ಹುಣಸೂರು: ಹಾಲಿನ ವಾಹನ ಪಲ್ಟಿ; ಚಾಲಕನ ದುರ್ಮರಣ, ಮತ್ತಿಬ್ಬರಿಗೆ ಗಾಯ
Team Udayavani, Dec 27, 2021, 9:28 AM IST
ಹುಣಸೂರು: ಚಾಲಕನ ನಿಯಂತ್ರಣ ತಪ್ಪಿ ಹಾಲಿನ ವ್ಯಾನ್ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿದ್ದರೆ, ಮತ್ತಿಬ್ಬರಿಗೆ ತೀವ್ರ ಗಾಯವಾಗಿರುವ ಘಟನೆ ವಿರಾಜಪೇಟೆ ರಸ್ತೆಯಲ್ಲಿ ಜರುಗಿದೆ.
ಹುಣಸೂರು ತಾಲೂಕಿನ ಮರೂರು ಗ್ರಾಮದ ಅಜಯ್ (34) ಅಪಘಾತದಲ್ಲಿ ಮೃತಪಟ್ಟ ದುರ್ಧೈವಿ.
ಎಂದಿನಂತೆ ಶನಿವಾರ ರಾತ್ರಿ ಹಾಲಿನ ವಿತರಣೆಗಾಗಿ ತೆರಳಿದ್ದ ಅಜಯ್ ವಿರಾಜಪೇಟೆ ತಾಲೂಕಿನ ಐಮಂಗಲದ ತೆರಳುತ್ತಿರುವ ವೇಳೆ ಎದುರಿನಿಂದ ವಾಹನ ಬಂದಿದ್ದರಿಂದ ಅಫಘಾತ ತಪ್ಪಿಸಲು ಹೋಗಿ ಬ್ರೇಕ್ ಹಾಕಿದ್ದಾರೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬಂದ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ವಾಹನ ಪಲ್ಟಿಯಾಗಿದ್ದು, ಅಜಯ್ ಸಾವನ್ನಪಿದ್ದಾರೆ. ಮತ್ತಿಬ್ಬರಿಗೆ ಗಂಭೀರ ಗಾಯವಾಗಿದ್ದು, ದಾರಿಹೋಕರ ಮಾಹಿತಿ ಮೇರೆಗೆ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.