ಕರಾವಳಿಯ ಆಟಿ ಕಳಂಜ ಜನಪದ ಕಲೆ ಹಿನ್ನೆಲೆಯ “ಮಡಿ’

ಆನ್‌ಲೈನ್‌ ಪ್ರೀಮಿಯರ್‌ನಲ್ಲಿ ಸೆಲಿಬ್ರಿಟಿಗಳ ಭರಪೂರ ಮೆಚ್ಚುಗೆ

Team Udayavani, Jun 3, 2020, 7:58 AM IST

keeru chitra madi

ನಿರ್ದೇಶಕ ಸುಧೀರ್‌ ಅತ್ತಾವರ್‌ ಅವರು ನಿರ್ದೇಶಿಸಿರುವ “ಮಡಿ’ ಎಂಬ ಅದ್ಭುತ ಕಿರುಚಿತ್ರಕ್ಕೆ ಈಗಾಗಲೇ ಹಲವು ಪ್ರಶಸ್ತಿ, ಪ್ರಶಂಸೆಗಳು ಸಿಕ್ಕಿವೆ. ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಹಾಗಾಗಿ ಇದೊಂದು ವಿಭಿನ್ನ ಪ್ರಯೋಗದ ಕಿರುಚಿತ್ರ ಎನ್ನಲ್ಲಡ್ಡಿಯಿಲ್ಲ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಕಿರುಚಿತ್ರದಲ್ಲಿ ಹಲವು ವಿಶೇಷತೆಗಳಿವೆ.

ಮೊದಲ ವಿಶೇಷವೆಂದರೆ, ಇದೊಂದು ಕರಾವಳಿ ಜನಪದ ಕಲೆಯಾಗಿರುವ “ಆಟಿ ಕಳಂಜ’ ಎಂಬ ಒಂದು ಸೂಕ್ಷ್ಮ ವಿಚಾರದ ಕುರಿತು ಗಹನವಾಗಿ ಬೆಳಕು ಚೆಲ್ಲುವಂತಹ ಕಥೆ ಹೆಣೆದು ಮಾಡಿರುವ ಚಿತ್ರವಾಗಿದೆ. ಇನ್ನೊಂದು ವಿಶೇಷವೆಂದರೆ, ಈ ಸಿನಮಾ ಕೂಡ ಕರಾವಳಿ ಭಾಗದಲ್ಲೇ ಚಿತ್ರೀಕರಣಗೊಂಡಿದೆ. ಸುಮಾರು 25 ನಿಮಿಷಗಳ ಈ “ಮಡಿ’ ಎಂಬ ಕಿರುಚಿತ್ರದಲ್ಲಿ ಗಾಯಕಿ ಎಂ.ಡಿ.ಪಲ್ಲವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರು ವಿಶೇಷ ಪಾತ್ರದ ಮೂಲಕ ಗಮನಸೆಳೆದಿದ್ದಾರೆ.

ಕಥೆ ಹಾಗು ಪಾತ್ರ ಕೇಳಿದೊಡನೆ ತುಂಬಾನೇ ಇಷ್ಟಪಟ್ಟು ಆಯ್ಕೆ ಮಾಡಿಕೊಂಡ ಕಿರುಚಿತ್ರ ಇದಾಗಿದ್ದು, ಎಂ.ಡಿ.ಪಲ್ಲವಿ ಅವರಿಗೆ ಹೊಸ ಬಗೆಯ ಪಾತ್ರ, ಕಥೆಯಲ್ಲಿ ಕಾಣಿಸಿಕೊಳ್ಳಬೇಕೆಂಬ ಬಯಕೆ “ಮಡಿ’ ಚಿತ್ರದ ಮೂಲಕ ಈಡೇರಿದೆ. ಅಂದಹಾಗೆ, ಈ ಚಿತ್ರ ಇತ್ತೀಚೆಗೆ ಆನ್‌ಲೈನ್‌ ಪ್ರೀಮಿಯರ್‌ ಆಗಿದ್ದು ವಿಶೇಷತೆಗಳಲ್ಲೊಂದು. ನಿರ್ದೇಶಕ ಸುಧೀರ್‌ ಅತ್ತಾವರ್‌ ಅವರು ಈ ವಿಶೇಷ ಆನ್‌ಲೈನ್‌ ಪ್ರೀಮಿಯರ್‌ ಎಂಬ ಹೊಸ ಕಾನ್ಸೆಪ್ಟ್ನೊಂದಿಗೆ “ಮಡಿ’ ಚಿತ್ರದೊಳಗಿನ ಆಶಯ ಅದರಲ್ಲಿರುವ ತವಕ, ತಲ್ಲಣ ವಾಸ್ತವ ಅಂಶಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ.

ಈಗಾಗಲೇ ಸಿನಿಮಾ ನೋಡಿದವರು ಕಲಾವಿದರು ಮತ್ತು ಖ್ಯಾತ ಗಾಯಕ, ಕಲಾವಿದರಾದ ಶರೂನ್‌ ಪ್ರಭಾಕರ್‌ ಅವರಂತಹವರ ಜೊತೆ ಸಂವಾದ-ಚರ್ಚೆ ಕೂಡ ಮಾಡಿದ್ದಾರೆ. ಹಲವರು ಆನ್‌ಲೈನ್‌ ಪ್ರೀಮಿಯರ್‌ನಲ್ಲಿ “ಮಡಿ’ ಸಿನಿಮಾ ಕುರಿತು ಶರೂನ್‌ ಅವರೊಂದಿಗೆ ಸಂವಾದ ನಡೆಸಿದ್ದಾರೆ. ಇನ್ನು “ಮಡಿ’ ಚಿತ್ರದ ಶೀರ್ಷಿಕೆ ಕೆಳಗೆ ಮಲಿನ ಮನಗಳ ಕ್ರೌರ್ಯ ಎಂಬ ಅಡಿಬರಹವೂ ಇದೆ. ಅಲ್ಬರ್ಟ್‌ ಜೋಸ್ಸಿ ರೇಗೋ ಅರ್ಪಿಸಿರುವ ಈ ಚಿತ್ರ ಸಕ್ಸಸ್‌ ಫಿಲ್ಮ್ ಮತ್ತು ಸೂರಜ್‌ ವಿಷ್ಯುವಲ್ಸ್‌ ಪ್ರೊಡಕ್ಷನ್‌ನಲ್ಲಿ ತಯಾರಾಗಿದೆ. ವಿದ್ಯಾದರ್‌ ಅವರ ಸಂಕಲನವಿರುವ “ಮಡಿ’ ಸಿನಿಮಾ ಇಂಗ್ಲೀಷ್‌ ಸಬ್‌ಟೈಟಲ್‌ನಲ್ಲೂ ಮೂಡಿ ಬಂದಿದೆ.

ಅದೇನೆ ಇರಲಿ, ಆನ್‌ಲೈನ್‌ ಪ್ರೀಮಿಯರ್‌ ಎಂಬ ಹೊಸ ಬಗೆಯ ವಿಷಯದೊಂದಿಗೆ ಚಿತ್ರವನ್ನು ತೋರಿಸಿ, ಆ ಕುರಿತು ಮಾತನಾಡಲು ಹಲವು ಸೆಲಿಬ್ರಿಟಿಗಳನ್ನು ಕಲೆಹಾಕಿ, ಸಂವಾದ ನಡೆಸಿದ್ದು ವಿಶೇಷತೆಗಳಲ್ಲೊಂದು. ಈ ಪ್ರೀಮಿಯರ್‌ ಸಂವಾದದಲ್ಲಿ ಶ್ರೀನಿವಾಸ ಪ್ರಭು, ಎಂ.ಡಿ.ಪಲ್ಲವಿ, ವಿನೋದ್‌ ತ್ರಿವೇದಿ, ಹಿಮಾಂಗಿನಿ,ಡಾ.ಡಿ.ವಿ.ಗುರುಪ್ರಸಾದ್‌, ನಂದಿನಿ ಮೆಹ್ತಾ, ಸುರೇಶ್‌, ಸಾ.ನಾ.ರವಿಕುಮಾರ್‌,ನೀಲಂ ಗುಪ್ತ ಲೂನ್ಕರ್‌, ಜಾನ್‌ ವರ್ಗೀಸ್‌ ಚೆರಿಯನ್‌, ಪ್ರಕಾಶ್‌ ಶೆಟ್ಟಿ, ಸೂರಜನ್‌ ಸೇರಿದಂತೆ ಹಲವರು ಸೆಲಿಬ್ರಿಟಿಗಳು ಇತ್ತೀಚೆಗೆ “ಮಡಿ’ ಚಿತ್ರದ ಪ್ರೀಮಿಯರ್‌ ಜೊತೆ ಮಾತುಕತೆಯಲ್ಲೂ ತೊಡಗಿದ್ದು ವಿಶೇಷ.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.