ಮುದ್ರಾಡಿ: ನಾಟ್ಕಸ್ ನಾಟಕೋತ್ಸವಕ್ಕೆ ಚಾಲನೆ
Team Udayavani, Mar 11, 2021, 4:20 AM IST
ಹೆಬ್ರಿ : ಕರಾವಳಿಯ ರಂಗಾಯಣ ಉಡುಪಿಯಲ್ಲೇ ಮತ್ತೆ ಆರಂಭವಾಗಬೇಕು. ನಾಟಕ ರಂಗಭೂಮಿ ಯಲ್ಲಿ ಹಗಲಿರುಳು ಸೇವೆ ಮಾಡುವ “ನಮ ತುಳುವೆರ್’ ಕಲಾ ಸಂಘಟನೆಯಂತಹ ರಂಗಸೇವೆ ಮಾಡುವ ಸಂಸ್ಥೆಗಳು ಹೋರಾಟದ ಮುಂದಾಳತ್ವ ವಹಿಸಬೇಕು ಎಂದು ಹಿರಿಯ ರಂಗನಿರ್ದೇಶಕ ಗೋಪಾಲಕೃಷ್ಣ ನಾಯರಿ ಹೇಳಿದರು.
ಅವರು ಮುದ್ರಾಡಿ “ನಮ ತುಳುವೆರ್’ ಕಲಾ ಸಂಘಟನೆಯ ವತಿಯಿಂದ ನಾಟ್ಕದೂರಿನ ಆರೂರು ಕೃಷ್ಣಮೂರ್ತಿ ರಾವ್ ಬಯಲು ರಂಗಸ್ಥಳದಲ್ಲಿ ನಡೆಯುತ್ತಿರುವ ನಾಟ್ಕಸ್ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಮುದ್ರಾಡಿ ಎಂದರೆ ಕಲೆ ಆರಾಧನೆಯ ಉಪಾಸನೆ. ಎಲ್ಲ ಕೊರತೆಗಳ ನಡುವೆಯೂ ನಮ ತುಳುವೆರ್ಕಲಾ ಸಂಘಟನೆ ನಿರಂತರ ರಂಗ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರಿಗೆ ಗಿಡ ನೀಡುವ ಮೂಲಕ ಗೌರವಿಸಲಾಯಿತು.
ಮೇಕ್ಸಮ್ ವನ್ ಸ್ಮೈಲ್ ಸಂಸ್ಥೆ ಕಾರ್ಕಳ ಇವರಿಗೆ “ನಾಟ್ಕ ಸೇವಾ ಸಂಮಾನ್’ ಪ್ರದಾನ ಮಾಡಲಾಯಿತು. ಹಿರಿಯ ರಂಗ ನಿರ್ದೇಶಕ ಗುರುರಾಜ ಮಾರ್ಪಳ್ಳಿ, ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್, ಗಣಪತಿ ಮುದ್ರಾಡಿ, ಸಂಚಾಲಕ ಧರ್ಮಯೋಗಿ ಮೋಹನ್, ಉಮೇಶ್ ಕಲ್ಮಾಡಿ, ಸುರೇಂದ್ರ ಮೋಹನ್, ದೀಕ್ಷಾ, ಹೆಬ್ರಿ ಜೇಸಿಐ ಅಧ್ಯಕ್ಷ ಮಂಜುನಾಥ ಶಿವಪುರ ಮೊದಲಾದವರು ಉಪಸ್ಥಿತರಿದ್ದರು.
ಹಿರಿಯ ರಂಗ ನಿರ್ದೇಶಕ ಗುರುರಾಜ ಮಾರ್ಪಳ್ಳಿ ನಿರ್ದೇಶನದ “ಅವ್ವ ನನ್ನ ಅವ್ವ’ ಕನ್ನಡ ನಾಟಕ ಪ್ರದರ್ಶನಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ