ಕುಂದಾಪುರ : ಕೊನೆಗೂ ಸಂಚಾರಕ್ಕೆ ಮುಕ್ತಗೊಂಡ ಫ್ಲೈಓವರ್‌


Team Udayavani, Apr 27, 2021, 2:30 AM IST

ಕುಂದಾಪುರ : ಕೊನೆಗೂ ಸಂಚಾರಕ್ಕೆ ಮುಕ್ತಗೊಂಡ ಫ್ಲೈಓವರ್‌

ಕುಂದಾಪುರ: ಕುಂದಾಪುರ ಜನತೆಯ ದಶಕಗಳ ಕನಸು ನನಸಾಗಿದೆ. ಅನೇಕ ವರ್ಷಗಳ ಬಳಿಕ ಶಾಸ್ತ್ರಿ ಸರ್ಕಲ್‌ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ಫ್ಲೈಓವರ್‌ನ ಡಾಮರು ಕಾಮ ಗಾ ರಿ ಮುಕ್ತಾಯವಾಗಿದೆ. ವಾಹನಗಳ ಪ್ರಾಯೋಗಿಕ ಓಡಾಟ ಆರಂಭವಾಗಿದೆ. ಜನ ನಿಟ್ಟುಸಿರು ಬಿಡುವಂತಾಗಿದೆ. ಸಾಮಾಜಿಕ ಜಾಲ ತಾಣದಲ್ಲಿ ಅಕ್ಷರಶಃ ಹಬ್ಬದ ಸಂಭ್ರಮ ಕಂಡು ಬಂದಿದೆ. ಇಷ್ಟರವರೆಗೆ ರಾಷ್ಟ್ರೀಯ ಹೆದ್ದಾರಿಯೇ ಆಗಿದ್ದ ಸರ್ವೀಸ್‌ ರಸ್ತೆ ತುಸು ನಿರಾಳವಾಗಿದೆ.

ಬಾಕಿ
ದಶಕಗಳ ಹಿಂದೆ ಆರಂಭವಾದ ಹೆದ್ದಾರಿ ಕಾಮಗಾರಿಗೆ ಶಾಸಿŒ ಸರ್ಕಲ್‌ ಬಳಿ ಫ್ಲೈ ಓವರ್‌ ಮಾಡುವ ಯೋಜನೆ ಮೂಲ ನಕಾಶೆಯಲ್ಲಿ ಇರಲಿಲ್ಲ. ಆಗ ಸಂಸದರಾಗಿದ್ದ ಜಯಪ್ರಕಾಶ್‌ ಹೆಗ್ಡೆ ಅವರು ದಿಲ್ಲಿಯಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಮಂಜೂರು ಮಾಡಿಸಿದರು. ಮೂಲ ನಕ್ಷೆಯಲ್ಲಿ ಇಲ್ಲದೇ ತಡವಾಗಿ ಆದ ಮಂಜೂರಾತಿ ಎಂಬ ಒಂದು ಕಾರಣ ಇಟ್ಟುಕೊಂಡೇ ಕಾಮಗಾರಿಯನ್ನು ವಿಳಂಬ ಮಾಡಲಾಯಿತು. ಇದರ ಮಂಜೂರಾತಿ ಬಳಿಕ ಬಸೂÅರು ಮೂರುಕೈ ಅಂಡರ್‌ಪಾಸ್‌ ಮಂಜೂರಾಯಿತು. ಈ ಎರಡೂ ಕಾಮಗಾರಿಗಳು ವಿಳಂಬವಾಗಿ ಜನರಿಂದ ಸರಾಗವಾಗಿ ಟೀಕೆಗೆ ಒಳಗಾಯಿತು.

ಸಮಸ್ಯೆ
ಗುತ್ತಿಗೆ ವಹಿಸಿಕೊಂಡ ನವಯುಗ ಸಂಸ್ಥೆ ಹಣಕಾಸಿನ ಸಮಸ್ಯೆ ಎದುರಿಸಿತು. ಸಾಲ ತೆಗೆಸಿಕೊಡಲಾಯಿತು. ಪಂಪ್‌ವೆಲ್‌ ಮತ್ತು ಕುಂದಾಪುರ ಎಂಬ ಎರಡು ಫ್ಲೈಓವರ್‌ಗಳೇ ನವಯುಗ ಸಂಸ್ಥೆಯ ಹೆಸರಿಗೆ ಮಸಿ ಬಳಿಯಿತು. ಇಬ್ಬರು ಸಂಸದರಿಗೂ ಇದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಆದರೆ ಕಾಮಗಾರಿ ಮುಕ್ತಾಯವಾಗುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ ಕೀರ್ತಿ ಸಲ್ಲುವುದು ಏನಿದ್ದರೂ ಅಧಿಕಾರಿ ವರ್ಗಕ್ಕೆ. ಉಡುಪಿಯ ಡಿಸಿ ಹಾಗೂ ಕುಂದಾಪುರ ಎಸಿಗಳೇ ಹೆಚ್ಚು ನಿಗಾ ವಹಿಸಿದ್ದರು. ಎಸಿ ಭೂಬಾಲನ್‌ ಕೇಸು ಹಾಕಿದ್ದರು. ರಾಷ್ಟ್ರೀಯ ಹೆದ್ದಾರಿ ಜಾಗೃತಿ ಹೋರಾಟ ಸಮಿತಿ ಸಹಿತ ಅನೇಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪ್ರತಿ ಬಾರಿಯೂ ಇನ್ನೆರಡು ತಿಂಗಳಲ್ಲಿ ಕಾಮಗಾರಿ ಮುಕ್ತಾಯ ಎಂಬಂತೆ ದಿನಾಂಕ ಕೊಡಲಾಗುತ್ತಿತ್ತು.

ಮುಕ್ತಾಯ
ಲಾಕ್‌ಡೌನ್‌ಗಿಂತ ಎರಡು ದಿನ ಮೊದಲೇ ಮುಕ್ತಾಯವಾದ ಕಾರಣ ನೆಪ ಹೇಳುವುದು ತಪ್ಪಿದಂತಾಗಿದೆ. ಕಾರ್ಮಿಕರು ಊರಿಗೆ ಹೋದರೂ ವಾಹನ ಓಡಾಟ ನಿರಾತಂಕವಾಗಿರಲಿದೆ. ಡಾಮರು ಕಾಮಗಾರಿ ಮುಕ್ತಾಯವಾಗಿದೆ. ಸುಣ್ಣ ಬಣ್ಣ ಬಳಿಯುವುದು ಬಾಕಿ ಇದೆ. ವಿದ್ಯುತ್‌ ಕಂಬ ಹಾಕುವುದು, ದಾರಿದೀಪ ಅಳವಡಿಕೆ ನಡೆಯುತ್ತಿದೆ. ಸುಂಕ ವಸೂಲಾತಿ ರಸ್ತೆ ಮುಕ್ತಾಯ ಎಂದು ಫ‌ಲಕ ಅಳವಡಿಸಲಾಗಿದೆ. ಲಾಕ್‌ಡೌನ್‌ನಿಂದ ರಸ್ತೆ ಕಾಮಗಾರಿಗೆ ಸಮಸ್ಯೆ ಆಗದೇ ಇದ್ದಲ್ಲಿ ಇವೆಲ್ಲ ಕೆಲವೇ ದಿನಗಳಲ್ಲಿ ಮುಕ್ತಾಯವಾಗಬಹುದು.

ತೆರೆದು ಕೊಡಲಿ
ಬೊಬ್ಬರ್ಯನಕಟ್ಟೆ ಬಳಿ ಹೆದ್ದಾರಿಯಿಂದ ಸರ್ವೀಸ್‌ ರಸ್ತೆಗೆ ಹೋಗಲು ಅವಕಾಶ ನೀಡಲಿ. ಅಂತೆಯೇ ಇದರ ಆಚೆ ಬದಿ ಹೆದ್ದಾರಿಗೆ ಸರ್ವೀಸ್‌ ರಸ್ತೆಯಿಂದ ಹೋಗಲು ಅವಕಾಶ ನೀಡಲಿ. ಆಗ ಅರ್ಧದಷ್ಟು ಸಮಸ್ಯೆ ಕಡಿಮೆಯಾಗುತ್ತದೆ. ಇಲ್ಲಿ ಎರಡು ಹೆದ್ದಾರಿಗಳನ್ನು ಹಾದುಹೋಗಲು ಅವಕಾಶ ಕೊಡದೇ ಇದ್ದರೂ ಇದಿಷ್ಟಾದರೂ ಮಾಡಲಿ. ಏಕೆಂದರೆ ಸುಮಾರು 17 ಕಚೇರಿಗಳು ಈ ವ್ಯಾಪ್ತಿಯಲ್ಲಿವೆ. ಕಿ.ಮೀ.ಗಟ್ಟಲೆ ಸುತ್ತಾಡಬೇಕಾಗುತ್ತದೆ. ಸಾರ್ವಜನಿಕರಿಗೆ ಇಂಧನ, ಸಮಯ ಅನಗತ್ಯ ವ್ಯಯವಾಗಲಿದೆ. ಇದಿಷ್ಟಲ್ಲದೆ ಹೋರಾಟ ಸಮಿತಿ ಕೆಲವು ಬೇಡಿಕೆಗಳನ್ನು ಇಟ್ಟಿದ್ದು ಅದನ್ನೂ ಗುತ್ತಿಗೆ ಸಂಸ್ಥೆ ಪೂರ್ಣಗೊಳಿಸಬೇಕಿದೆ. ಸರ್ವೀಸ್‌ ರಸ್ತೆ ಕಾಮಗಾರಿ ಮಾಡಬೇಕಿದೆ.

ದೀರ್ಘ‌ ಸುತ್ತಾಟ
ವಿನಾಯಕ ಬಳಿ ಅದೆಷ್ಟೇ ಬೇಡಿಕೆ ಇದ್ದರೂ ಸರ್ವೀಸ್‌ ರಸ್ತೆಗೆ ಸಂಪರ್ಕ ನೀಡಿಲ್ಲ. ಈವರೆಗೆ ಇದ್ದುದನ್ನು ಮುಚ್ಚಿ ದುರ್ಗಾಂಬಾ ಬಳಿ ನೀಡಲಾಗಿದೆ. ದುರ್ಗಾಂಬಾ ಬಳಿ ಫ್ಲೈಓವರ್‌ ಹತ್ತಿದರೆ ಇಳಿಯುವುದು ಎಪಿಎಂಸಿ ಬಳಿಯೇ! ಎಲ್ಲಿಯೂ ಕುಂದಾಪುರ ನಗರವನ್ನು ಸಂಪರ್ಕಿಸಲು ಅವಕಾಶವೇ ಇಲ್ಲ. ಒಂದು ಅಂಡರ್‌ಪಾಸ್‌, ಒಂದು ಫ್ಲೈಓವರ್‌, ಒಂದು ಪಾದಚಾರಿ ಓಡಾಟ ಸುರಂಗ, ಒಂದು ಜಾನುವಾರು ಓಡಾಟ ಸುರಂಗ ಇಷ್ಟನ್ನು ದಾಟಿ ಹೋಗಬೇಕು. ಇವಿಷ್ಟೇ ಎರಡು ಸರ್ವೀಸ್‌ ರಸ್ತೆಗಳ ನಡುವಿನ ಸಂಪರ್ಕ ದಾರಿ. ಉಳಿದಂತೆ ಎಲ್ಲಿಯೂ ಹೆದ್ದಾರಿ ಸಂಪರ್ಕ ವ್ಯವಸ್ಥೆ§ಯೇ ಇಲ್ಲ. ಬಹಳ ದೀರ್ಘ‌ ಸುತ್ತಾಟವಾಗುತ್ತದೆ.

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.