ಬೆನ್ನ ಮೇಲಿರುವ ಸುಖದ ಮೂಟೆ ಇಳಿಸಿ ಬದುಕನ್ನು ಸವಿಯೋಣ
Team Udayavani, Dec 4, 2020, 5:45 AM IST
ನಾವೀಗ ಹೊರಟಿರುವುದು ಸುಖದ ಮೂಟೆಯನ್ನು ಬೆನ್ನ ಮೇಲೆ ಹೇರಿಕೊಂಡು ಸುಖವನ್ನು ಹುಡುಕುತ್ತಾ ಎಂದು ಹೇಳಿದ ಯೋಗಿಯೊಬ್ಬ ತನ್ನ ಎದುರಿಗಿದ್ದವನಿಗೆ.
ಇದನ್ನು ಕೇಳಿದ ಎದುರಿನವ ವಿಚಿತ್ರ ವೆಂಬಂತೆ ಯೋಗಿಯತ್ತ ನೋಡಿದ. ದುಃಖದ ಮೂಟೆಯನ್ನು ಹೊತ್ತು ಸುಖವನ್ನು ಹುಡುಕಿಕೊಂಡು ಅಲ್ಲವೇ? ಎಂಬುದು ಅವನ ಆಲೋಚನೆಯಾಗಿತ್ತು.
ಯೋಗಿಗಳು ಶಾಂತವಾಗಿ, ಒಬ್ಬ ವ್ಯಕ್ತಿ ಬಂದಿದ್ದ. ಯಾವುದೋ ದೂರದ ಪೇಟೆ ಯವನು. ನನ್ನನ್ನು ಕಂಡವನೇ ಕಾಲಿಗೆ ಎರಗಿದ. ನಾನು ಕುಶಲ ಸಮಾಚಾರವನ್ನು ಕೇಳಿದೆ. ಅವನ ಮುಖ ಬಾಡಿತ್ತು. ಏನಯ್ನಾ ಸಮಸ್ಯೆ? ಎಂದು ಕೇಳಿದೆ.
ಅದಕ್ಕೆ ಆತ, ಸುಖವೆಂಬುದನ್ನು ನನ್ನ ಬದುಕಿನಲ್ಲಿ ಕಂಡೇ ಇಲ್ಲ. ನನ್ನ ಹಣೆಯಲ್ಲಿ ಬರೆದಿರುವುದು ಇಷ್ಟೇ ಎಂದು ನಿಟ್ಟುಸಿರು ಗೆರೆದ. ಯಾಕೋ ಬೇಸರ ವೆನಿಸಿತು. ಇನ್ನಷ್ಟು ವಿವರ ಕೇಳಿದೆ.
ಅವನು ಸದಾ ಮನೆಯಲ್ಲಿ ಎಲ್ಲರ ಮೇಲೂ ಸಿಡುಕುತ್ತಿದ್ದ. ಅರೆ ಕ್ಷಣವೂ ನೆಮ್ಮದಿಯಿಂದ ಯಾರೊಂದಿಗೂ ಮಾತನಾಡಿದವನಲ್ಲ. ಮನೆಯಲ್ಲಿದ್ದವರಿಗೂ ಒಮ್ಮೊಮ್ಮೆ ಎಲ್ಲಾ ದರೂ ಈತ ದೂರ ಹೋಗಿದ್ದರೆ ಒಳ್ಳೆಯದಿತ್ತು ಎನ್ನಿಸುವ ಹಾಗಿತ್ತು ಪರಿಸ್ಥಿತಿ.
ಒಮ್ಮೆ ಅವನ ಗೆಳೆಯ ಸಿಕ್ಕವನೇ, ಒಂದು ಕೆಲಸ ಮಾಡು, ಹಿಮಾಲಯಕ್ಕೆ ಹೋಗು ನೆಮ್ಮದಿ ಸಿಗುತ್ತದೆ ಎಂದ. ಇದು ಸರಿ ಎನಿ ಸಿತು. ಹಾಗೆಯೇ ಹೇಳದೇ ಕೇಳದೇ ಹೊರಟ ವನು ಮುಟ್ಟಿದ್ದು ಹಿಮಾಲಯಕ್ಕೆ. ಇಲ್ಲಿ ಎಲ್ಲೆಲ್ಲೋ ಸುತ್ತಿ ನನ್ನ ಬಳಿ ಬಂದಿದ್ದ. ಎಲ್ಲವನ್ನೂ ವಿವರಿಸಿದ.
ನನಗೆ ನಗು ಬಂದಿತು. ಅಲ್ಲಯ್ನಾ, ಇಲ್ಲಿ ನೆಮ್ಮದಿ ಸಿಗುತ್ತದೆಂದು ಯಾರು ಹೇಳಿದರು ಎಂದು ಕೇಳಿದೆ. ಅದಕ್ಕೆ ತನ್ನ ಗೆಳೆಯ ಎಂದು ಉತ್ತರಿಸಿದ. ಆಗ ನನ್ನ ನಗು ಹೆಚ್ಚಾಯಿತು. ಸರಿ, ಸ್ವಂತ ಅನುಭವದಿಂದ ನಿನ್ನ ಗೆಳೆಯ ಹೇಳಿದ್ದಾನೆಯೇ ಎಂದು ಪರಿಶೀಲಿಸಿ ದ್ದೀಯಾ ಎಂದು ಕೇಳಿದೆ. ಇಲ್ಲ, ಅವನ ಮಾತು ನಿಜವೆನಿಸಿತು ಬಂದು ಬಿಟ್ಟೆ. ಈಗ ಲಂತೂ ನನಗೆ ನಗು ತಡೆಯಲಾಗಲಿಲ್ಲ ಎಂದು ಹೇಳಿದರು ಯೋಗಿಗಳು.
ಯಾಕೆಂದರೆ ನಾವು ಎಷ್ಟೋ ಬಾರಿ ಬೇರೆಯವರ ಸಲಹೆಗಳನ್ನೇ ತೀರ್ಮಾನ ಗಳನ್ನಾಗಿಸಿ . ಕೊಳ್ಳುತ್ತೇವೆ. ನಮ್ಮ ಸಂದರ್ಭ ಹಾಗೂ ಸಮಸ್ಯೆಗೆ ಅದು ಹೇಗೆ ಪರಿಹಾರ ಮತ್ತು ಅದುವೇ ಪರಿಹಾ ರವೇ ಎಂದು ಯೋಚಿಸುವುದಿಲ್ಲ . ಎಂದರು.
ಕೊನೆಗೆ ಅವನಿಗೆ ಏನು ಹೇಳಿ ಕಳುಹಿಸಿದಿರಿ? ಎಂದು ಕೇಳಿದ ಎದುರಿಗೆ ಕುಳಿತವ. ಆಗ ಯೋಗಿಗಳು, “ನೋಡು, ನೆಮ್ಮದಿ, ಸುಖ ಎನ್ನುವುದು ಎಲ್ಲೋ ಸಿಗು ವಂಥದ್ದಲ್ಲ, ಕೊಳ್ಳುವಂಥ ದ್ದಲ್ಲ. ಅದು ನಮ್ಮೊಳಗೆ ಇರುವಂಥದ್ದು, ಹುಡುಕಿಕೊಂಡು ಅನುಭವಿಸಬೇಕಷ್ಟೇ. ವಾಪಸು ಹೋಗಿ ಮನೆಯವರನ್ನು ನಗು ನಗುತ್ತಾ ಮಾತನಾಡಿಸು. ಆಗ ಸುಖದ ಅರ್ಥ ತಿಳಿಯುತ್ತದೆ’ ಎಂದು ಹೇಳಿ ಕಳುಹಿಸಿದೆ ಎಂದರು.
ನಾವು ನಿತ್ಯವೂ ನಮ್ಮಲ್ಲಿರುವ ಸುಖದ ಸಾಧನವಾದ ನಗುವನ್ನೇ ಕಳೆದುಕೊಂಡು ಬದುಕುತ್ತಿರುತ್ತೇವೆ. ಇದು ಸಹಜವಾಗಿ ನಮ್ಮನ್ನು ದುಃಖೀಗಳನ್ನಾಗಿಸುತ್ತದೆ. ಅದಕ್ಕೇ ನಮಗೆ ಇಡೀ ಜಗತ್ತು ದುಃಖದ ಮೂಟೆ ಹೊತ್ತಂತೆ ತೋರುತ್ತಿರುತ್ತದೆ. ಅದರ ಬದಲು ನಮ್ಮ ಬೆನ್ನಿನ ಮೇಲಿನ ಮೂಟೆಯನ್ನು ಕೆಳಗಿಳಿಸಿ, ಅದರೊಳಗೆ ಇರುವುದನ್ನು ಅರಿತು ಅನುಭವಿಸುವುದನ್ನು ಕಲಿಯಬೇಕು. ಹಾಗಾದಾಗ ನಮ್ಮ ಮುಖದಲ್ಲಿ ನಗು ಮೂಡಲಾರಂಭಿಸುತ್ತದೆ. ಇದು ಪರರ ಮುಖದಲ್ಲೂ ಪ್ರತಿಫಲಿಸಲಾರಂಭಿಸುತ್ತದೆ. ಅದೇ ನೈಜ ಸುಖ ಮತ್ತು ಬದುಕು.
(ಸಾರ ಸಂಗ್ರಹ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ