ನಾಯಿಯೆಂದು ಚಿರತೆಯನ್ನು ಬಾವಿಯಿಂದ ಮೇಲೆತ್ತಿದರು…!
Team Udayavani, Sep 29, 2021, 8:42 PM IST
ಬ್ರಹ್ಮಾವರ: ನಾಯಿಯೆಂದು ಭಾವಿಸಿ ಚಿರತೆ ಮರಿಯನ್ನು ಬಾವಿಯಿಂದ ಮೇಲೆತ್ತಿದ ಘಟನೆ ಬುಧವಾರ ಬೆಳಗ್ಗೆ ಚಾಂತಾರು ದೇವುಬೈಲಿನಲ್ಲಿ ನಡೆದಿದೆ.
ಮಂಗಳವಾರ ರಾತ್ರಿಯೇ ಬಿದ್ದಿದ್ದ ಚಿರತೆಯನ್ನು ಬೆಳಗ್ಗೆ ಮನೆಯವರು ಗಮನಿಸಿ ನಾಯಿ ಎಂದು ಭಾವಿಸಿ ರಕ್ಷಿಸಲು ಮುಂದಾದರು. ಹಗ್ಗದ ಮೂಲಕ ಬಾವಿಗೆ ಕೊಡಪಾನ ಇಳಿಸಿ ಚಿರತೆಯನ್ನು ಮೇಲಕ್ಕೆ ಎತ್ತಿದ್ದಾರೆ. ಮೇಲೆ ಬಂದ ಚಿರತೆ ಮರಿ ಮನೆಯ ಸಿಟ್ಔಟ್ ಮೂಲಕ ತೆರಳಿ ಸ್ಲ್ಯಾಬ್ ನ ಮೆಟ್ಟಿಲ ಅಡಿಯ ಶೆಡ್ನಲ್ಲಿ ಅಡಗಿ ಕುಳಿತುಕೊಂಡಿತು. ಆಗ ಚಿರತೆ ಎನ್ನುವುದು ತಿಳಿದು ಮನೆಯವರು, ಸ್ಥಳೀಯರು ಅರಣ್ಯ ಇಲಾಖೆಯವರಿಗೆ ವಿಚಾರ ತಿಳಿಸಿದರು.
ಇದನ್ನೂ ಓದಿ:ಶ್ರೀರಂಗಪಟ್ಟಣ : ಪಾಲಹಳ್ಳಿ ಗ್ರಾಮದಲ್ಲಿ ಮೇಕೆಗಳ ನಿಗೂಢ ಸಾವು ಪ್ರಕರಣ : ಶಾಸಕರಿಂದ ನೆರವು
ಬಳಿಕ ಬಲೆ ಎಸೆದು 8 ತಿಂಗಳ ಹೆಣ್ಣು ಚಿರತೆಯನ್ನು ಬೋನಿಗೆ ಸೇರಿಸಿ ಹುಲಿಕಲ್ ಘಾಟಿಗೆ ಬಿಡಲಾಯಿತು.ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಹರೀಶ್ ಕೆ., ಇಲಾಖೆಯ ಗುರುರಾಜ್ ಕೆ. ದೇವರಾಜ್ ಪಾಣ, ರಮೇಶ್, ಸುರೇಶ್, ಕೇಶವ, ಮಂಜುನಾಥ್, ಜೋಯ್, ಪೊಲೀಸ್ ಸಿಬಂದಿ ಪಾಲ್ಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ