

ರಾಜ್ಯದಲ್ಲಿ ನಾರಾಯಣ ಗುರು ಹೆಸರಿನಲ್ಲಿ 4 ವಸತಿ ಶಾಲೆ ಆರಂಭವಾಗಲಿದ್ದು ಉಡುಪಿ ಜಿಲ್ಲೆಗೆ ಮಂಜೂರಾದ ಶಾಲೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬೇಡಿಕೆಯಂತೆ ಕುಂದಾಪುರ ತಾಲೂಕಿನಲ್ಲಿ ಆರಂಭಿಸಲಾಗುವುದು. ಉಳಿದಂತೆ ದ.ಕ., ಉ.ಕ., ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ 1 ಶಾಲೆ ಆರಂಭವಾಗಲಿದೆ.

ಸಾಲದ ದಾಖಲು
ಸಹಕಾರಿ ಸಂಘಗಳಲ್ಲಿ ಕೃಷಿಗೆ ಸಂಬಂಧಪಟ್ಟಂತೆ ಅಭಿವೃದ್ಧಿ ಸಾಲಗಳನ್ನು ಮಾಡಿದರೆ ಆರ್‌ಟಿಸಿಯಲ್ಲಿ ದಾಖಲಾಗಬೇಕು. ಸಂಘಗಳ ನಿಬಂಧನೆಯಂತೆ ಸಾಲಗಾರನು ತನ್ನ ವ್ಯಾಪ್ತಿಗೆ ಬರುವ ಉಪನೋಂದಣಾ ಕಚೇರಿಗೆ ಹೋಗಿ ತಾನು ಕೊಟ್ಟಿರುವ ಭೂಮಿಯನ್ನು ಅಡಮಾನ ಮಾಡಿ ನಂತರ ಅದನ್ನು ಆರ್‌ಟಿಸಿಯಲ್ಲಿ ದಾಖಲು ಮಾಡಬೇಕು. ಇದಕ್ಕೆ ರೈತ ಸಾಲಗಾರ 3-4 ಬಾರಿ ಉಪ ನೋಂದಣಿ ಕಚೇರಿಗೆ ಹೋಗಬೇಕು ಎಂದರು.

ಕೊರಗ ಮನೆಗೆ ಅನುದಾನ
ಕುಂದಾಪುರ ಪುರಸಭೆ ವ್ಯಾಪ್ತಿಯ ಕೊರಗರ ಮನೆಗಳಿಗೆ ಅನುದಾನ ಬಿಡುಗಡೆ ಭಾಗಶಃ ಆಗಿದ್ದು ಉಳಿಕೆ ಅನುದಾನ ಶೀಘ್ರ ಬಿಡುಗಡೆಯಾಗಲಿದೆ. ಆಲೂರಿನಲ್ಲಿ 225 ಎಕರೆ ಗಣಿಗಾರಿಕೆ ನಡೆಯುತ್ತಿದ್ದರೂ 23 ಕೊರಗ ಕುಟುಂಬಗಳಿಗೆ ಜಾಗ ಇಲ್ಲ ಎಂಬ ವಿಚಾರದ ಕುರಿತು ಗಮನಹರಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.