ಕನ್ನಡದ ಜತೆ ಇಂಗ್ಲಿಷ್ ಕಲಿಕೆ ಉತ್ತಮ ನಡೆ: ಸುರೇಶ್ ಕುಮಾರ್
Team Udayavani, Mar 6, 2021, 10:28 PM IST
ಸುಳ್ಯ: ಎಷ್ಟೋ ಶಾಲೆಗಳಲ್ಲಿ ಕನ್ನಡವೂ ಕಲಿಯಲ್ಲ ಇಂಗ್ಲಿಷ್ ಕೂಡ ಬರಲ್ಲ ಎಂಬ ಪರಿಸ್ಥಿತಿ ಇದೆ. ಆದರೆ ಸ್ನೇಹ ಶಾಲೆಯ ಕನ್ನಡದಲ್ಲೇ ಕಲಿಯಿರಿ ಇಂಗ್ಲಿಷನ್ನೂ ಕಲಿಯಿರಿ ಎಂಬ ಧ್ಯೇಯ ವಾಕ್ಯ ಉತ್ತಮವಾಗಿದ್ದು ಇತರರಿಗೂ ಮಾದರಿಯಾಗುವಂತಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಸ್ನೇಹ ಶಾಲೆಯ ಬೆಳ್ಳಿಹಬ್ಬ ಮತ್ತು ಚಂದ್ರಶೇಖರ ದಾಮ್ಲೆ ಅವರ ಸಮ್ಮಾನ ಕಾರ್ಯಕ್ರಮದಲ್ಲಿ ಬೆಳ್ಳಿ ಹಬ್ಬ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಸಚಿವ ಎಸ್. ಅಂಗಾರ ಅವರು ಡಾ| ಚಂದ್ರಶೇಖರ ದಾಮ್ಲೆ ಅವರನನ್ನು ಸಮ್ಮಾನಿಸಿ, ನೆಲದ ನಂಟು ಎಂಬ ದಾಮ್ಲೆ ಅವರ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಸ್ನೇಹ ಸಂಸ್ಥೆಯಂಥ ಅನೇಕ ಶಿಕ್ಷಣ ಸಂಸ್ಥೆಗಳ ನಿರ್ಮಾಣದ ಅಗತ್ಯ ಇದೆ ಎಂದರು.
ಚಂದ್ರಶೇಖರ ದಾಮ್ಲೆ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಕಲಿತರೆ ಜೀವನ ದಲ್ಲಿ ಸೋಲುತ್ತಾರೆ ಎಂಬುದು ಸರಿಯಲ್ಲ ಎಂದು ಹೇಳಿದರು.
ಡಾ| ನರೇಂದ್ರ ರೈ ದೇರ್ಲ ಅಭಿನಂದನ ಭಾಷಣ ಮಾಡಿದರು. ದಾಮ್ಲೆ ಅಭಿನಂದನ ಸಮಿತಿ ಕಾರ್ಯಾಧ್ಯಕ್ಷ ಸುಧಾಕರ ರೈ ಮಾತನಾಡಿದರು. ವಿಶ್ರಾಂತ ಪ್ರಾಂಶುಪಾಲ ಪ್ರೊ| ಎಂ. ಬಾಲಚಂದ್ರ ಗೌಡ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಪುರಸ್ಕೃತ ಡಾ| ಗಿರೀಶ್ ಭಾರದ್ವಾಜ್, ನ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಮುಖ್ಯ ಶಿಕ್ಷಕಿ ಜಯಲಕ್ಷ್ಮೀ ದಾಮ್ಲೆ , ಡಾ| ವಿದ್ಯಾಶಾಂಭವ, ಡಿ.ಡಿ.ಪಿ.ಐ. ಮಲ್ಲೇಸ್ವಾಮಿ ಮತ್ತಿತರರಿದ್ದರು. ರಂಗನಾಥ ರಾವ್ ಸ್ವಾಗತಿಸಿದರು.
ಅಭಿನಂದನ ಗ್ರಂಥ
ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎಂ.ಮೋಹನ ಆಳ್ವ ಅಭಿನಂದನ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿ, ಖಾಸಗಿ ಶಿಕ್ಷಣ ಕ್ಷೇತ್ರಕ್ಕೆ ಕೋಟಿ ಕೋಟಿ ರೂ. ಬಂಡವಾಳ ಹೂಡುವವರು ಕನ್ನಡ ಮಾಧ್ಯಮದ ಶಾಲೆ ತೆರೆಯುವ ಮನಸ್ಸು ಮಾಡಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಪಾಯಕಾರಿ ಮೆಲ್ಕಾರ್ ಜಂಕ್ಷನ್ : ಟ್ರಾಫಿಕ್ ಪೊಲೀಸ್ ನಿಯೋಜಿಸಲು ಆಗ್ರಹ
1 ಕೋ.ರೂ.ಗಳಲ್ಲಿ 40 ಶ್ಮಶಾನಗಳ ಪುನಶ್ಚೇತನ :ಧರ್ಮಸ್ಥಳ ಯೋಜನೆಯಿಂದ ರುದ್ರಭೂಮಿಗಳಿಗೆ ಕಾಯಕಲ್ಪ
ವಿಟ್ಲ : ನಿಯಂತ್ರಣ ತಪ್ಪಿ 20 ಅಡಿ ಉರುಳಿದ ಉರುಳಿದ ಸ್ಕೂಟರ್ ಅಪಾಯದಿಂದ ಪಾರಾದ ಮಹಿಳೆ
ಕಡಬ; ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವು
“ಮುಗುಳಿ ಬತ್ಂಡಾ ಬರ್ಪೆ..!” ಎಣ್ಮೂರು ನೇಮ ಸಂದರ್ಭದಲ್ಲಿ ದೈವದ ನುಡಿಯೇನು?
MUST WATCH
ಹೊಸ ಸೇರ್ಪಡೆ
‘ಮುತ್ತುರಾಜ್’ ಆಗಿದ್ದವರು ‘ರಾಜ್ ಕುಮಾರ್’ ಆಗಿದ್ದು ಹೇಗೆ?
‘ಪೆಪೆ’ಗೆ ಕಾಜಲ್ ಹೀರೋಯಿನ್!: ಫಸ್ಟ್ಲುಕ್ನಲ್ಲಿ ಗಮನ ಸೆಳೆದ ವಿಆರ್ಕೆ ಹೊಸಚಿತ್ರ
ವಾಟ್ಸಾಪ್ ಪಿಂಕ್ ಹೆಸರಿನಲ್ಲಿ ದಾಳಿಯಿಟ್ಟ ಹ್ಯಾಕರ್ಸ್: ನೀವು ಲಿಂಕ್ ಕ್ಲಿಕ್ ಮಾಡಿದ್ದೀರಾ ?
ನಿಮ್ಮ ಇಂದಿನ ಗ್ರಹಬಲ: ಹಿರಿಯರ ಉಪದೇಶಗಳಿಗೆ ಅಸಡ್ಡೆ ತೋರಿಸದೆ ಸ್ಪಂದಿಸಿರಿ
ಜಾರ್ಜ್ ಫ್ಲಾಯ್ಡ್ ಸಾವು ಪ್ರಕರಣ: ಬಿಳಿಯ ಅಧಿಕಾರಿ ಡೆರಿಕ್ ಚೌವೀನ್ ತಪ್ಪಿತಸ್ಥ ಎಂದ ಕೋರ್ಟ್!