ಕಾಣೆಯಾಗಿದ್ದ ವಿಶೇಷ ಚೇತನ ಬಾಲಕ ಹಳ್ಳದಲ್ಲಿ ಪತ್ತೆ
Team Udayavani, Nov 30, 2021, 10:07 AM IST
ಮುದ್ದೇಬಿಹಾಳ: ರವಿವಾರ ಮದ್ಯಾಹ್ನ 2 ಗಂಟೆಯಿಂದ ಕಾಣೆಯಾಗಿದ್ದ 11 ವರ್ಷದ ವಿಶೇಷ ಚೇತನ ಬಾಲಕ ಸಂತೋಷ ಮಾದರ ಗ್ರಾಮದ ಪಕ್ಕದ ಹಳ್ಳದಲ್ಲಿ ಕುಳಿತ ಸ್ಥಿತಿಯಲ್ಲಿ ಸೋಮವಾರ ಪತ್ತೇ ಆಗಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಬನೋಶಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮದ್ಯಾಹ್ನದಿಂದ ಕಾಣೆಯಾಗಿದ್ದ ಈತನಿಗಾಗಿ ಪಾಲಕರು ಎಲ್ಲಾ ಕಡೆ ಹುಡುಕಾಡಿದ್ದರು. ಈತನ ಎಲ್ಲಾದರೂ ಕಂಡು ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಕರೆತರಲು ಅಥವಾ ಮಾಹಿತಿ ನೀಡಲು ಆತನ ಭಾವಚಿತ್ರ ಸಮೇತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು. ಸೋಮವಾರ ಮದ್ಯಾಹ್ನ ಗ್ರಾಮದ ಪಕ್ಕದ ಹಳ್ಳದ ಕಡೆ ಆಕಸ್ಮಿಕವಾಗಿ ಹೋಗಿದ್ದ ಯುವಕರಿಬ್ಬರ ಕಣ್ಣಿಗೆ ಬಾಲಕ ಬಿದ್ದಿದ್ದಾನೆ. ಕೂಡಲೇ ಪಾಲಕರನ್ನು ಸ್ಥಳಕ್ಕೆ ಕರೆಸಿ ಹಳ್ಳದ ನೀರಲ್ಲಿ ತಲೆ ಮಾತ್ರ ಕಾಣುವಂತೆ ಕುಳಿತಿದ್ದ ಆತನನ್ನು ಉಪಾಯದಿಂದ ಮೇಲೆ ಕರೆತಂದಿದ್ದಾರೆ.
ಬಾಲಕ ರಾತ್ರಿಯಿಡಿ ಹಳ್ಳದ ನೀರಲ್ಲಿ ಕುಳಿತು, ತನ್ನ ಸುತ್ತಲೂ ಇದ್ದ ಹಳ್ಳದ ಕೆಸರನ್ನು ದಂಡೆಯ ಮೇಲೆ ಎರಚಿ ತನ್ನ ಸುತ್ತಲೂ ಹೊಂಡವೊಂದನ್ನು ನಿರ್ಮಿಸಿಕೊಂಡಿದ್ದ. ಇನ್ನೂ ಸ್ವಲ್ಪ ಸಮಯ ಅಲ್ಲೇ ಬಿಟ್ಟಿದ್ದರೆ ಹಳ್ಳದ ನೀರಲ್ಲಿ ಮುಳುಗುವ ಸಂಭವವಿತ್ತು, ಸದ್ಯ ಬಾಲಕ ಆರೋಗ್ಯವಾಗಿದ್ದು ಪಾಲಕರ ಆಸರೆಯಲ್ಲಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ