ಪ್ರಕೃತಿಯ ಅಗಾಧ ಶಕ್ತಿಯನ್ನರಿತು ನಾವು ಧನ್ಯರಾಗೋಣ


Team Udayavani, Jul 17, 2021, 6:30 AM IST

ಪ್ರಕೃತಿಯ ಅಗಾಧ ಶಕ್ತಿಯನ್ನರಿತು ನಾವು ಧನ್ಯರಾಗೋಣ

ಗಾಳಿಯು ಬೆಳೆಯನ್ನು ಬಿತ್ತಿದರೆ, ಸೂರ್ಯನು ನೀರನ್ನು ಆವಿಯನ್ನಾಗಿಸು ತ್ತಾನೆ, ಮತ್ತದೇ ಗಾಳಿಯಿಂದ ಮೋಡಗಳು ವರ್ಷಧಾರೆಯನ್ನೇ ಭೂಮಿಗೆ ಸುರಿಸು ತ್ತವೆ. ಹೀಗೆ ಸುರಿಯುವ ಮಳೆ, ಬೆಳೆಯ ರೂಪ ತಾಳಿ ನಮಗೇ ಆಹಾರವಾಗುತ್ತದೆ. ಇದು ಪ್ರಕೃತಿಯೂ ಮನುಷ್ಯನೂ ಹೊಂದ ಬೇಕಾದ ಅವಿನಾಭಾವ ಅನುಬಂಧ. ಪ್ರಕೃತಿಯ ಶಕ್ತಿ ಅಗಾಧ, ಅದನ್ನರಿತು ನಾವು ಧನ್ಯರಾಗಬೇಕು.

‘The happiest man is he who learns from nature the lesson of worship”  ಎಮರ್ಸನ್‌ ಎಂಬ 19ನೆಯ ಶತಮಾನದ ಕವಿ, ತಣ್ತೀಜ್ಞಾನಿ ನೇಚರ್‌ ಎಂಬ ಪ್ರಬಂಧದಲ್ಲಿ ಖrಚnscಛಿnಛಛಿnಠಿಚl -ಅಚಿಂತ್ಯ ಭಾವದಿಂದ ಹೀಗೆ ಪ್ರಕೃತಿಯನ್ನು ವರ್ಣಿಸಿದ್ದಾರೆ. ಪ್ರಕೃತಿಗೆ ಜಡತ್ವವಿಲ್ಲ, ತನ್ನದೇ ಆತ್ಮವನ್ನು ಹೊಂದಿ ರುವ ಅದು ಹರಿಯುವ ನೀರಿನಂತೆ ನಿರಂತರ, ಅದರ ಗುಣವೇ ಹಾಗೆ.

ಇಂತಹ ಆತ್ಮಶಕ್ತಿಯುಳ್ಳ ಪ್ರಕೃತಿಯನ್ನು ಅಧ್ಯಾತ್ಮದ ಪ್ರತ್ಯೇಕತೆಯ ನೆಲೆಯಲ್ಲೇ ಕಾಣಬೇಕು. ಧಾರ್ಮಿಕ ನೆಲೆಯಲ್ಲಿಯೂ ಪ್ರಕೃತಿಗೆ ವಿಶೇಷ ಸ್ಥಾನಮಾನ, ಮನ್ನಣೆ, ಗೌರವವಿದೆ. ಈ ಕಾರಣದಿಂದಾಗಿಯೇ ಪ್ರಕೃತಿ ಮಾತೆಯ ವಿವಿಧ ಅಂಗಗಳನ್ನು ಪುರಾತನ ಕಾಲದಿಂದಲೂ ಆಯಾಯ ಋತುಮಾನಗಳಿಗನುಸಾರ ಪೂಜಿಸುತ್ತ ಬರಲಾಗಿದೆ. ಇದೇ ವೇಳೆ ಪ್ರಕೃತಿಯ ಮೇಲಣ ಮಾನವನ ದೌರ್ಜನ್ಯ ಮಿತಿ ಮೀರುತ್ತಲೇ ಸಾಗಿದೆ.

ಜನ್ಮ ತಳೆವ ಮಗು ಮೊದಲ ತೊದಲ ನುಡಿಗಳನ್ನು ತಾಯಿಯಿಂದ ಕಲಿತರೆ ಪ್ರಕೃತಿಯು ಅವನ ಎರಡನೆಯ ಮಾತೆ. ಸೃಷ್ಟಿಯ ಅದ್ಭುತ ಸೌಂದರ್ಯಕ್ಕೆ, ಅದರ ವೈಶಾಲ್ಯಕ್ಕೆ ಮನುಷ್ಯ ಶರಣಾಗಬೇಕು. ಪ್ರಕೃತಿ ಮನುಷ್ಯನಿಗೆ ನೀಡಿರುವ ಕೊಡುಗೆ ಅಪಾರ. ಆದರೆ ಮನುಷ್ಯನ ಸ್ವಾರ್ಥಪರತೆ ಅಸಹನೀಯ. ಪ್ರಕೃತಿ ಮೇಲಣ ಪ್ರೇಮ ಕೇವಲ ತೋರಿಕೆಗೆ, ಮಾತಿಗೆ ಸೀಮಿತ ವಾಗುತ್ತಿದೆಯೇ ವಿನಾ ಅದು ಅಕ್ಷರಶಃ ಕಾರ್ಯರೂಪಕ್ಕೆ ಬಂದಿಲ್ಲ.

ಪ್ರಕೃತಿಯ ಮಡಿಲಲ್ಲಿ ಬೆಳೆದ ಮಾನವ ಪ್ರಕೃತಿಯ ವಿನಾಶವನ್ನು ತಡೆಯದಾಗಿರುವುದು ವಿಷಾದ. ಮನುಷ್ಯ ಮಾತುಗಳ ಮೂಲಕ ಸಂವಹನ ಮಾಡಿದರೆ ಪ್ರಕೃತಿ ಯದು ಭೂಮಿಗೀತೆ. ಅದೆಲ್ಲೋ ಕಾಡಿ ನಲ್ಲಿ ಕಲ್ಲುಗಳ ನಡುವೆ ಹರಿಯುವ ನೀರು ನೀರವ ಮೌನ ಕಲಕಿ ನಾನಿಲ್ಲಿರುವೆ! ಎಂದು ಆಲಾಪಿಸುತ್ತದೆ.

ಪ್ರಕೃತಿಯ ಒಂದೇ ಒಂದು ಸ್ಪರ್ಶ ಈ ಪ್ರಪಂಚವನ್ನೇ ಬಂಧಿಸುತ್ತದೆ ಎಂದು ಶೇಕ್ಸ್‌ಪಿಯರ್‌ ಹೇಳಿದ್ದಾನೆ. ಸಾಗುವ ಹಾದಿ ದೂರವಾದರೂ ಇರುವೆಗಳು ಸಾಲಿನಲ್ಲಿಯೇ ಸಂಚರಿಸುವ ಶಿಸ್ತನ್ನು ಅವುಗಳಿಗೆ ಕಲಿಸಿದವರ್ಯಾರು?

ಮನುಷ್ಯನಿಗೂ ಪ್ರಕೃತಿಯ ಪ್ರಾಣಿಪಕ್ಷಿ ಗಳಿಗೂ ಇರುವ ಒಂದೇ ವ್ಯತ್ಯಾಸವೆಂದರೆ ಮನುಷ್ಯ ಸ್ವಾರ್ಥಿ, ಪ್ರಾಣಿಪಕ್ಷಿಗಳು ನಿಸ್ವಾರ್ಥಿಗಳು. ಪ್ರಕೃತಿಯಿಂದ ನಾವು ಕಲಿತದ್ದೇನು? ಪ್ರಕೃತಿಗೆ ನಾವು ಕೊಟ್ಟ ದ್ದೇನು? ಭೋಗ ಜೀವನದಿಂದ ಪ್ರಕೃತಿಯ ವಿನಾಶಕ್ಕೆ ಕಾರಣನಾದ ಮನುಷ್ಯ ನೆಲ,
ಜಲ ಮತ್ತು ಗಾಳಿಯಲ್ಲಿ ವಿಷ ತುಂಬಿದ.

ಇದರ ಫ‌ಲವನ್ನು ನಾವಿಂದು ಉಣ್ಣುತ್ತಿ ದ್ದೇವೆ. ಜಾಗತಿಕ ತಾಪಮಾನ ಹೆಚ್ಚುತ್ತಿದೆ.
ವರ್ಷಗಳುರುಳಿದಂತೆಯೇ ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತಲೇ ಸಾಗಿವೆ. ಪ್ರತಿ ಯೊಂದೂ ದುರಂತ ಸಂಭವಿಸಿದಾಗಲೂ ಕೆಲವು ದಿನ, ವಾರಗಳ ಕಾಲ ಈ ಬಗ್ಗೆ ತಲೆಕೆಡಿಸಿಕೊಳ್ಳುವ ನಾವು ಮತ್ತದೇ ಹಳೇ ಚಾಳಿಯನ್ನು ಪುನರಾವರ್ತಿಸುತ್ತೇವೆ. ನಮಗೆ ಇದು ಖಯಾಲಿಯಂತಾಗಿದೆ. “ನಿಸ್ವಾರ್ಥನಾಗಿ ಬದುಕಿ ಸಕಲ ಪ್ರಾಣಿಗಳಿಗೆ ದಯೆ ತೋರಿ ಸಂಯಮದಿಂದಿರು’ ಎನ್ನುವ ಸಂದೇಶವನ್ನು ಸಾರುವ ಪ್ರಕೃತಿಯ ಕರೆಗೆ ನಾವು ಓಗೊಡಬೇಕು.

ಇನ್ನೂ ಅಪಾರವಾಗಿರುವ ವನಸಿರಿಗಳ ಸಂರಕ್ಷಿಸಿ, ಪಕ್ಷಿಸಂಕುಲವನ್ನು ಪೋಷಿಸ ಬೇಕು. ಬದುಕೆಂದರೆ ಮನುಷ್ಯರು ಒಟ್ಟಾಗಿ ಒಗ್ಗಟ್ಟಿನಿಂದ ಮಾತ್ರ ಜೀವಿಸು ವುದಲ್ಲ, ಪ್ರಕೃತಿಯೊಡನೆ ಬೆರೆತು ಯೋಗಿ ಯಂತೆ ಜೀವಿಸುವುದು. ಅನ್ಯರಿಗೆ ಕರುಣೆ ತೋರುವುದು, ಕೈಲಾದಷ್ಟು ನೆರವಾಗು ವುದು ನಮ್ಮೆಲ್ಲರ ಕರ್ತವ್ಯ.

- ಮಯೂರಲಕ್ಷ್ಮೀ

ಟಾಪ್ ನ್ಯೂಸ್

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.