ಮಾರಣಕಟ್ಟೆ ಮಕರ ಸಂಕ್ರಮಣ ಉತ್ಸವ
Team Udayavani, Jan 15, 2022, 5:40 AM IST
ವಂಡ್ಸೆ: ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇಗುಲದಲ್ಲಿ ಶುಕ್ರ ವಾರ ಮಕರ ಸಂಕ್ರಮಣ ಉತ್ಸವ ಕೋವಿಡ್ ನಿರ್ಬಂಧಗಳ ಪಾಲನೆ ಯೊಂದಿಗೆ ಸರಳವಾಗಿ ನೆರವೇರಿತು.
ದೇಗುಲದ ಆನುವಂಶೀಯ ಆಡಳಿತ ಮೊಕ್ತೇಸರ ಸಿ. ಸದಾಶಿವ ಶೆಟ್ಟಿ, ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಉಪಸ್ಥಿತಿಯಲ್ಲಿ ಗಣಪತಿ ಪೂಜೆಯೊಡನೆ ಚಾಲನೆ ನೀಡಲಾ ಯಿತು. ಉಡುಪಿ, ಬೈಂದೂರು, ಕುಂದಾಪುರ ತಾಲೂಕುಗಳಿಂದ ಭಕ್ತರು ಆಗಮಿಸಿದ್ದರು.
ಸಿ. ರಘುರಾಮ ಶೆಟ್ಟಿ, ಸಿ. ಸುರೇಂದ್ರ ಶೆಟ್ಟಿ, ಸಿ. ಶಂಕರ ಶೆಟ್ಟಿ, ಮಾಜಿ ಮೊಕ್ತೇಸರ ಕೆ. ಮಂಜಯ್ಯ ಶೆಟ್ಟಿ, ಕೃಷ್ಣಮೂರ್ತಿ ಮಂಜರು, ಶ್ರೀಧರ ಮಂಜರು, ಕೊಲ್ಲೂರು ದೇಗುಲದ ಧರ್ಮದರ್ಶಿ ಡಾ| ಅತುಲ್ ಕುಮಾರ್ ಶೆಟ್ಟಿ, ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ, ನೈಲಾಡಿ ಶಿವರಾಮ ಶೆಟ್ಟಿ, ಲೆಕ್ಕಪರಿಶೋಧಕ ನಾರಾಯಣ ಶೆಟ್ಟಿ, ದಿನಕರ ಶೆಟ್ಟಿ, ಜಯಂತ ಶೆಟ್ಟಿ, ಮಂಜಯ್ಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.