ಲ್ಯಾಪ್‌ಟಾಪ್‌: ದೀರ್ಘ‌ ಬಾಳಿಕೆಗೆ ಮೇಂಟೆನೆನ್ಸ್‌ ಟಿಪ್ಸ್‌


Team Udayavani, Jun 22, 2020, 4:59 AM IST

laptop-tips

1 ಟ್ರಾವೆಲ್‌ ಮಾಡುವಾಗ ಲ್ಯಾಪ್‌ಟಾಪ್‌ ಒಳಗೆ ಸಿ.ಡಿ. ಡ್ರೈವ್‌, ಡಿವಿಡಿ, ಪೆನ್‌ ಡ್ರೈವ್‌ ಯಾವುದೂ ಅಟ್ಯಾಚ್‌ ಆಗಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಅಲ್ಲದೆ, ಲ್ಯಾಪ್‌ ಟಾಪನ್ನು ಸ್ಲಿಪ್‌ ಮೋಡ್‌ನ‌ಲ್ಲಿ ಇಟ್ಟು ಟ್ರಾವೆಲ್‌ ಮಾಡಬಾರದು. ಪೂರ್ತಿಯಾಗಿ ಶಟ್‌ಡೌನ್‌ ಮಾಡಿದ ನಂತರವೇ ಲ್ಯಾಪ್‌ಟಾಪನ್ನು ಕ್ಯಾರಿ ಮಾಡಬೇಕು.

2 ಲ್ಯಾಪ್‌ಟಾಪ್‌ನ ಸ್ಕ್ರೀನ್‌ ಬಹಳ ಸೂಕ್ಷ್ಮಾವಾದ ಭಾಗ. ಹಾಗಾಗಿ, ಅದಕ್ಕೆ ಸ್ಕ್ರಾಚ್‌ ಮತ್ತು ಪೆಟ್ಟುಗಳು ಬೀಳದಂತೆ ಎಚ್ಚರ ವಹಿಸಬೇಕು. ಅದಕ್ಕೆ ಹಾನಿಯುಂಟಾದಲ್ಲಿ ರಿಪೇರಿ ಮಾಡಲು ಬರುವುದಿಲ್ಲ, ಅದನ್ನು ಬದಲಾಯಿಸುವುದೊಂದೇ ಮಾರ್ಗ.

3 ಲ್ಯಾಪ್‌ಟಾಪನ್ನು ಬಲವಾದ ಆಯಸ್ಕಾಂತೀಯ ಪ್ರಭಾವ ಹೊಂದಿರುವ ವಸ್ತುಗಳ ಸನಿಹ ಇಡಬಾರದು. ಅಂದರೆ ಟಿ.ವಿ, ದೊಡ್ಡ ದೊಡ್ಡ ಸ್ಪೀಕರ್‌ ಮತ್ತು ಹೈಟೆಕ್‌ ರೆಫ್ರೀಜರೇಟರ್‌ನಂಥ ವಸ್ತುಗಳಿಂದ ದೂರವಿದ್ದರೆ ಒಳ್ಳೆಯದು.

4 ಬಳಸದೇ ಇದ್ದಾಗ ಲ್ಯಾಪ್‌ಟಾಪನ್ನು ಮುಚ್ಚಿಯೇ ಇಡಬೇಕು. ಇದರಿಂದ ಕೀ ಬೋರ್ಡ್‌ ಮೇಲೆ ಧೂಳು ಶೇಖರಣೆಯಾಗುವುದು ತಪ್ಪುತ್ತದೆ. ಜೊತೆಗೆ ಕಾಫಿ, ನೀರು ಮತ್ತಿತರೆ ಪದಾರ್ಥಗಳು ಅವುಗಳ ಮೇಲೆ ಬೀಳುವುದೂ ತಪ್ಪುತ್ತದೆ.

5 ಲ್ಯಾಪ್‌ಟಾಪ್‌ಗ್ಳು, ಡೆಸ್ಕ್‌ಟಾಪ್‌ ಕಂಪ್ಯೂಟರುಗಳಿಗಿಂತ ಬೇಗನೆ ಓವರ್‌ ಹೀಟ್‌ ಆಗುತ್ತವೆ. ಆದ್ದರಿಂದ ಲ್ಯಾಪ್‌ಟಾಪನ್ನು ಯಾವಾಗಲೂ ಸಮತಟ್ಟಾದ ಜಾಗದ ಮೇಲೆಯೇ ಇಡಬೇಕು. ದಿಂಬು, ಹಾಸಿಗೆ, ಬಟ್ಟೆ ಮೇಲ್ಗಡೆ ಇಡಬಾರದು. ಏಕೆಂದರೆ ಲ್ಯಾಪ್‌ಟಾಪ್‌ ಅಡಿಭಾಗದಲ್ಲಿ ಶಾಖ ಹೊರಹೋಗಲು ವೆಂಟಿಲೇಟರ್‌ ವ್ಯವಸ್ಥೆ ರೂಪಿಸಿರುತ್ತಾರೆ. ಅದು ಮುಚ್ಚಿ ಹೋಗದಂತೆ ನೋಡಿಕೊಳ್ಳಬೇಕು.

6 ಲ್ಯಾಪ್‌ಟಾಪ್‌, ಪೋರ್ಟೆಬಲ್‌ ಕಂಪ್ಯೂಟರ್‌ ನಿಜ. ಎಲ್ಲಿ ಬೇಕಾದಲ್ಲಿ ಅದನ್ನು ಕೊಂಡೊಯ್ದು ಕೆಲಸ ಮಾಡಿಕೊಳ್ಳಬಹುದು. ಆದರೆ ಅಲ್ಲಿನ ಪರಿಸರದ ಬಗ್ಗೆ ಗಮನ ವಹಿಸಿ. ಉದಾಹರಣೆಗೆ, ಬೀಚ್‌ಗೆ ಲ್ಯಾಪ್‌ಟಾಪ್‌ ಕೊಂಡೊಯ್ದರೆ,  ಅದರೊಳಕ್ಕೆ ಮರಳು ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ, ಅಡುಗೆ ಮನೆಗೆ ಕೊಂಡೊಯ್ದರೆ, ನೀರು ಮತ್ತಿತರ ದ್ರವ ಪದಾರ್ಥಗಳು ಸೇರುವ ಸಾಧ್ಯತೆ ಇರುತ್ತದೆ.

7 ಲ್ಯಾಪ್‌ಟಾಪ್‌ಗೆ ಪಾಸ್‌ವರ್ಡ್‌ ಸೆಟ್‌ ಮಾಡಲು ಮರೆಯದಿರಿ. ಎಲ್ಲೆಂದರಲ್ಲಿ ಕೊಂಡೊಯ್ಯುವುದರಿಂದ, ನಮಗೆ ಗುರುತು ಪರಿಚಯವಿರದ ವ್ಯಕ್ತಿಗಳು ಅದನ್ನು ಬಳಸುವ ಸಾಧ್ಯತೆ ಇರುತ್ತದೆ. ಪಾಸ್‌ವರ್ಡ್‌ ಹಾಕುವುದರಿಂದ ಅಪರಿಚಿ ತರು  ಲ್ಯಾಪ್‌ಟಾಪ್‌ ಬಳಸುವ ಮುನ್ನ ಪಾಸ್‌ವರ್ಡ್‌ ಕೇಳಿಕೊಂಡೇ ಬಳಸುವಂತಾಗುತ್ತದೆ. ಇದರಿಂದ ಯಾರು ಬಳಸುತ್ತಿದ್ದಾರೆ ಎಂಬುದು ತಿಳಿದೇ ತಿಳಿಯುತ್ತದೆ.

8 ಲ್ಯಾಪ್‌ಟಾಪ್‌ ಕ್ಯಾರಿ ಮಾಡುವಾಗ ಕುಶನ್‌ ಇರುವ ಬ್ಯಾಗಿನಲ್ಲಿಯೇ ಕೊಂಡೊಯ್ಯಿರಿ. ಇದರಿಂದ ಲ್ಯಾಪ್‌ಟಾಪ್‌ಗೆ ಧಕ್ಕೆ ತಾಗುವುದಿಲ್ಲ.

ಟಾಪ್ ನ್ಯೂಸ್

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.