ಮೂಡುಬಿದಿರೆ: ಶುಕ್ರ”ವಾರದ’ ಸಂತೆ; ಶನಿವಾರ ಕಸದ ಕಂತೆ
ಒಣಕಸ, ಹಸಿಕಸ ವಿಂಗಡನೆಗಿಲ್ಲವೇಕೆ ವ್ಯವಸ್ಥೆ ?
Team Udayavani, Oct 17, 2021, 5:45 AM IST
ಮೂಡುಬಿದಿರೆ: ಪುರಸಭೆಯ ದಿನವಹಿ ಮಾರುಕಟ್ಟೆ ಪೇಟೆಯಿಂದ ಸ್ವರಾಜ್ಯಮೈದಾನಕ್ಕೆ ತಾತ್ಕಾಲಿಕ ನೆಲೆಯಲ್ಲಿ ಸ್ಥಳಾಂತರಗೊಂಡು ವರುಷಗಳೇ ಉರುಳಿವೆ. ಅತ್ತ ಶರವೇಗದಲ್ಲಿ ನಿರ್ಮಾಣಗೊಳ್ಳುತ್ತಿದ್ದಂತೆಯೇ ಕೋರ್ಟ್ ವ್ಯಾಜ್ಯದೊಳಗೆ ಸಿಲುಕಿಕೊಂಡು “ಇಲ್ಲಿರ ಲಾರೆ, ಅಲ್ಲಿಗೆ ಹೋಗಲಾರೆ’ ಎಂಬ ಸ್ಥಿತಿಯಲ್ಲಿ ಹಾಗೂ ಹೀಗೂ ಕಾಲ ಸವೆಸು ತ್ತಿರುವ ಈ ಮಾರುಕಟ್ಟೆಯಲ್ಲಿ ಶುಕ್ರವಾರ ನಡೆಯುವ ವಾರದ ಸಂತೆ ತೀರಾ ಅವ್ಯವಸ್ಥೆಯೊಳಗೆ ನರಳುತ್ತಿದೆ.
ಸಂತೆ ಎಂದಾಕ್ಷಣ ತ್ಯಾಜ್ಯ ಸಮಸ್ಯೆ ಇದ್ದದ್ದೇ. ಶುಕ್ರವಾರ ಸಂತೆ ಮುಗಿದಾಗ ವ್ಯಾಪಾರಿಗಳು ಉಳಿಕೆ, ತ್ಯಾಜ್ಯ ವಸ್ತುಗಳನ್ನು ಅಲ್ಲಲ್ಲೇ ಪೇರಿ ಸಿಟ್ಟು ಹೋಗಿಬಿಡುತ್ತಾರೆ. ಶನಿವಾರ ಮುಂಜಾನೆ ಬೇಗನೇ ಬಂದವರ ಕಣ್ಣಿಗೆ ರಾಚುವಂತೆ ಕಸದ ಕಂತೆ ಕಾಣಿಸುತ್ತದೆ. ಹಸಿ, ಒಣ ಕಸದ ವಿಲೇವಾರಿಗಾಗಿ ಇಲ್ಲಿ ಅಲ್ಲಲ್ಲಿ ತೊಟ್ಟಿಗಳನ್ನಿರಿಸಿದಿದ್ದರೆ ಸ್ವಚ್ಛತ ಕಾರ್ಮಿಕರಿಗೂ ಅನುಕೂಲ. ರಣಾಂಗಣದಂತೆ ಕಾಣುವ ಈ ಸ್ಥಿತಿಗೆ ಇನ್ನಾದರೂ ಮುಕ್ತಿ ಸಿಗಬಹುದೇ ಕಾದುನೋಡ ಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
Pilikula: “ಫ್ಯಾನ್-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!
Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ
Moodabidri: ಬೃಹತ್ ಜೈನ ಆರಾಧನಾ ಕೋಶದ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ
Mangaluru: CCB ಪೊಲೀಸರ ಕಾರ್ಯಾಚರಣೆ… ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ