ಜೀವನದಲ್ಲಿ ಎದುರಾಗುವ ಸೋಲುಗಳನ್ನು ಮೆಟ್ಟಿ ನಿಲ್ಲೋಣ…


Team Udayavani, Nov 18, 2021, 6:37 AM IST

ಜೀವನದಲ್ಲಿ ಎದುರಾಗುವ ಸೋಲುಗಳನ್ನು ಮೆಟ್ಟಿ ನಿಲ್ಲೋಣ…

ಜೀವನ ಎನ್ನುವುದು ಸದಾ ಏಳುಬೀಳುಗಳಿಂದ ಕೂಡಿದ ಒಂದು ಸುಂದರವಾದ ಅಂಗಳ. ಈ ಅಂಗಳದಲ್ಲಿ ನಾವು ಸದಾ ಕ್ರಿಯಾಶೀಲರಾಗಿ, ಚೇತ ನಾಯುಕ್ತವಾಗಿ ಆಡಲೇ ಬೇಕಾಗುತ್ತದೆ. ಜೀವನವೆನ್ನುವ ಆಟದಲ್ಲಿ ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಸಮಚಿತ್ತವನ್ನು ಕಾಯ್ದುಕೊಳ್ಳಬೇಕು. ಆಟದಲ್ಲಿ ಸೋಲು-ಗೆಲುವು ಸಾಮಾನ್ಯ. ಸೋತಾಗ ಆಟದಿಂದ ಹಿಂದೆ ಸರಿಯುವುದು, ತನ್ನ ಜೀವನ ಮುಗಿದೇ ಹೋಯಿತು, ತಾನು ಹುಟ್ಟಿದ್ದೇ ವ್ಯರ್ಥ, ಏನೂ ಸಾಧಿಸದಿದ್ದ ಮೇಲೆ ಬದುಕಿದ್ದು ಪ್ರಯೋಜನವೇನು? ಎನ್ನುವಂತಹ ವೃಥಾ ಪ್ರಲಾಪ ಸರಿಯಲ್ಲ.

ಜೀವನ ಎನ್ನುವುದು ದೇವರು ನಮಗೆ ನೀಡಿದ ಅತ್ಯಮೂಲ್ಯವಾದ ಕಾಣಿಕೆ. ಸೋತಾಗ ಕುಗ್ಗದೆ ಆ ಸೋಲಿಗೆ ಕಾರಣ ವೇನು? ಎನ್ನುವುದನ್ನು ಆತ್ಮವಿಮರ್ಶೆ ಮಾಡಿಕೊಳ್ಳೋಣ. ಸೋತಾಗ ಕುಗ್ಗ ಬಾರದು. ಹಲವು ಬಾರಿ ಸೋತರೂ ಗೆಲುವಿನ ದಾರಿಯ ಚಿಕ್ಕ ಬೆಳಕು ನಮಗೆ ಗೋಚರಿಸಿಯೇ ಗೋಚರಿಸುತ್ತದೆ. ಆ ಚಿಕ್ಕ ಬೆಳಕೇ ಇಡೀ ಜಗತ್ತನ್ನು ಬೆಳಗುವ ನಂದಾದೀಪವಾಗುತ್ತದೆ. ಇದಕ್ಕಾಗಿ ಆತ್ಮವಿಶ್ವಾಸ, ಸಾಧಿಸುವೆನೆಂಬ ಛಲ, ನಮ್ಮನ್ನು ನಾವೇ ಮೇಲೆತ್ತುವ ಮನೋ ಬಲವನ್ನು ಮೈಗೂಡಿಸಿಕೊಳ್ಳಬೇಕು. ಇವುಗಳು ನಮ್ಮನ್ನು ಗೆಲುವಿನತ್ತ ಕೊಂಡೊಯ್ಯುತ್ತವೆ.

ವರ್ಧಮಾನ ಮಹಾವೀರ ಮಹಾ ಜ್ಞಾನಿಯಾಗಲು 12 ವರ್ಷಗಳ ಕಾಲ ತಪಸ್ಸು ಮಾಡಬೇಕಾಯಿತು. ಹಾಗೆಯೇ ಗೆಲುವು ಎನ್ನುವುದು ರಾತ್ರಿ ಕಳೆಯುವು ದರೊಳಗೆ ಸಿಗುವಂಥದ್ದಲ್ಲ. ಜೀವನದಲ್ಲಿ ಗೆಲುವು ಸಾಧಿಸಲು ಕಠಿನ ಪರಿಶ್ರಮ ಅಗತ್ಯ. ದೃಢ ಚಿತ್ತ ಆವಶ್ಯಕ. ಅರ್ಜುನ ಹೇಗೆ ಹಕ್ಕಿಯ ಕಣ್ಣಿಗೆ ಗುರಿ ಇಟ್ಟು ಸಫ‌ಲತೆಯನ್ನು ಸಾಧಿಸಿ ಬಿಲ್ವಿದ್ಯೆಯಲ್ಲಿ ಪರಿಪೂರ್ಣತೆಯನ್ನು ಸಾಧಿಸುತ್ತಾನೋ ಹಾಗೆ ನಾವು ಗುರಿಯೆಡೆಗೆ ದೃಢಸಂಕಲ್ಪ ಹೊಂದಬೇಕು. “ಸೋಲು’ ನಮ್ಮ ಜೀವನವನ್ನು ಮುಗಿಸುವಂತಾಗ ಬಾರದು, ಮುಳುಗಿಸುವಂತಾಗ ಬಾರದು. ಜೀವನದಲ್ಲಿ ಸತತ ಸೋಲನ್ನು ಅನುಭವಿಸಿದಾಗಲೂ ಜೀವನದ ಬಗ್ಗೆ ಆಸಕ್ತಿಯನ್ನು ಕಳೆದುಕೊಳ್ಳದೇ ಆಶಾವಾದಿಗಳಾಗಿರೋಣ. ನೀರಿನಲ್ಲಿ ಮುಳುಗುತ್ತಿರುವವನಿಗೆ ಚಿಕ್ಕ ಹುಲ್ಲು ಕಡ್ಡಿ ಹೇಗೆ ಆಸರೆಯಾಗಬಲ್ಲುದೋ ಹಾಗೆಯೇ ಸೋತವನಿಗೆ ಗೆಲುವಿನ ಚಿಕ್ಕ ಅವಕಾಶ ಸಿಕ್ಕೇ ಸಿಗುತ್ತದೆ. ಆದರೆ ಅದನ್ನು ಬಳಸಿಕೊಳ್ಳುವ ಜಾಣ್ಮೆ ನಮ್ಮಲ್ಲಿರಬೇಕು. ಆ ಚಿಕ್ಕ ಅವಕಾಶವೇ ಬಹುದೊಡ್ಡ “ಗೆಲುವಿನ’ ಮೆಟ್ಟಿಲಾಗಬಹುದು. ಜೀವನದಲ್ಲಿ ಸೋತಾಗ ನಮ್ಮ ಪ್ರಯತ್ನವನ್ನು ನಿಲ್ಲಿಸದೇ ನಮ್ಮ ಜೀವನ ಇಷ್ಟೇ, ಪಾಲಿಗೆ ಬಂದದ್ದೇ ಪಂಚಾಮೃತ ಎಂಬ ನಿರಾಶಾವಾದವನ್ನು ಹೊಂದದೇ “ಸಾಧಿಸಿದರೆ ಸಬಲ ನುಂಗಬಹುದು’ ಎಂಬಂತೆ ಸತತ ಪ್ರಯತ್ನ ಪಡೋಣ. ಪ್ರಯತ್ನವನ್ನು ಪಡದೆ, ಕಠಿನ ಪರಿಶ್ರಮವಿಲ್ಲದೆ ಸುಲಭವಾಗಿ ಗೆಲುವು ಸಿಗಬೇಕೆಂದರೆ ಅದು ಹೇಗೆ ಸಾಧ್ಯವಾಗುತ್ತದೆ?

ಇದನ್ನೂ ಓದಿ:ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಉಗ್ರ ಬಂಧನ

ಗೆಲುವು ಕೂಡ ಅಷ್ಟೆ. ನೀವು ನಿಮ್ಮ ಜೀವನದ ಯಾವುದೇ ಸವಾಲು ಅಥವಾ ಗುರಿಯಲ್ಲಿ ಏಕ ಪ್ರಯತ್ನದಲ್ಲಿ ಗೆಲುವು ಸಾಧಿಸಿರುತ್ತೀರಿ ಎಂದುಕೊಳ್ಳಿ. ಆದರೆ ಆ ಗೆಲುವಿನ ನೈಜ ಸವಿಯನ್ನು ಸಂಭ್ರಮಿಸಲು ನಿಮಗೆ ಸಾಧ್ಯವಾಗದು. ಅದರ ಸಂತಸ, ಸಂಭ್ರಮವೇನಿ ದ್ದರೂ ಕ್ಷಣಿಕ ಮಾತ್ರ. ಈ ಹಿಂದೆ ಸೋಲನ್ನು ಅನುಭವಿಸಿದಾತನಿಗಷ್ಟೇ ಗೆಲುವಿನ ನಿಜವಾದ ರುಚಿ ತಿಳಿಯುತ್ತದೆ. ಹಾಗೆಯೇ ಜೀವನ ಎಂಬ ಪರೀಕ್ಷೆಯಲ್ಲೂ ಕೂಡ. ಒಂದಿಷ್ಟು ಅಡೆತಡೆ, ಸಮಸ್ಯೆ, ಸವಾಲುಗಳು ನಮ್ಮ ಜೀವನದಲ್ಲಿ ಎದುರಾದಾಗ ಮಾತ್ರವೇ ಜೀವನದ ನಿಜವಾದ ಬೆಲೆ ಅರ್ಥವಾಗುತ್ತದೆ. ಸೋತ ಬಳಿಕ ಪಡೆದ ಗೆಲುವು ಮನುಷ್ಯನನ್ನು ಬಹು ಎತ್ತರಕ್ಕೆ ಕೊಂಡೊಯ್ಯುತ್ತದೆ. ಗೆಲುವಿನ ನಿಜವಾದ ಬೆಲೆ, ಮೌಲ್ಯ ತಿಳಿದ ವ್ಯಕ್ತಿ ಅದಕ್ಕಾಗಿ ಪಟ್ಟ ಶ್ರಮ, ಹೋರಾಟ, ಸವೆಸಿದ ಹಾದಿ ಎಲ್ಲವನ್ನೂ ನೆನಪಿಟ್ಟುಕೊಳ್ಳುತ್ತಾನೆ. ಆ ಮೂಲಕ ಜೀವನದಲ್ಲಿ ಯಶಸ್ವಿಯಾಗುತ್ತಾನೆ, ಇನ್ನೊಬ್ಬರಿಗೆ ಮಾದರಿಯಾಗುತ್ತಾನೆ.

ಜೀವನದಲ್ಲಿ ಯಶಸ್ಸು ಸಂಪಾದಿಸಿದ ಮೇಲೆ, ಗೆಲುವು ಸಾಧಿಸಿದ ಮೇಲೆ ಅಹಂಕಾರ ಪಡಬಾರದು. ಅಹಂಕಾರ ಪಟ್ಟರೆ ಇಡೀ ವ್ಯಕ್ತಿತ್ವವೇ ನಾಶವಾಗಿ ಹೋಗುತ್ತದೆ. ಜೀವನದಲ್ಲಿ ಎದುರಾಗುವ ಸೋಲುಗಳನ್ನು ಮೆಟ್ಟಿ ಜೀವನ ಎನ್ನುವ ಅಂಗಳದಲ್ಲಿ ಯಶಸ್ವಿಯಾಗಿ ಆಡೋಣ, ಗೆಲುವು ಸಂಪಾದಿಸೋಣ.

-ಭಾಗ್ಯಶ್ರೀ, ಹಾಲಾಡಿ

ಟಾಪ್ ನ್ಯೂಸ್

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aasasas

ಸೌರ ಯುಗಾದಿ; ಜೀವನೋತ್ಸಾಹ, ನವಚೈತನ್ಯ ತುಂಬುವ ಹಬ್ಬ ವಿಷು

PAK: ವಾಣಿಜ್ಯ ಕಟ್ಟಡ ನಿರ್ಮಾಣಕ್ಕಾಗಿ ಐತಿಹಾಸಿಕ ಹಿಂದೂ ದೇವಸ್ಥಾನ ಧ್ವಂಸಗೊಳಿಸಿದ ಪಾಕ್!

PAK: ವಾಣಿಜ್ಯ ಕಟ್ಟಡ ನಿರ್ಮಾಣಕ್ಕಾಗಿ ಐತಿಹಾಸಿಕ ಹಿಂದೂ ದೇವಸ್ಥಾನ ಧ್ವಂಸಗೊಳಿಸಿದ ಪಾಕ್!

Union Territory: 6 ಕೇಂದ್ರಾಡಳಿತ ಪ್ರದೇಶದಲ್ಲಿ 6 ಸೀಟು ಯಾರಿಗೆ?

Union Territory: 6 ಕೇಂದ್ರಾಡಳಿತ ಪ್ರದೇಶದಲ್ಲಿ 6 ಸೀಟು ಯಾರಿಗೆ?

Lok Sabha Election: ಜೆಡಿಎಸ್‌ ಭದ್ರಕೋಟೆ ಹಾಸನದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ

Lok Sabha Election: ಜೆಡಿಎಸ್‌ ಭದ್ರಕೋಟೆ ಹಾಸನದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ

1-qwewqew

ಮರಳಿ ಬಂದಿದೆ ಯುಗಾದಿ: ಹೊಸ ಸಂವತ್ಸರದ ಹುರುಪು, ನವ ಬೆಳಕಿನ ಆಶಯ

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.