ಬದಲಾಗಬೇಕಿರುವುದು ಜಗತ್ತಲ್ಲ…ನಾವು


Team Udayavani, Jun 6, 2020, 5:40 PM IST

ಬದಲಾಗಬೇಕಿರುವುದು ಜಗತ್ತಲ್ಲ…ನಾವು

ಒಂದೂರಲ್ಲಿ ಒಬ್ಬ ರಾಜನಿದ್ದ. ರಾಜ್ಯವೂ ಸಿರಿಸಂಪತ್ತಿನಿಂದ ಕೂಡಿತ್ತು. ಅಕ್ಕ ಪಕ್ಕದ ರಾಜ್ಯಗಳಿಗಿಂತಲೂ ಈ ರಾಜ್ಯವೇ ಶ್ರೇಷ್ಠ ಮತ್ತು ಉತ್ತಮ ಆಡಳಿತ ಹೊಂದಿದೆ ಎಂಬ ಮಾತುಗಳಿದ್ದವು. ಹೀಗಿರುವಾಗ ರಾಜನಿಗೆ ಒಂದು ದಿನ ರಾಜ್ಯ ಸುತ್ತಾಡಬೇಕೆಂಬ ಮನಸ್ಸಾಯಿತು. ತನ್ನ ಆಸೆ ಇಡೇರಿಕೆಗಾಗಿ ರಾಜ್ಯದಲ್ಲಿ ಪ್ರವಾಸ ಹೊರಟ. ಆತ ಸಾಗಿದ ದಾರಿಗಳೆಲ್ಲ ಬರಿ ಕಲ್ಲು ಮುಳ್ಳುಗಳಿಂದ ಕೂಡಿತ್ತು. ಇದರಿಂದಾಗಿ ಬರಿಗಾಲಿನಲ್ಲಿ ಸಾಗಿದ್ದ ರಾಜನ ಕಾಲುಗಳಲೆಲ್ಲ ಬೊಬ್ಬೆಗಳು ಉಂಟಾದವು. ಇನ್ನೆರಡು ಹೆಜ್ಜೆ ಇಡಲೂ ತನ್ನಿಂದ ಸಾಧ್ಯವಿಲ್ಲ ಎಂಬುದು ರಾಜನಿಗೆ ಅರಿವಾಯಿತು. ತನ್ನ ರಾಜ್ಯದ ರಸ್ತೆಗಳು ಇಷ್ಟು ದುಸ್ಥಿತಿಯಲ್ಲಿವೆಯೇ ಎಂಬ ಖೇದವೂ ಉಂಟಾಯಿತು.

ಕೂಡಲೇ ಮಂತ್ರಿಗಳನ್ನು ಕರೆದ ರಾಜ, ರಾಜ್ಯದ ಎಲ್ಲ ರಸ್ತೆಗಳಿಗೂ ಚರ್ಮದ ಹೊದಿಕೆ ಮಾಡಿಸುವಂತೆ ಆದೇಶಿಸಿದ. ರಾಜಾಜ್ಞೆಯಂತೆ ಎಲ್ಲ ರಸ್ತೆಗಳಿಗೂ ಚರ್ಮದ ಹೊದಿಕೆ ಮಾಡಲು ಸಾವಿರಾರು ಪ್ರಾಣಿಗಳ ವಧೆಮಾಡಲೇ ಬೇಕಿತ್ತು. ಇದನ್ನು ಮನಗಂಡ ಮಂತ್ರಿಯೋರ್ವ ರಾಜನಿಗೆ ಸಲಹೆಯೊಂದನ್ನು ನೀಡಿದ. ರಾಜನೂ ಇದಕ್ಕೆ ಒಪ್ಪಿದ. ಆ ಸಲಹೆಯೇ ರಸ್ತೆಗಳಿಗೆ ಚರ್ಮ ಹೊದಿಸುವ ಬದಲು ತುಂಡು ಚರ್ಮದಿಂದ ರಾಜ ತನ್ನ ಪಾದಗಳನ್ನು ಮುಚ್ಚಿಕೊಳ್ಳಬಹುದು. ಇದರಿಂದ ಅನಗತ್ಯ ಖರ್ಚು ಕೂಡ ಕಡಿಮೆಯಾಗುತ್ತದೆ ಎಂಬುದನ್ನು ಮಂತ್ರಿ ತಿಳಿ ಹೇಳಿದ್ದ. ಹಾಗಾಗಿ ಅಂದಿನಿಂದಲೇ ರಾಜ ಪಾದರಕ್ಷೆ ಧರಿಸುವುದನ್ನು ಅಭ್ಯಸಿಸಿಕೊಂಡ.

ತಮ್ಮ ಪ್ರವಚನವೊಂದರಲ್ಲಿ ಸಂತರೋರ್ವರು ಹೇಳಿದ ಚಿಕ್ಕ ಕಥೆಯಿದು. ಜಗತ್ತನ್ನು ಬದಲಾಯಿಸುವ ಬದಲು ನಾವು ಬದಲಾಗಬೇಕು ಎಂಬುದು ಈ ಕಥೆಯ ನೀತಿ. ನಮ್ಮ ಸಮಾಜದಲ್ಲಿ ಅದು ಸರಿ ಇಲ್ಲ, ಇದು ಹೀಗಾಗಬೆಕಿತ್ತು ಎಂದು ಪುಂಖಾನುಪುಂಖವಾಗಿ ಹೇಳಿಕೊಂಡು ತಿರುಗುವ ಅನೇಕರು ಇದ್ದಾರೆ. ಆದರೆ ಆ ಬದಲಾವಣೆಗಾಗಿ ತಮ್ಮನ್ನೆಷ್ಟು ಅವರು ಬದಲಾಯಿಸಿಕೊಂಡಿದ್ದಾರೆ ಎಂಬುದು ಪ್ರಶ್ನೆ. ಕೇವಲ ಸಮಾಜದ ದೃಷ್ಟಿಯನ್ನು ಮಾತ್ರ ಇಟ್ಟುಕೊಂಡು ಈ ಕಥೆಯಿಲ್ಲ.

ಪ್ರತಿಯೊಬ್ಬರ ವೈಯಕ್ತಿಕ ಜೀವನಕ್ಕೂ ಇದು ಅನ್ವಯವಾಗುತ್ತದೆ. ಸದಾ ಬೇರೆಯವರ ತಪ್ಪನ್ನೇ ಹುಡುಕುತ್ತ ಬದುಕುವ ಬದಲು ನಮ್ಮ ತಪ್ಪನ್ನು ನಾವು ತಿದ್ದುಕೊಂಡು ಬಾಳುವ ಮನಃಸ್ಥಿತಿ ಎಲ್ಲರೂ ರೂಢಿಸಿಕೊಂಡರೆ ಬೇರೆಯವರ ತಪ್ಪು ಹುಡುಕುವವರಾದರೂ ಯಾರಿರುತ್ತಾರೆ? ಲೋಕದ ಡೊಂಕು ಸರಿಪಡಿಸುವ ಬದಲು ನಿಮ್ಮ ತನವನ್ನು, ಮನವನ್ನು ಸಂತೈಸಿಕೊಳ್ಳಿ ಎಂದು ವಚನಕಾರರೇ ಹೇಳಿಲ್ಲವೆ?

ಟಾಪ್ ನ್ಯೂಸ್

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.