ನಾನು ಅಮ್ಮನ ಕನಸಿನಲ್ಲಿ ಎಚ್ಚರವಾಗಿರುತ್ತೇನೆ, ಅವಳು ನನ್ನ ಕನಸಿನಲ್ಲಿ ಎಚ್ಚರವಾಗಿರುತ್ತಾಳೆ

ಪ್ರತೀ ಬಾರಿ ನನ್ನ ಕಣ್ಣಲ್ಲಿ ನೀರು ಬಂದಾಗ ಅಮ್ಮನ ಮಡಿಲೇ ಆಸರೆ

Team Udayavani, May 10, 2020, 1:42 PM IST

Mother-09

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಅಪ್ಪ ಅಮ್ಮ ನನ್ನ ಜಗತ್ತು, ಇವರಿಬ್ಬರು ನನ್ನ ಶಕ್ತಿ ಅಂತ ಹೇಳಬಹುದು. ಪ್ರತೀ ಬಾರಿ ನಮಗೆ ಏನಾದರೂ ನೋವಾದಾಗ, ಎಡವಿದಾಗ ನಮ್ಮ ಬಾಯಿಂದ ಬರುವ ಪದವೇ ಅಮ್ಮ. ಪ್ರೀತಿಗೆ ಇನ್ನೊಂದು ಅರ್ಥ ಅಮ್ಮ.

ಪ್ರತೀ ಬಾರಿ ನನ್ನ ಕಣ್ಣಲ್ಲಿ ನೀರು ಬಂದಾಗ ಅಮ್ಮನ ಮಡಿಲೇ ನನಗೆ ಆಸರೆ. ಅವಳ ಮಡಿಲಿನಲ್ಲಿ ಬಂದು ಮಲಗಿ ಅತ್ತರೆ ಏನೋ ಒಂದು ರೀತಿಯ ನೆಮ್ಮದಿ.

ಮನಸ್ಸಿಗೆ ನೋವಾಗಿ ಜೀವನ ಇನ್ನೇನು ಮುಗಿತು ಎಂದು ಕೊಂಡಾಗ, ನಾನು ಸೋತೆ  ಅಮ್ಮ ಎಂದು ಅವಳ ಮಡಿಲಿನಲ್ಲಿ ಮಲಗಿ ಹೇಳಿದರೆ, ಆಕೆ ತಲೆ ಸವರಿ ಹೇಳುವ ಒಂದೊಂದು ಮಾತು ಗೆಲ್ಲುವ ಛಲವನ್ನು ಹುಟ್ಟಿಸುತ್ತದೆ.

ಹಿಂದೆ ಅಮ್ಮನ ಜೊತೆಗೇ ಇದ್ದೆ. ಆಗ ಅಮ್ಮ ಸದಾ ನನ್ನ ಜೊತೆಗೆ ಇದ್ದಳು. ಆದ್ರೆ ಉನ್ನತ ಶಿಕ್ಷಣಕ್ಕಾಗಿ ಬೇರೆ ಊರಿಗೆ ಹೋಗಬೇಕಾಯಿತು. ಮೊದ ಮೊದಲು ನಿದ್ದೆ ಬರ್ತಾ ಇರಲಿಲ್ಲ.

ನನಗೆ ಅಮ್ಮನ ಪಕ್ಕ ಮಲಗಿ ಅಭ್ಯಾಸ, ಅವಳು ನನಗೆ ನಿದ್ದೆ ಬರುವ ತನಕ ತಲೆ ಸವರುತ್ತಿದ್ದಳು, ಅವಳ ಬೆರಳುಗಳು ನನ್ನ ಎದೆಯ ಮೇಲೆ ಇದ್ದರೆ ಮಾತ್ರ ನನಗೆ ನಿದ್ದೆ ಬರುತ್ತಿತ್ತು. ಅವಳು ಹಾಗೆ ಕೈ ಇಟ್ಟರೆ ನನಗೇನೋ ಧೈರ್ಯ, ಏನೋ ಅವಳ ಕೈ ನನಗೆ ಸಕಾರಾತ್ಮಕ ಶಕ್ತಿ. ಹಾಗಾಗಿ ಬೇಗ ನಿದ್ದೆ ಬರುತ್ತಿತ್ತು.

ಆದ್ರೆ ಓದಿಗಾಗಿ ಬೇರೆ ಊರಿಗೆ ಬಂದಾಗ, ಅಮ್ಮ ಹತ್ತಿರ ಇಲ್ಲದೆ ನಿದ್ದೆ ಬಾರದೆ, ಅತ್ತಿಂದಿತ್ತ ಹೊರಳಾಡಿ, ಅತ್ತು, ಅಮ್ಮನ ಫೋಟೋ ನೋಡಿ ಮಲಗಿದ್ದು ಉಂಟು. ಅದೆಷ್ಟೋ ಬಾರಿ ಅಮ್ಮ ನನ್ನ ಕನಸಿನಲ್ಲಿ ಬಂದಿದ್ದಾಳೆ.

ಅವಳು ತಲೆ ಸವರುತ್ತಿರುವ ಕನಸು, ಮತ್ತೊಮ್ಮೆ ದಾರಿ ತಪ್ಪಬೇಡ ಎನ್ನುವ ಎಚ್ಚರಿಕೆಯ ಕನಸು. ಆಕೆ ಹೆಮ್ಮೆಪಡುವ ಕೆಲಸವನ್ನು ನಾನು ಮಾಡಿ, ಸಾವಿರಾರು ಜನರು ನನ್ನನ್ನು ಪ್ರಶಂಸಿಸುವ ಸಂದರ್ಭದಲ್ಲಿ, ಅಮ್ಮ ನನ್ನನ್ನು ಎದೆಗಪ್ಪಿ ಮುದ್ದಾಡಿದ ಕನಸು.

ಹೀಗೆ ಅಮ್ಮ ನನ್ನ ಕನಸಿನಲ್ಲಿ ಬಂದ ಬಗೆಯನ್ನು ಹೇಳುತ್ತಾ ಹೋದ್ರೆ ಬಹುಶಃ ಅದಕ್ಕೆ ಕೊನೆಯಿಲ್ಲ. ನನ್ನ ಕನಸಿನಲ್ಲಿ, ಮನಸಿನಲ್ಲಿ ಸದಾ ಇರ್ತಾಳೆ ಅವಳು. ಯಾಕೆಂದ್ರೆ ಅವಳು ನನ್ನನ್ನು ತುಂಬಾ ಪ್ರೀತಿಸುತ್ತಾಳೆ, ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ.

ಹಾಗಾಗಿ, ನಾನು ಅಮ್ಮನ ಕನಸಿನಲ್ಲಿ ಎಚ್ಚರವಾಗಿರುತ್ತೇನೆ, ಅವಳು ನನ್ನ ಕನಸಿನಲ್ಲಿ ಎಚ್ಚರವಾಗಿರುತ್ತಾಳೆ.

– ಚೈತ್ರಾ, ಉಡುಪಿ

ಟಾಪ್ ನ್ಯೂಸ್

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಗು ಹುಟ್ಟಿದಾಗ ಕಣ್ಣು ಕಲ್ಪನೆಗೆ ಬಂದಾಗ ಮೊದಲು ಕಾಣುವ ಮುಖವೇ ಅಮ್ಮನದ್ದು

ಮಗು ಹುಟ್ಟಿದಾಗ ಕಣ್ಣು ಕಲ್ಪನೆಗೆ ಬಂದಾಗ ಮೊದಲು ಕಾಣುವ ಮುಖವೇ ಅಮ್ಮನದ್ದು

‘ಮಾತೃದೇವೋಭವ’: ಅಮ್ಮನ ಬಗ್ಗೆ ಹೇಳಲು ಪದಗಳೇ ಸಾಲದು…. ಅವಳಿಗೆ ಅವಳೇ ಸಾಟಿ….

‘ಮಾತೃದೇವೋಭವ’: ಅಮ್ಮನ ಬಗ್ಗೆ ಹೇಳಲು ಪದಗಳೇ ಸಾಲದು…. ಅವಳಿಗೆ ಅವಳೇ ಸಾಟಿ….

ನೋವಲ್ಲಿ ಶೋಕ ಸಾಗರವೇ ಬಂದರು ದಾರಿ ಸವೆಸಿ ಕಂದನ ಬರಸೆಳೆದಪ್ಪುವಳು

ನೋವಲ್ಲಿ ಶೋಕ ಸಾಗರವೇ ಬಂದರು ದಾರಿ ಸವೆಸಿ ಕಂದನ ಬರಸೆಳೆದಪ್ಪುವಳು

Mother-08

ನವಮಾಸ ನಮ್ಮನ್ನು ಹೊತ್ತು, ಹೆರುವ ಆಕೆಗೆ ಕೇವಲ ಒಂದು ದಿನ ಇತ್ತರೆ ಸಾಕೇ?

‘ಜನನಿ ಮತ್ತು ಜನ್ಮಭೂಮಿ’; ಹೆತ್ತ ತಾಯಿ ಮತ್ತು ಹೊತ್ತ ತಾಯಿಯನ್ನು ನೆನಪಿಸಿಕೊಳ್ಳುವ ಸುದಿನ

‘ಜನನಿ ಮತ್ತು ಜನ್ಮಭೂಮಿ’; ಹೆತ್ತ ತಾಯಿ ಮತ್ತು ಹೊತ್ತ ತಾಯಿಯನ್ನು ನೆನಪಿಸಿಕೊಳ್ಳುವ ಸುದಿನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.