ಕಡಲ ಮಕ್ಕಳಿಂದ 1 ಟನ್ ತೂಕದ ಸಾವಿರ ಗೋಣಿ ಚೀಲವಿಟ್ಟು ತಡೆಗೋಡೆ ನಿರ್ಮಾಣ
Team Udayavani, May 18, 2021, 3:19 AM IST
ಕುಂದಾಪುರ: ತೌಖ್ತೆ ಚಂಡಮಾರುತದಿಂದಾಗಿ ತತ್ತರಿಸಿ ಹೋಗಿ ರುವ ಕುಂದಾಪುರದ ಮರವಂತೆಯ ಕಡಲ ತೀರದ ನಿವಾಸಿಗಳು, ರವಿವಾರ ಸುಮಾರು 200-250 ಮಂದಿ ಮೀನುಗಾರ ಯುವಕರ ಪರಿಶ್ರಮದಿಂದಾಗಿ ಇಲ್ಲಿ ಇನ್ನಷ್ಟು ಕಡಲ್ಕೊರೆತ ಸಂಭವಿಸುವುದು ತಪ್ಪಿದಂತಾಗಿದೆ.
ಕಳೆದ 2 ದಿನಗಳಿಂದ ಉಂಟಾದ ಕಡಲ್ಕೊರೆತದಿಂದಾಗಿ ಮರವಂತೆಯ ಹೊರ ಬಂದರು ಪ್ರದೇಶದ ವಿರುದ್ಧ ದಿಕ್ಕಿನಲ್ಲಿ ಸುಮಾರು 150ರಿಂದ 200 ಮೀ.ನಷ್ಟು ಭೂಪ್ರದೇಶದಷ್ಟು ಭಾಗವನ್ನು ಕಡಲು ಆಕ್ರಮಿಸಿದ್ದು, ರವಿವಾರ ಇದು ಇನ್ನಷ್ಟು ವಿಸ್ತರಿಸುವ ಸಾಧ್ಯತೆಗಳಿತ್ತು. ಆದರೆ ರವಿವಾರ ಇಲ್ಲಿನ 200-250 ಮಂದಿ ಮೀನು ಗಾರರು ಸೇರಿ ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ನಿರಂತರವಾಗಿ 1 ಟನ್ ತೂಕದ ಬೃಹತ್ ಗೋಣಿಚೀಲಗಳಿಗೆ ಎರಡು ಜೆಸಿಬಿಗಳ ಸಹಾಯದಿಂದ ಮರಳನ್ನು ತುಂಬಿಸಿ, ಇನ್ನಷ್ಟು ಕುಸಿಯದಂತೆ ತಡೆಗೋಡೆ ನಿರ್ಮಿಸಿದರು.
250 ಮೀ. ತಡೆಗೋಡೆ ನಿರ್ಮಾಣ
ಮರವಂತೆಯ ಚಂದ್ರ ಖಾರ್ವಿ ಅವರ ಮನೆಯಿಂದ ಆರಂಭಗೊಂಡು, ಎಂ.ಎಸ್. ಖಾರ್ವಿ ಅವರ ಮನೆಯವರೆಗೆ (ಸುಮಾರು 250 ಮೀ. ನಷ್ಟು ದೂರ) ಗೋಣಿ ಚೀಲಗಳನ್ನು ಉದ್ದಕ್ಕೆ ಇಡಲಾಗಿದ್ದು, ಇದರಿಂದ ಇನ್ನಷ್ಟು ಹಾನಿ ಸಂಭವಿಸುವುದು ತಪ್ಪಿದಂತಾಗಿದೆ. ಎಡೆಬಿಡದೆ ಸುರಿಯುತ್ತಿದ್ದ ಮಳೆ, ಅಬ್ಬರದಿಂದ ಅಪ್ಪಳಿಸುತ್ತಿದ್ದ ಅಲೆಗಳನ್ನು ಲೆಕ್ಕಿಸದೆ ಯುವಕರು ಕ್ಷಣಮಾತ್ರದಲ್ಲಿ ಒಗ್ಗಟ್ಟಾಗಿ ಸೇರಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಿದ್ದಾರೆ. ಮೀನುಗಾರ ಯುವಕರ ಈ ಸಮಯಪ್ರಜ್ಞೆಗೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.
ನಿರಂತರ ಮಳೆಯಿಂದಾಗಿ ಚಪ್ಪಡಿ ಕಲ್ಲು ಒಡೆಯುವ ಕಾರ್ಯಕ್ಕೆ ಅಡ್ಡಿಯಾಗಿದ್ದು, ಇದ ರಿಂದಾಗಿ ರವಿವಾರ ಮರವಂತೆಗೆ ಕುಸಿಯುತ್ತಿರುವ ಕಡೆಗೆ ಹಾಕಲು ಕಲ್ಲು ಬಂದಿರಲಿಲ್ಲ. ಇದನ್ನರಿತ ಇಲ್ಲಿನ ಸ್ಥಳೀಯ ಯುವಕರೆಲ್ಲ ಸೇರಿ ಗೋಣಿ ಚೀಲಗಳನ್ನು ಇಟ್ಟು ತಡೆಗೋಡೆ ನಿರ್ಮಿಸಿದ್ದಾರೆ. ಇದರಿಂದ ಇನ್ನಷ್ಟು ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
– ಮೋಹನ್ ಖಾರ್ವಿ, ಶ್ರೀ ರಾಮ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಮರವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
MUST WATCH
ಹೊಸ ಸೇರ್ಪಡೆ
Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ