ಕಾರ್ಕಳ: ಮನೆಮನೆಯಲ್ಲಿಂದು ಮೆಹಂದಿ ಉತ್ಸವ : ಮದರಂಗಿ ಮಾಯಾಲೋಕದೊಳಗೆ ಜನ ಬಂಧಿ


Team Udayavani, Mar 16, 2022, 3:28 PM IST

ಕಾರ್ಕಳ: ಮನೆಮನೆಯಲ್ಲಿಂದು ಮೆಹಂದಿ ಉತ್ಸವ : ಮದರಂಗಿ ಮಾಯಾಲೋಕದೊಳಗೆ ಜನ ಬಂಧಿ

ಕಾರ್ಕಳ : ಕಾರ್ಕಳ ಉತ್ಸವ ಹೊಸ ಯೋಚನೆ, ಯೋಜನೆ, ವಿನೂತನಕ್ಕೆ ಉತ್ಸವ ಸಾಕ್ಷಿಯಾಗುತ್ತಿದೆ. ಶುಭ, ಸಂಭ್ರಮ, ಸಹಬಾಳ್ವೆಯ ಸಂಕೇತವಾಗಿ ಮಾ.16ರಂದು ತಾ|ನಲ್ಲಿ ವಿಶೇಷ ಮನೆಮನೆ ಮೆಹಂದಿ ಉತ್ಸವ ಕಾರ್ಯಕ್ರಮ ನಡೆಯಲಿದೆ.

ಭಾರತೀಯ ಸಂಸ್ಕೃತಿಯ ಭಾಗವಾಗಿರುವ, ಆರೋಗ್ಯದಾಯಕವೂ ಆಗಿರುವ ಮೆಹಂದಿ ಹಚ್ಚಿಕೊಳ್ಳು ವುದನ್ನು ಹಬ್ಬ, ಮದುವೆ ವಿಶೇಷ ಸಮಾರಂಭಗಳಲ್ಲಿ ಕಂಡಿದ್ದೆವು. ಮೆಹಂದಿ ಉತ್ಸವದಲ್ಲಿ ತಾಲೂಕಿನ ಇಡೀ ಕುಟುಂಬಗಳು ಭಾಗವಹಿಸುವ ಮೂಲಕ ಅವಿಸ್ಮರಣೀಯ ವಾಗಲಿದೆ. ಬುಧವಾರ ಬೆಳಗ್ಗೆಯಿಂದ ರಾತ್ರಿ ತನಕ ಗಂಡು-ಹೆಣ್ಣು ಬೇಧವಿಲ್ಲದೆ ಎಲ್ಲರೂ ಕೈಗಳಿಗೆ ಮೆಹಂದಿ ಹಚ್ಚುವ ಕಾರ್ಯ ನಡೆಸಲಿದ್ದಾರೆ.

ಮೆಹಂದಿ ಉತ್ಸವ ಹಿನ್ನಲೆಯಲ್ಲಿ ನಗರದ ವಿವಿಧೆಡೆ ವಿವಿಧ ಶೈಲಿಯ ಮೆಹಂದಿ ಟ್ಯೂಬ್‌ಗಳನ್ನು ಖರೀದಿಸು ತ್ತಿರುವುದು ಕಂಡು ಬಂತು. ಮಕ್ಕಳಿಂದ ಹಿಡಿದು, ವೃದ್ಧರ ವರೆಗೆ ಮೆಹಂದಿ ಹಾಕಲು ಉತ್ಸುಹಕರಾಗಿದ್ದಾರೆ. ಪ್ರತೀ ಕುಟುಂಬಗಳು ಇದರಲ್ಲಿ ಭಾಗಿ ಯಾಗಬೇಕಲು ಎನ್ನುವ ಆಶಯ ಸಚಿವರದ್ದಾಗಿದೆ.

ಎಲ್ಲವೂ ಆಕರ್ಷಣೀಯ
ವಸ್ತು ಪ್ರದರ್ಶನದಲ್ಲಿ ಶಿಲ್ಪಕಲೆ, ಲಲಿತ ಕಲೆ, ಖಾದಿ ರಾಜ್ಯ ಹೊರರಾಜ್ಯಗಳ ವಸ್ತುಗಳ ಪ್ರದರ್ಶನ, ಮಾರಾಟ ಮಳಿಗೆ ಗಳು ನೋಡುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಬಿದಿರಿನ ಚಾಪೆ, ತಟ್ಟಿ, ಮುಟ್ಟಾಳೆ, ಗೆರಸೆ, ಹುರಿಹಗ್ಗ, ಪಡಿಮಂಚಕ್ಕೆ ಭತ್ತದ ಸೂಡಿ ಬಡಿಯುವ ಮಹಿಳೆಯರು, ಹಳ್ಳಿ ಮಕ್ಕಳ ಆಟದ ಜತೆಗೆ ಕಾವಲು ನಿಂತ ನಾಯಿ, ಹಸು ಕರುವಿನ ಕಲಾಕೃತಿಗಳು ಹಳ್ಳಿ ಸೊಗಡಿನ ಸೊಬಗು ಪ್ರದರ್ಶಿಸುತ್ತಿದೆ.

ಇದನ್ನೂ ಓದಿ : ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ ಹೆಸರಿಗಷ್ಟೇ ಹೆದ್ದಾರಿ : ಇದು ಕತ್ತಲ ದಾರಿ

ಇಂದು ಗೂಡುದೀಪ ಉದ್ಘಾಟನೆ
ಮಾ.16ರಿಂದ ಸ್ವರಾಜ್‌ ಮೈದಾನದಲ್ಲಿ ಗೂಡುದೀಪ ಉದ್ಘಾಟನೆಯಾಗಲಿದೆ. ಕಾರ್ಕಳ ಕ್ಷೇತ್ರದ 1ರಿಂದ 10 ನೇ ತರಗತಿಯ ಮಕ್ಕಳಿಗೆ ಪ್ರತೀ ಶಾಲೆಯಿಂದ ತಲಾ ಒಂದು ಗೂಡುದೀಪದ ನೋಂದಾವಣೆಯೊಂದಿಗೆ ಸ್ಪರ್ಧೆ ನಡೆಯುತ್ತದೆ. ಸಾಂಪ್ರದಾಯಿಕ ಅಥವಾ ಆಧುನಿಕ ಗೂಡುದೀಪಗಳ ಸ್ಪರ್ಧೆಗೆ ಅವಕಾಶವಿದೆ. ವಿಜೇತರಿಗೆ ಬಹುಮಾನವಿದೆ. ಸ್ಪರ್ಧೆಯಲ್ಲಿ ಗೂಡುದೀಪಗಳಲ್ಲದೆ, ಮಂಗಳೂರು ನಮ್ಮ ಕುಡ್ಲ ತಂಡದಿಂದ ಸುಮಾರು 100 ದೊಡ್ಡ ಗಾತ್ರದ ಸಾಂಪ್ರದಾಯಿಕ ಹಾಗೂ ಆಧುನಿಕ ಗೂಡುದೀಪಗಳ ಪ್ರದರ್ಶನವಿರುತ್ತದೆ.

ಇಂದು ಪ್ರಾಣೇಶ್‌ ತಂಡದಿಂದ ಹಾಸ್ಯ
ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್‌, ಬಸವರಾಜ ಮಹಾಮನಿ, ಗಂಗಾವತಿ ನರಸಿಂಹ ಜೋಶಿ, ಯಶವಂತ ಸರ್‌ದೇಶ್‌ ಪಾಂಡೆ ಇವರಿಂದ ಸಂಜೆ 6ರಿಂದ ಕನ್ನಡ ಹಾಸ್ಯ, ರಾಜಸ್ಥಾನ, ಕಾಶ್ಮೀರ ಮಹಾರಾಷ್ಟ್ರ ರಾಜ್ಯಗಳ ಚಡಯ್‌, ತೇರತಾಲಿ, ರೌಫ್, ವಚನಾಗಿಯಾ, ತರ್ಪಾ ಜಾನಪದ ನೃತ್ಯಗಳು ನಡೆಯಲಿವೆ. ರಾತ್ರಿ 8.45ರಿಂದ ತುಳು ನಾಟಕ ನಮಸ್ಕಾರ ಮೇಸ್ಟ್ರೇ ಪ್ರದರ್ಶನಗೊಳ್ಳಲಿದೆ.

ಉತ್ಸವ ಸೇನಾನಿಗಳಿಗೆ ಮೆಚ್ಚುಗೆಯ ಸುರಿಮಳೆ
ಕಾರ್ಕಳ ಉತ್ಸವದ ಯಶಸ್ವಿಗೆ 37 ಸಮಿತಿಗಳು, ಸ್ವಯಂ ಸೇವಕರು ಅಹರ್ನಿಶಿ ದುಡಿಯುತ್ತಿದ್ದಾರೆ. ಇವರ ಜತೆಗೆ ಮೆಸ್ಕಾಂ, ಪೊಲೀಸ್‌ ಇಲಾಖೆ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬಂದಿ ಹಗಲಿರುಳೆನ್ನದೆ ಬೆವರು ಹರಿಸುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಇಲ್ಲೆ ಮೊಕ್ಕಾಂ ಹೂಡಿದ್ದಾರೆ. ಎಲ್ಲಿಯೂ ಎಳ್ಳಷ್ಟು ಗೊಂದಲಗಳು ಏರ್ಪಡದಂತೆ ನಿರ್ವಹಣೆ ಮಾಡುತ್ತಿದ್ದಾರೆ. ಸ್ವತ್ಛತೆಯ ಕಾರ್ಮಿಕರು, ತಂಡದವರು ಇಷ್ಟೊಂದು ಜನಸಂದಣಿಯ ಮಧ್ಯೆ ನಗರ, ಸ್ವರಾಜ್‌ ಮೈದಾನ, ಗಾಂಧಿ ಮೈದಾನಗಳಲ್ಲಿ ಕಸ ಕಣ್ಣಿಗೆ ಕಾಣದಂತೆ ತೆರವುಗೊಳಿಸಿ ಸ್ವತ್ಛವಾಗಿಟ್ಟಿರುವುದು ಸಾಧನೆ ಎನ್ನುವಂತಿದೆ. ಸ್ವತ್ಛತೆ, ಅಚ್ಚುಕಟ್ಟಾದ ನಿರ್ವಹಣೆ ಕಂಡು ಹೊರ ಭಾಗದಿಂದ ಬಂದವರೆಲ್ಲ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.