ಗಡಿ ದಾಟಲು ನೀಡಿದ ಅವಕಾಶದ ದುರುಪಯೋಗ: ದೂರು ಸಲ್ಲಿಕೆ
Team Udayavani, Apr 10, 2020, 6:30 AM IST
ಸಾಂದರ್ಭಿಕ ಚಿತ್ರ..
ಉಳ್ಳಾಲ: ಕಾಸರಗೋಡಿನಿಂದ ಮಂಗಳೂರಿಗೆ ಬರುವ ತುರ್ತು ಆರೋಗ್ಯ ಸೇವೆಯ ಆ್ಯಂಬುಲೆನ್ಸ್ಗಳಿಗೆ ತಲಪಾಡಿಯಲ್ಲಿ ಷರತ್ತುಬದ್ಧವಾಗಿ ರಸ್ತೆಯನ್ನು ತೆರೆಯಲಾಗಿದೆ. ಆದರೆ ಕೇರಳದಿಂದ ಬರುವ ಕೆಲವು ರೋಗಿಗಳು ಈ ಸೌಲಭ್ಯವನ್ನು ದುರುಪಯೋಗ ಮಾಡುತ್ತಿದ್ದಾರೆ ಎಂದು ಉಳ್ಳಾಲ ಪೊಲೀಸ್ ಠಾಣೆಗೆ ಎರಡು ದೂರುಗಳು ಸಲ್ಲಿಕೆಯಾಗಿವೆ.
ಸುಪ್ರೀಂ ಕೋರ್ಟ್ ತೀರ್ಪಿನಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೇರಳದ ರೋಗಿಗಳಿಗೆ ಮಂಗಳೂರಿ ನಲ್ಲಿ ಚಿಕಿತ್ಸೆಗೆ ಅವಕಾಶ ನೀಡಲು ಒಪ್ಪಿತ್ತು. ಅದಕ್ಕಾಗಿ ತನ್ನ ವೆಬ್ಸೈಟ್ನಲ್ಲಿ ಅರ್ಜಿ ನಮೂನೆಯನ್ನು ಪ್ರಕಟಿಸಿದ್ದು ರೋಗಿಗಳು ಬರುವಾಗ ಆ ಅರ್ಜಿಯಲ್ಲಿ ಕಾಸರಗೋಡು ಜಿಲ್ಲಾ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಶಿಫಾರಸು ಮಾಡಿ ಸಹಿ ಹಾಕಬೇಕು ಮತ್ತು ಕೋವಿಡ್ 19 ಸೋಂಕಿತರಲ್ಲ ಎನ್ನುವ ಪ್ರಮಾಣ ಪತ್ರ ಸಲ್ಲಿಸಿದರೆ ಮಾತ್ರ ಗಡಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ತೆರಳಲು ಅವಕಾಶ ನೀಡಲಾಗುವುದು ಎಂದು ತಿಳಿಸಿತ್ತು.
ಆದರೆ ಬುಧವಾರ ದಾಖಲಾಗಿದ್ದ ಇಬ್ಬರು ರೋಗಿಗಳು ವ್ಯವಸ್ಥೆಯನ್ನು ದುರುಪಯೋಗ ಮಾಡಿರುವುದು ಕಂಡುಬಂದಿದೆ. ತಲೆನೋವೆಂದು ಬಂದಿದ್ದ ರೋಗಿ ವೈದ್ಯರಿಂದ ಪ್ರಾಥಮಿಕ ತಪಾಸಣೆ ಪಡೆದಿದ್ದ. ಅಷ್ಟರಲ್ಲಿ ಕಾಸರಗೋಡಿನಿಂದ ಇನ್ನೋರ್ವ ರೋಗಿಯನ್ನು ಹೊತ್ತ ಸರಕಾರಿ ಆ್ಯಂಬುಲೆನ್ಸ್ ಬಂದಿದ್ದು, ಈ ವ್ಯಕ್ತಿ ವೈದ್ಯರಿಗೆ ಯಾವುದೇ ಮಾಹಿತಿ ನೀಡದೆ ಆ ಆ್ಯಂಬುಲೆನ್ಸ್ನಲ್ಲಿ ಪರಾರಿಯಾಗಿದ್ದಾನೆ ಎಂದು ಉಳ್ಳಾಲ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಗಡಿಯಲ್ಲಿ ಕೋವಿಡ್ 19 ಪರೀಕ್ಷೆ ಅನುಮಾನ
ದ.ಕ. ಜಿಲ್ಲಾಡಳಿತದ ಷರತ್ತಿನಂತೆ ಕೋವಿಡ್ 19 ಪರೀಕ್ಷೆಯ ಪ್ರಮಾಣ ಪತ್ರ ಅಗತ್ಯವಿದ್ದರೂ ತಲಪಾಡಿ ಗಡಿಯಲ್ಲಿ ಕಾಸರಗೋಡಿನ ಜಿಲ್ಲಾಸ್ಪತ್ರೆಯವರು ನೀಡುತ್ತಿರುವ ಪ್ರಮಾಣಪತ್ರ ಅನುಮಾನಕ್ಕೆ ಎಡೆ ಮಾಡಿದೆ. ಹೃದಯ ಕಾಯಿಲೆಯಿಂದ ಖಾಸಗಿ ಆಸ್ಪತ್ರೆಗೆ ಆಗಮಿಸಿದ್ದ ರೋಗಿಯೊಬ್ಬರಿಗೆ ಜ್ವರದ ಲಕ್ಷಣ ಕಂಡು ಬಂದಿರುವುದು ಇದಕ್ಕೆ ಕಾರಣ. ಆತನನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ ಕೋವಿಡ್ ಸೋಂಕಿನ ತಪಾಸಣೆ ನಡೆಸಿ ಮತ್ತೆ ಖಾಸಗಿ ಆಸ್ಪತ್ರೆಗೆ ಮರಳಿ ಕರೆತರಲಾಗಿದೆ. ಈ ಪ್ರಕರಣದ ಬಗ್ಗೆಯೂ ದೂರು ದಾಖಲಾಗಿದೆ. ಆತನಿಗೆ ಕೋವಿಡ್ ಸೋಂಕು ಇರುವ ಬಗ್ಗೆ ದೃಢವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ