ಮೀಡಿಯಂ ಫೋನ್‌


Team Udayavani, Jun 15, 2020, 5:13 AM IST

samsung a31

ಮೀಡಿಯಂ ಫೋನ್ ‌ಸ್ಯಾಮ್‌ಸಂಗ್‌ ಮಧ್ಯಮ ದರ್ಜೆಯಲ್ಲಿ ಎಂ ಸರಣಿಯ ಫೋನ್‌ಗಳನ್ನು ಹಾಗೂ ಮೇಲ್ಮಧ್ಯಮ ದರ್ಜೆಯ ಫೋನ್‌ಗಳನ್ನು ಎ ಸರಣಿಯಲ್ಲಿಯೂ ಹೊರತರುತ್ತಿದೆ. ಎ ಸರಣಿಯ ಹೊಸ ಫೋನ್‌ ಸ್ಯಾಮ್‌ಸಂಗ್‌ ಗೆಲಾಕ್ಸಿ  ಎ31, ಇದೀಗ ಬಿಡುಗಡೆಯಾಗಿದೆ. 

ಸ್ಯಾಮ್‌ಸಂಗ್‌ ಕಂಪನಿ ಎ31ಎಂಬ ಹೊಸ ಫೋನನ್ನು ಇದೀಗ ಭಾರತಕ್ಕೆ ಬಿಡುಗಡೆ ಮಾಡಿದೆ. ಇದು ಭಾರತದಲ್ಲಿ ಗೆಲಾಕ್ಸಿ ಎ ಸ್ಮಾರ್ಟ್‌ಫೋನ್‌ನ 3ನೇ ಮಾದರಿಯಾಗಿದೆ. ಗೆಲಾಕ್ಸಿ ಎ31 6.4 ಸೂಪರ್‌ ಅಮೊಲೆಡ್‌ ಇನ್ಫಿನಿಟಿಯು ಡಿಸ್ಪ್ಲೇ ,  48 ಎಂಪಿ ಕ್ವಾಡ್‌ ಕ್ಯಾಮರಾ, ಶಕ್ತಿಶಾಲಿ 5000ಎಂಎಎಚ್‌ ಬ್ಯಾಟರಿಯನ್ನು ಒಳಗೊಂಡಿದೆ. ಈಗಾಗಲೇ ಸ್ಯಾಮ್‌ಸಂಗ್‌ ಗೆಲಾಕ್ಸಿ ಎ71 ಮತ್ತು ಗೆಲಾಕ್ಸಿ ಎ51 ಮಾದರಿಗಳನ್ನು ಸ್ಯಾಮ್‌ಸಂಗ್‌ ಭಾರತಕ್ಕೆ ಬಿಡುಗಡೆ ಮಾಡಿತ್ತು. ಎ 31, ಈ  ಎರಡೂ ಮಾದರಿಗಳಿಗಿಂತ ಕಡಿಮೆ ಬೆಲೆಯ ಫೋನ್‌ ಆಗಿದೆ.

ಪರದೆ ಮತ್ತು ಕ್ಯಾಮರಾ: ಇದು 6.4 ಇಂಚು ಎಫ್ಎಚ್‌ಡಿ+ ಇನ್ಫಿನಿಟಿ- ಯು ಡಿಸ್ಪ್ಲೇ ಹೊಂದಿದ್ದು, ಸೂಪರ್‌ ಅಮೊಲೆಡ್‌ ಪರದೆ ಇದೆ. 48ಎಂಪಿ ಮುಖ್ಯ ಕ್ಯಾಮರಾ ಇದ್ದು, 8ಎಂಪಿ ಅಲ್ಟ್ರಾ ವೈಡ್‌ ಕ್ಯಾಮರಾ 123 ಡಿಗ್ರಿಗಳಷ್ಟು ಅಗಲವಾದ ದೃಶ್ಯವನ್ನು ಹಿಡಿದಿಡಲು ಸಹಾಯಕವಾಗಿದೆ. 5ಎಂಪಿ  ಮೈಕ್ರೋ ಕ್ಯಾಮರಾ ಹತ್ತಿರದ ಚಿತ್ರಗಳನ್ನು ತೆಗೆಯಲು, 5 ಎಂಪಿ ಡೆಪ್ತ್‌ ಕ್ಯಾಮರಾ, ಲೈವ್‌ ಫೋಕಸ್‌ ಶಾಟ್‌ ಗಳನ್ನು ತೆಗೆಯಲು ಅವಕಾಶ ಮಾಡಿಕೊಡುತ್ತದೆ. ಗೆಲಾಕ್ಸಿ ಎ31 20ಎಂಪಿ  ಮುಂಬದಿ ಕ್ಯಾಮರಾ ಹೊಂದಿದೆ. ಇದರಿಂದ ಹೆಚ್ಚು ಸ್ಪಷ್ಟತೆಯ ಸೆಲ್ಫಿಗಳನ್ನು ತೆಗೆಯಲು ಅವಕಾಶವಿದೆ.

ಬ್ಯಾಟರಿ, ಪ್ರೊಸೆಸರ್‌: ಇದು 5000ಎಂಎಎಚ್‌ ಬ್ಯಾಟರಿ ಹೊಂದಿದ್ದು, 22 ಗಂಟೆಗಳವರೆಗೆ ವಿಡಿಯೋ ಪ್ಲೇಬ್ಯಾಕ್‌ ನೀಡುತ್ತದೆ. ಜೊತೆಗೆ, 15 ವ್ಯಾಟ್‌ ವೇಗದ ಜಾರ್ಜಿಂಗ್‌ ಜೊತೆಗೆ ಬರುತ್ತದೆ. ಯು.ಎಸ್‌.ಬಿ ಟೈಪ್‌ ಸಿ ಪೋರ್ಟ್‌ ಹೊಂದಿದೆ.  ಇದು ಮೀಡಿಯಾಟೆಕ್‌ ಹೀಲಿಯೋ ಪಿ65 ಆಕ್ಟಾ-ಕೋರ್‌ ಪೊ›ಸೆಸರ್‌ ಹೊಂದಿದೆ. ಸ್ಯಾಮ್‌ ಸಂಗ್‌ನ ಎಕ್ಸಿನಾಸ್‌ ಅಥವಾ ಸ್ನ್ಯಾಪ್‌ಡ್ರಾ ಗನ್‌ ಪ್ರೊಸೆಸರ್‌ ಇರದಿರುವುದು ಸ್ವಲ್ಪ ಆಶ್ಚರ್ಯವೇ. 128ಜಿಬಿ ಆಂತರಿಕ ಸಂಗ್ರಹ ಹೊಂದಿದ್ದು, 512  ಜಿಬಿವರೆಗೆ ಎಸ್ಡಿ ಕಾರ್ಡ್‌ ಹಾಕಿಕೊಳ್ಳಬಹುದು ಅಲ್ಲದೇ 6ಜಿಬಿ ರ್ಯಾಮ್‌ ಹೊಂದಿದೆ. ಆನ್‌- ಸ್ಕ್ರೀನ್‌ ಫಿಂಗರ್‌ ಪ್ರಿಂಟ್‌ ಸ್ಕಾನರ್‌ ಇರುವುದು ವಿಶೇಷ. ಅಂಡ್ರಾಯ್ಡ್‌ 10 ಕಾರ್ಯಾಚರಣೆ ಇದೆ.

ಬೆಲೆ ಮತ್ತು ಲಭ್ಯತೆ: ಗೆಲಾಕ್ಸಿ ಎ31 ನೀಲಿ, ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿರುತ್ತದೆ. ರಿಟೇಲ್‌ ಮಳಿಗೆಗಳು, ಸ್ಯಾಮ್‌ ಸಂಗ್‌ ಒಪೇರಾ ಹೌಸ್‌, ಸ್ಯಾಮ್‌ಸಂಗ್‌.ಕಾಮ್‌ ಮತ್ತು ಅಮೆಜಾನ್‌, ಫ್ಲಿಪ್‌ಕಾರ್ಟ್‌, ಟಾಟಾ ಕ್ಲಿಕ್‌ ಸೇರಿ ಆನ್‌ಲೈನ್‌  ಸ್ಟೋರ್‌ಗಳಲ್ಲಿ ದೊರಕುತ್ತದೆ. ಇದರ ಬೆಲೆ 21,999 ರೂ.

* ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.