ಮೊಬೈಲ್ ಶೋರೂಂನಲ್ಲಿ ಕಳವು ಪ್ರಕರಣ : 40 ಲ.ರೂ. ಮೌಲ್ಯದ ಮೊಬೈಲ್ಗಳ ಸಹಿತ ಓರ್ವನ ಬಂಧನ
Team Udayavani, Aug 14, 2021, 4:48 PM IST
ಮಂಗಳೂರು: ನಗರದ ಬಲ್ಮಠದಲ್ಲಿರುವ ಮೊಬೈಲ್ ಶೋರೂಂನಲ್ಲಿ ಕಳೆದ ತಿಂಗಳು ನಡೆದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳ ಕಳವು ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಮಹಾರಾಷ್ಟ್ರ ಮೂಲದ ಓರ್ವನನ್ನು ಬಂಧಿಸಿದ್ದು ಆತನಿಂದ 40 ಲ.ರೂ. ಮೌಲ್ಯದ 41 ಆ್ಯಪಲ್ ಐಪೋನ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, ಆರೋಪಿಯನ್ನು ಮುಂಬೈನಿಂದ ಬಂಧಿಸಲಾಗಿದೆ. ಈತನ ವಿರುದ್ಧ ಈ ಹಿಂದೆಯೇ ಮುಂಬೈನಲ್ಲಿ ಕಳವು ಸೇರಿದಂತೆ 9ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.
ಕೃತ್ಯದಲ್ಲಿ ಇನ್ನೋರ್ವ ಭಾಗಿಯಾಗಿದ್ದು ಆತನನ್ನು ಕೂಡ ಬಂಧಿಸಲಾಗುವುದು. ಮೊಬೈಲ್ ಶೋರೂಂನಿಂದ ಒಟ್ಟು 54 ಲ.ರೂ. ಮೌಲ್ಯದ 68 ಆ್ಯಪಲ್ ಐಪೋನ್ ಕಂಪೆನಿಯ ಮೊಬೈಲ್ ಪೋನ್ಗಳು, 1,15,888 ರೂ. ನಗದು, ಸ್ಟೋರ್ ಸೇಫ್ಟಿ ಲಾಕರ್, ಸಿಸಿ ಕೆಮರಾ ಡಿವಿಆರ್ ಕಳವಾಗಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ನಗರದ ಸಿಸಿಬಿ ತಂಡ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿರುವ ಹಿನ್ನೆಲೆಯಲ್ಲಿ ತಂಡಕ್ಕೆ 10,000 ರೂ. ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ :ಸಿದ್ದಕಟ್ಟೆ: ಮಹಿಳೆಯನ್ನು ಮನೆಯೊಳಗೆ ಕೂಡಿ ಹಾಕಿ ಅತ್ಯಾಚಾರ, ಕೊಲೆ ಬೆದರಿಕೆ
ಗ್ರಾಹಕರಂತೆ ಬಂದು ಸ್ಕೆಚ್ ಹಾಕಿದ್ದರು!
ಕಳ್ಳರು ಕಳ್ಳತನ ಮಾಡುವ ಸುಮಾರು 3 ದಿನಗಳ ಮೊದಲು ಮುಂಬೈನಿಂದ ನಗರಕ್ಕೆ ಆಗಮಿಸಿ 5-6 ಮೊಬೈಲ್ ಅಂಗಡಿಗಳನ್ನು ಸರ್ವೆ ಮಾಡಿದ್ದರು. ಎಲ್ಲಿ ಭದ್ರತೆ ಸರಿಯಾಗಿಲ್ಲ, ಎಲ್ಲಿ ಸುಲಭವಾಗಿ ಕಳ್ಳತನ ಮಾಡಬಹುದು ಎಂದು ಖಚಿತ ಪಡಿಸಿಕೊಂಡಿದ್ದರು. ಗ್ರಾಹಕರ ಸೋಗಿನಲ್ಲಿ ಮೊಬೈಲ್ ಶೋರೂಂಗಳಿಗೆ ಹೋಗಿ ವಾಶ್ರೂಂ ಉಪಯೋಗಿಸುವ ನೆಪದಲ್ಲಿ ಒಳಗೆ ತಿರುಗಾಡಿ ಕಳ್ಳತನ ಮಾಡಲು ಸುಲಭ ದಾರಿ ಎಲ್ಲಿದೆ ಎಂಬುದನ್ನು ತಿಳಿದುಕೊಂಡು ಹೋಗಿದ್ದರು. ಅದರಂತೆ ಒಂದು ದಿನ ಬಲ್ಮಠದ ಈ ಮೊಬೈಲ್ ಶೋರೂಂಗೆ ಬಂದು ನಿರ್ದಿಷ್ಟ ಸ್ಥಳವೊಂದರಲ್ಲಿ 2-3 ಸರಳುಗಳನ್ನು ಮಾತ್ರ ತುಂಡರಿಸುವ ಮೂಲಕ ಸುಲಭವಾಗಿ ಒಳಗೆ ಹೊಕ್ಕಿದ್ದಾರೆ. ಇಷ್ಟು ದೊಡ್ಡ ಮೊಬೈಲ್ ಶೋರೂಂನಲ್ಲಿ ಸೈರನ್ ಸೇರಿದಂತೆ ಸೂಕ್ತ ಭದ್ರತಾ ವ್ಯವಸ್ಥೆಗಳು ಇರಲಿಲ್ಲ. 2-3 ವರ್ಷಗಳ ಹಿಂದೆ ಕೂಡ ಇದೇ ಶೋರೂಂನಲ್ಲಿ ಕಳ್ಳತನ ನಡೆದಿದ್ದರೂ ಮಾಲಕರು ನಿರ್ಲಕ್ಷ್ಯ ತೋರಿರುವುದು ಕಂಡುಬಂದಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಡಿಸಿಪಿಗಳಾದ ಹರಿರಾಂ ಶಂಕರ್ ಮತ್ತು ದಿನೇಶ್ ಕುಮಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ