ಲಾಕ್ಡೌನ್ ಸಡಿಲಿಕೆ: ಸಿಎಂಗೆ ಅಧಿಕಾರಿಗಳ ಸಲಹೆ?
ಕೇವಲ ಅಂಕಿ-ಸಂಖ್ಯೆ ನೀಡಿದ್ದಕ್ಕೆ ಸಿಎಂ ಗರಂ
Team Udayavani, Apr 20, 2020, 6:12 AM IST
ಬೆಂಗಳೂರು: ಕೇಂದ್ರ ಸರಕಾರ ನೀಡಿದ್ದ ಮಾರ್ಗಸೂಚಿಗಳ ಅಡಿಯಲ್ಲೇ ಎ.20ರಿಂದ ಆಯ್ದ ಕಡೆ ಲಾಕ್ಡೌನ್ ನಿರ್ಬಂಧ ಸಡಿಲಿಕೆ ಸೂಕ್ತ ಎಂಬುದು ಅಧಿಕಾರಿ ವರ್ಗದ ಸಲಹೆಯಾಗಿತ್ತು!
ಆ ಸಲಹೆ ಪ್ರಕಾರ, ಕೇಂದ್ರದ ಮಾರ್ಗಸೂಚಿಗಳು ಉಲ್ಲಂಘನೆಯಾಗದಿದ್ದಲ್ಲಿ ಮುಂದುವರಿ ಯಬಹುದು ಎಂದು ಸಿಎಂ ಯಡಿಯೂರಪ್ಪ ಸಡಿಲಿಕೆ ವಿಚಾರ ಪ್ರಸ್ತಾವಿಸಿದ್ದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಕೆಲವೇ ಹೊತ್ತಿನಲ್ಲಿ ನಿರ್ಧಾರ ಹಿಂಪಡೆಯಬೇಕಾಯಿತು ಎಂದು ಮೂಲಗಳು ತಿಳಿಸಿವೆ.
ವರದಿ ಸಲ್ಲಿಕೆಗೆ ಸೂಚನೆ
ಅಂಕಿ-ಸಂಖ್ಯೆ ನಿತ್ಯವೂ ಪತ್ರಿಕೆಗಳಲ್ಲಿ ಸಿಗುತ್ತಿದೆ. ಅದರ ಹೊರತಾಗಿ ಕೋವಿಡ್ 19 ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಏನು ಚಿಂತಿಸಿದ್ದೀರಿ? ಸಭೆಗೆ ಬರುವಾಗ ಎ.20ರ ಅನಂತರ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು, ಅವುಗಳ ಸಾಧಕ-ಬಾಧಕಗಳ ಕುರಿತ ಸಲಹೆಗಳೊಂದಿಗೆ ಬನ್ನಿ ಎಂದು ಸಿಎಂ ಖಾರವಾಗಿಯೇ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಕೇಂದ್ರದ ಮಾರ್ಗಸೂಚಿ ಮಿತಿಯಲ್ಲೇ ಸಡಿಲಿಕೆ?
ಕೇಂದ್ರದ ಮಾರ್ಗಸೂಚಿ ಮಿತಿಯಲ್ಲೇ ಸಡಿಲಿಕೆ ಬಗ್ಗೆ ಅಧಿಕಾರಿಗಳು ಸಲಹೆ ನೀಡಿದ ಪ್ರಕಾರ ಚರ್ಚೆ ನಡೆಸಿ ಇದರಿಂದ ಆರ್ಥಿಕ ಚಟುವಟಿಕೆಗೂ ಉತ್ತೇಜನ ಸಿಗಲಿದೆ ಎಂಬ ದೃಷ್ಟಿಯಿಂದ ಮುಖ್ಯಮಂತ್ರಿಗಳು ಸಹಮತ ವ್ಯಕ್ತಪಡಿಸಿ ಲಾಕ್ಡೌನ್ ಸಡಿಲಗೊಳಿಸುವ ಬಗ್ಗೆ ಅಧಿಕೃತವಾಗಿ ಘೋಷಿಸಿದರು. ಆದರೆ ಇದರ ಬಗ್ಗೆ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೀಕ್ಷ್ಣ ಅಭಿಪ್ರಾಯ ಬರುತ್ತಿದ್ದಂತೆ ಸಡಿಲಿಕೆ ನಿರ್ಧಾರ ಹಿಂಪಡೆದರು. ಸೋಮವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲು ನಿರ್ಧರಿಸಲಾಯಿತು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ