ಕುಕ್ಕಿಪಾಡಿಯಲ್ಲಿ ವಾಮಾಚಾರ ವದಂತಿ: ಪ್ರಶ್ನಿಸಲು ಹೋದ ಟಾಸ್ಕ್ ಪೋರ್ಸ್ ಮೇಲೆ ಹಲ್ಲೆಗೆ ಯತ್ನ
Team Udayavani, May 11, 2020, 10:42 AM IST
ಪುಂಜಾಲಕಟ್ಟೆ: ಮನೆಯೊಂದರಲ್ಲಿ ವಾಮಾಚಾರ ನಡೆಯುತ್ತಿರುವ ಬಗ್ಗೆ ಪ್ರಶ್ನಿಸಲು ಹೋದ ಟಾಸ್ಕ್ ಫೋರ್ಸ್ ಸಮಿತಿಗೆ ಮನೆ ಮಂದಿ ಹಲ್ಲೆಗೈಯ್ಯಲು ಯತ್ನಿಸಿದ ಘಟನೆ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಅಬ್ಯಂತ ಎಂಬಲ್ಲಿ ಮೇ 10 ರಂದು ಸಂಭವಿಸಿದೆ.
ಇಲ್ಲಿನ ವಿಶ್ವನಾಥ ಆಚಾರ್ ಎಂಬಾತ ಮಾಟ ಮಂತ್ರ ಮಾಡುತ್ತಿದ್ದು, ಆತನ ಮನೆಯಲ್ಲಿ ಪರ ಊರಿನ ಜನ ಜಮಾಯಿಸಿದ್ದ ಬಗ್ಗೆ ಸ್ಥಳೀಯ ಆಶಾ ಕಾರ್ಯಕರ್ತೆಗೆ ತಿಳಿದು ಬಂದಿದ್ದು, ಅವರು ಕುಕ್ಕಿಪಾಡಿ ಗ್ರಾಮ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ, ಗ್ರಾ.ಪಂ.ಸದಸ್ಯ ಯೋಗೀಶ್ ಆಚಾರ್ಯ ಅವರ ಗಮನಕ್ಕೆ ತಂದಿದ್ದರು.ಈ ಬಗ್ಗೆ ವಿಚಾರಿಸಲು ಅವರು ವಿಶ್ವನಾಥ ಅವರ ಮನೆಗೆ ತೆರಳಿದಾಗ ವಿಶ್ವನಾಥ ಅವರ ಪುತ್ರ ಏರು ಧ್ವನಿಯಿಂದ ಮಾತನಾಡಿದ್ದು ಇಬ್ಬರೂ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಈ ವೇಳೆ ವಿಶ್ವನಾಥರ ಪತ್ನಿ ಹಿಡಿಸೂಡಿ ಹಿಡಿದು ಹಲ್ಲೆಗೆ ಮುಂದಾಗಿದ್ದರು. ಪರಿಸ್ಥಿತಿಯನ್ನು ಗಮನಿಸಿ ಅಲ್ಲಿಗೆ ಬಂದಿದ್ದವರು ಪರಾರಿಯಾದರು ಎಂದು ಯೋಗೀಶ್ ಅವರು ತಿಳಿಸಿದ್ದಾರೆ.
ಈ ಬಗ್ಗೆ ಯೋಗೀಶ್ ಅವರು ಪುಂಜಾಲಕಟ್ಟೆ ಠಾಣೆಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರು ಆಗಮಿಸಿ ವಿಶ್ವನಾಥ ಅವರನ್ನು ವಶಕ್ಕೆ ಪಡಕೊಂಡಿದ್ದರು.
ಘಟನೆ ಬಗ್ಗೆ ಠಾಣೆಗೆ ದೂರು ನೀಡುವಂತೆ ತಿಳಿಸಿರುವುದಾಗಿ ಎಸ್ಐ ಸೌಮ್ಯಾ ಅವರು ತಿಳಿಸಿದ್ದಾರೆ.
ಈ ಕುರಿತು ನಮಗೆ ಮಾಹಿತಿ ನೀಡಿಲ್ಲ ಎಂದು ಗ್ರಾ.ಪಂ. ಅಧ್ಯಕ್ಷ , ಟಾಸ್ಕ್ ಪೋರ್ಸ್ ಸಮತಿ ಅಧ್ಯಕ್ಷ ದಿನೇಶ್ ಸುಂದರ ಶಾಂತಿ ಅವರು ತಿಳಿಸಿದ್ದು, ಈ ಬಗ್ಗೆ ಸೋಮವಾರ ಸಮಿತಿ ಸಭೆ ಕರೆದು ವಿವರ ಪಡೆಯುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Congress;ಪ್ರತಾಪ್ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ
LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ
Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ