ಕಡಲ ಮಕ್ಕಳಿಂದ 1 ಟನ್ ತೂಕದ ಸಾವಿರ ಗೋಣಿ ಚೀಲವಿಟ್ಟು ತಡೆಗೋಡೆ ನಿರ್ಮಾಣ
Team Udayavani, May 18, 2021, 3:19 AM IST
ಕುಂದಾಪುರ: ತೌಖ್ತೆ ಚಂಡಮಾರುತದಿಂದಾಗಿ ತತ್ತರಿಸಿ ಹೋಗಿ ರುವ ಕುಂದಾಪುರದ ಮರವಂತೆಯ ಕಡಲ ತೀರದ ನಿವಾಸಿಗಳು, ರವಿವಾರ ಸುಮಾರು 200-250 ಮಂದಿ ಮೀನುಗಾರ ಯುವಕರ ಪರಿಶ್ರಮದಿಂದಾಗಿ ಇಲ್ಲಿ ಇನ್ನಷ್ಟು ಕಡಲ್ಕೊರೆತ ಸಂಭವಿಸುವುದು ತಪ್ಪಿದಂತಾಗಿದೆ.
ಕಳೆದ 2 ದಿನಗಳಿಂದ ಉಂಟಾದ ಕಡಲ್ಕೊರೆತದಿಂದಾಗಿ ಮರವಂತೆಯ ಹೊರ ಬಂದರು ಪ್ರದೇಶದ ವಿರುದ್ಧ ದಿಕ್ಕಿನಲ್ಲಿ ಸುಮಾರು 150ರಿಂದ 200 ಮೀ.ನಷ್ಟು ಭೂಪ್ರದೇಶದಷ್ಟು ಭಾಗವನ್ನು ಕಡಲು ಆಕ್ರಮಿಸಿದ್ದು, ರವಿವಾರ ಇದು ಇನ್ನಷ್ಟು ವಿಸ್ತರಿಸುವ ಸಾಧ್ಯತೆಗಳಿತ್ತು. ಆದರೆ ರವಿವಾರ ಇಲ್ಲಿನ 200-250 ಮಂದಿ ಮೀನು ಗಾರರು ಸೇರಿ ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ನಿರಂತರವಾಗಿ 1 ಟನ್ ತೂಕದ ಬೃಹತ್ ಗೋಣಿಚೀಲಗಳಿಗೆ ಎರಡು ಜೆಸಿಬಿಗಳ ಸಹಾಯದಿಂದ ಮರಳನ್ನು ತುಂಬಿಸಿ, ಇನ್ನಷ್ಟು ಕುಸಿಯದಂತೆ ತಡೆಗೋಡೆ ನಿರ್ಮಿಸಿದರು.
250 ಮೀ. ತಡೆಗೋಡೆ ನಿರ್ಮಾಣ
ಮರವಂತೆಯ ಚಂದ್ರ ಖಾರ್ವಿ ಅವರ ಮನೆಯಿಂದ ಆರಂಭಗೊಂಡು, ಎಂ.ಎಸ್. ಖಾರ್ವಿ ಅವರ ಮನೆಯವರೆಗೆ (ಸುಮಾರು 250 ಮೀ. ನಷ್ಟು ದೂರ) ಗೋಣಿ ಚೀಲಗಳನ್ನು ಉದ್ದಕ್ಕೆ ಇಡಲಾಗಿದ್ದು, ಇದರಿಂದ ಇನ್ನಷ್ಟು ಹಾನಿ ಸಂಭವಿಸುವುದು ತಪ್ಪಿದಂತಾಗಿದೆ. ಎಡೆಬಿಡದೆ ಸುರಿಯುತ್ತಿದ್ದ ಮಳೆ, ಅಬ್ಬರದಿಂದ ಅಪ್ಪಳಿಸುತ್ತಿದ್ದ ಅಲೆಗಳನ್ನು ಲೆಕ್ಕಿಸದೆ ಯುವಕರು ಕ್ಷಣಮಾತ್ರದಲ್ಲಿ ಒಗ್ಗಟ್ಟಾಗಿ ಸೇರಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಿದ್ದಾರೆ. ಮೀನುಗಾರ ಯುವಕರ ಈ ಸಮಯಪ್ರಜ್ಞೆಗೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.
ನಿರಂತರ ಮಳೆಯಿಂದಾಗಿ ಚಪ್ಪಡಿ ಕಲ್ಲು ಒಡೆಯುವ ಕಾರ್ಯಕ್ಕೆ ಅಡ್ಡಿಯಾಗಿದ್ದು, ಇದ ರಿಂದಾಗಿ ರವಿವಾರ ಮರವಂತೆಗೆ ಕುಸಿಯುತ್ತಿರುವ ಕಡೆಗೆ ಹಾಕಲು ಕಲ್ಲು ಬಂದಿರಲಿಲ್ಲ. ಇದನ್ನರಿತ ಇಲ್ಲಿನ ಸ್ಥಳೀಯ ಯುವಕರೆಲ್ಲ ಸೇರಿ ಗೋಣಿ ಚೀಲಗಳನ್ನು ಇಟ್ಟು ತಡೆಗೋಡೆ ನಿರ್ಮಿಸಿದ್ದಾರೆ. ಇದರಿಂದ ಇನ್ನಷ್ಟು ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
– ಮೋಹನ್ ಖಾರ್ವಿ, ಶ್ರೀ ರಾಮ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಮರವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಸಿಧು ಮೂಸೆವಾಲಾ ಹಂತಕರು ಕಾರಿನಲ್ಲಿ ಗನ್ ಹಿಡಿದು ಸಂಭ್ರಮಿಸಿದ ವೀಡಿಯೋ ವೈರಲ್
ಚಾರ್ಮಾಡಿ : ರಸ್ತೆ ಮಧ್ಯೆಯೇ ಮೋಜು ಮಸ್ತಿ, ಪ್ರವಾಸಿಗರ ಪುಂಡಾಟಕ್ಕೆ ವಾಹನ ಸವಾರರು ಸುಸ್ತು
ಭಾರಿ ಮಳೆಗೆ ಹೆಬ್ಬಾಳ ಸೇತುವೆ ಮುಳುಗಡೆ : ಕಳಸ – ಹೊರನಾಡು ಸಂಪರ್ಕ ಕಡಿತ
ಇಬ್ಬರು ಶಸ್ತ್ರ ಸಜ್ಜಿತ ಲಷ್ಕರ್ ಉಗ್ರರನ್ನು ಹಿಡಿದು ಕೊಟ್ಟ ಕಾಶ್ಮೀರದ ಗ್ರಾಮಸ್ಥರು
ಜಿಂಕೆಯನ್ನು ನುಂಗಿದ್ದ 80 ಕೆ.ಜಿ. ತೂಕದ 14 ಅಡಿ ಉದ್ದದ ಹೆಬ್ಬಾವು!
ಹೊಸ ಸೇರ್ಪಡೆ
ಹೆದ್ದಾರಿ ಇಲಾಖೆ ಕೆಲಸವನ್ನು ಮಾಡಿದ ಶಾಸಕ ಡಾ| ಭರತ್ ಶೆಟ್ಟಿ!
ಕರ್ನಾಟಕ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆಯಾದ ಪಿಎಸ್ಐ ನೇಮಕ ಅಕ್ರಮ ಪ್ರಕರಣ
ನೀರಿನ ಬಿಲ್ ವಿತರಣೆ ಮತ್ತೆ ಹೊರಗುತ್ತಿಗೆಗೆ!
ಹಿಂದೂ ದೇವತೆಗಳ ಫೋಟೋಗಳಿರುವ ಪೇಪರ್ ಪ್ಯಾಕ್ ನಲ್ಲಿ ಕೋಳಿ ಮಾಂಸ ಮಾರಾಟ, ವ್ಯಕ್ತಿ ಬಂಧನ
ಉಳ್ಳಾಲದಲ್ಲಿ ಮಳೆ ಅವಾಂತರ: 20ಕ್ಕೂ ಅಧಿಕ ಮನೆಗಳು ಜಲಾವೃತ; ಮನೆಗೆ ಮರ ಬಿದ್ದು ಹಾನಿ