ಮ್ಯಾನ್ಮಾರ್: ಹೊರಗಿನಿಂದಲೇ ಸೋಂಕು
Team Udayavani, Jun 19, 2020, 10:52 AM IST
ಯಾಂಗೂನ್: ಮ್ಯಾನ್ಮಾರ್ನಲ್ಲೂ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದ್ದು, ನಿಯಂತ್ರಣ ಸವಾಲೆನಿಸಿದೆ.
ಈವರೆಗೆ 262 ಪ್ರಕರಣಗಳು ವರದಿಯಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ. ಕೋವಿಡ್ ಸೋಂಕು ಪೀಡಿತರಲ್ಲಿ ಹೆಚ್ಚಿನವರು ರೊಹಿಂಗ್ಯಾ ಸಮುದಾಯದವರಾಗಿದ್ದು, ಇವರಿಗೆಲ್ಲ ಹೊರಗಿನಿಂದಲೇ ಸೋಂಕು ಬಂದಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
ಮ್ಯಾನ್ಮಾರ್, ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿದ್ದು, ಅಲ್ಲಿಂದ ಬಂದವರೇ ಈಗ ಕೋವಿಡ್ ಸೋಂಕು ಹರಡಲು ಕಾರಣವಾಗಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ. ಕೆಲವರು ಅಕ್ರಮ ವಾಗಿಯೂ ಬಂದಿರಬಹುದು ಎನ್ನುವುದು ಅವರ ಆರೋಪ. ಇನ್ನು ಒಟ್ಟು ಸೋಂಕಿತರಲ್ಲಿ ಮೂರನೇ ಒಂದರಷ್ಟು ಪಾಲು ರೊಹಿಂಗ್ಯಾ ಮಹಿಳೆಯರೇ ಇದ್ದಾರೆ. ಮ್ಯಾನ್ಮಾರ್ನ ಮಾಂಗ್ಡಾವ್ ಎಂಬಲ್ಲಿ ಅತಿ ಹೆಚ್ಚು ಸೋಂಕು ಪೀಡಿತರು ಕಂಡುಬಂದಿದ್ದು, ಎಲ್ಲ ರೋಗಿಗಳಲ್ಲಿ ಈಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಿಮೆ ರೋಗ ಲಕ್ಷಣ ಇರುವವರನ್ನು ಪ್ರತ್ಯೇಕವಾಗಿ ಇಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಬಾಂಗ್ಲಾ ಅಡಿಯಲ್ಲಿ ಅಕ್ರಮ ಪ್ರವೇಶದಿಂದಾಗಿ ಸೋಂಕು ಹರಡುವಿಕೆ ಅಂಕೆಗೆ ಸಿಗದೇ ಇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದೇ ವೇಳೆ ರೊಹಿಂಗ್ಯಾಗಳ ವಿರುದ್ಧ ಕೋವಿಡ್ ಹೆಸರಲ್ಲಿ ಇನ್ನಷ್ಟು ಹಿಂಸೆ ನಡೆಯುವ ಸಾಧ್ಯತೆ ಇದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ರೊಹಿಂಗ್ಯಾಗಳು ಬಾಂಗ್ಲಾ ಗಡಿಯಲ್ಲಿ ಸಂಚರಿಸುವುದು ಮತ್ತು ಅವರಲ್ಲಿ ಕೆಲವರು ಅಕ್ರಮ ದಾರಿಗಳಲ್ಲಿ ಸಂಚರಿಸುವುದರಿಂದ ಮ್ಯಾನ್ಮಾರ್ ಪೊಲೀಸರು ಅವರನ್ನು ವಶಕ್ಕೆ ಪಡೆದು, ಹಿಂಸಿಸುವ ಅಪಾಯವಿದೆ ಎನ್ನಲಾಗದೆ. ಇದೇ ವೇಳೆ ಅಲ್ಲಿನ ಅಧಿಕಾರಿಗಳೂ ಲಂಚ ಪಡೆದು ಜನರನ್ನು ಗಡಿಯಲ್ಲಿ ಬಿಡುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ