ಅನುದಾನ ಬಂದರಷ್ಟೇ ಹೊಸ ಗ್ರಾಮ ಚಾವಡಿ ಕಟ್ಟಡ!

ನೂರೈವತ್ತು ವರ್ಷಗಳ ಹಳೆ ಕಟ್ಟಡವೇ ಸದ್ಯಕ್ಕಿರುವ ಆಸರೆ

Team Udayavani, Jul 6, 2020, 5:57 AM IST

ಅನುದಾನ ಬಂದರಷ್ಟೇ ಹೊಸ ಗ್ರಾಮ ಚಾವಡಿ ಕಟ್ಟಡ!

ವಿಶೇಷ ವರದಿಪುತ್ತೂರು: ಕಂದಾಯ ಇಲಾಖೆ ವ್ಯಾಪ್ತಿಯ ಬಹುತೇಕ ಕಚೇರಿಗಳು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಂಡರೂ ಗ್ರಾಮ ಚಾವಡಿ 150 ವರ್ಷಗಳ ಇತಿಹಾಸ ಹೊಂದಿರುವ ಪಟೇಲರ ಕಾಲದ ಕಟ್ಟಡದಲ್ಲೇ ಉಳಿದುಕೊಂಡಿದೆ!

ಮಿನಿ ವಿಧಾನಸೌಧದಲ್ಲಿ ಸ್ಥಳಾವಕಾಶದ ಕೊರತೆ ಇದೆ. ಸರಕಾರದಿಂದ ಅನುದಾನ ಬಂದರಷ್ಟೇ ಹೊಸ ಕಟ್ಟಡ ಕಟ್ಟುವ ಯೋಜನೆ ಇದ್ದು, ಅಲ್ಲಿಯ ತನಕ ಹಳೆ ಕಟ್ಟಡವೇ ಕಂದಾಯ ನಿರೀಕ್ಷಕರಿಗೆ, ಗ್ರಾಮಕರಣಿಕರಿಗೆ, ಗ್ರಾಮ ಲೆಕ್ಕಾಧಿಕಾರಿಗಳಿಗೆ ಮೀಸಲು.

ಶತಮಾನದ ಕಟ್ಟಡ
ನಗರದ ಕೋರ್ಟ್‌ ರಸ್ತೆಗೆ ಅಭಿಮುಖ ವಾಗಿರುವ ಈ ಕಟ್ಟಡಕ್ಕೆ 150 ವರ್ಷ ದಾಟಿದೆ ಅನ್ನುವುದು ಹಿರಿಯರ ಅಭಿಪ್ರಾಯ. ಸುಣ್ಣ-ಬಣ್ಣ ಕಾಣದೆ ವರ್ಷಗಳು ಕಳೆದರೂ ಸದೃಢವಾಗಿದೆ. ಒಳಭಾಗ ಸೋರುತ್ತಿಲ್ಲ. ದಾಖಲೆ ಪತ್ರಗಳನ್ನು ಭದ್ರವಾಗಿಡಲು ವ್ಯವಸ್ಥೆಯಿದೆ. ಕಿಟಿಕಿ- ಬಾಗಿಲುಗಳು ಒಂದಷ್ಟು ಕಳೆಗೆಟ್ಟಿವೆ ಎನ್ನು ವುದನ್ನು ಬಿಟ್ಟರೆ, ಮಿಕ್ಕೆಲ್ಲವೂ ಸುಭದ್ರ. ಕಟ್ಟಡದಲ್ಲಿ ಸ್ವಾತಂತ್ರ್ಯಪೂರ್ವದ ಪಟೇಲರ ಅಸ್ತಿತ್ವವನ್ನು ಗುರುತಿಸುವ ಸಾಕ್ಷಿಗಳಿವೆ.

ಗ್ರಾಮ ಲೆಕ್ಕಿಗರ ಕಚೇರಿ ವಿನ್ಯಾಸ ಹಳೆ ಕಟ್ಟಡಗಳ ಶೈಲಿಯಲ್ಲಿದೆ.ಒಳಭಾಗದಲ್ಲಿ ಕುಳಿತುಕೊಳ್ಳಲು ಕಲ್ಲಿನ ಆಸನ, ಗೋಡೆ ಶೈಲಿ ಇನ್ನಷ್ಟು ಚಿತ್ರಣ ತೆರೆದಿಡುತ್ತದೆ.

ಕಂದಾಯ ನಿರೀಕ್ಷಕರ ಕಚೇರಿ
ಗ್ರಾಮಮಟ್ಟದಿಂದ ಭೂ ದಾಖಲೆಗೆ ಸಂಬಂಧಿಸಿ ಬರುವ ಎಲ್ಲ ಕಡತಗಳು ಗ್ರಾಮಕರಣಿಕರ ಮೂಲಕ ಕಂದಾಯ ನಿರೀಕ್ಷಕರ ಕಚೇರಿಗೆ ಬರುತ್ತವೆ. ಅಲ್ಲಿಂದ ಟಪಾಲು ಮೂಲಕ ತಹಶೀಲ್ದಾರ್‌ಗೆ ಸಲ್ಲಿಕೆ ಆಗುತ್ತದೆ.

ಪುತ್ತೂರಿನ ಗ್ರಾಮ ಚಾವಡಿಯಲ್ಲಿ ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಿಗರ ಪ್ರತ್ಯೇಕ ಕಚೇರಿಗಳಿವೆ. ಒಂದು ಭಾಗದಲ್ಲಿ ಕಂದಾಯ ನಿರೀಕ್ಷಕರ ಕಚೇರಿ, ಇನ್ನೊಂದು ತಾಲೂಕಿನ ಎಲ್ಲ ಗ್ರಾಮ ಲೆಕ್ಕಿಗರು ಹಾಜಗಾರುವ ನಿಟ್ಟಿನಲ್ಲಿ ಛಾವಡಿ ಇದೆ. ಪುತ್ತೂರು ಹೋಬಳಿಯ ಎಲ್ಲ ಕಂದಾಯ ಲೆಕ್ಕಾಚಾರ ಇಲ್ಲೇ ನಡೆಯುತ್ತದೆ. ಇದು ಅಧಿಕಾರಿಗಳು ಮತ್ತು ಜನರು ದಿನಪೂರ್ತಿ ಓಡಾಟವಿರುವ ಕಚೇರಿಯು ಆಗಿದೆ. ಸುರಕ್ಷೆಯ ದೃಷ್ಟಿಯಲ್ಲಿ ಇದರ ಪುನರ್‌ ನಿರ್ಮಾಣದ ಬೇಡಿಕೆಯೂ ಇದೆ.

ಪಟೇಲರ ದಂಡ
ಪಟೇಲರ ಗೌರವಾರ್ಥ ಸಹಾಯಕ ಹಿಡಿದುಕೊಳ್ಳುವ ದಂಡ, ಪುತ್ತೂರು ಗ್ರಾಮ ಚಾವಡಿಯಲ್ಲಿ ಜೋಪಾನವಾಗಿರುವುದು ವಿಶೇಷ. ನ್ಯಾಯ ತೀರ್ಮಾನದ ಸ್ಥಳದಲ್ಲಿ ಇದನ್ನು ಹಿಡಿದುಕೊಳ್ಳಲಾಗುತ್ತದೆ. ನ್ಯಾಯಾಲಯದಲ್ಲಿ ಈಗಲೂ ದಂಡ ಹಿಡಿದುಕೊಳ್ಳುವ ಸಂಪ್ರದಾಯ ಮುಂದುವರಿದಿದೆ. ದಂಡದ ತುದಿ ಭಾಗದಲ್ಲಿ ಮೂರು ಕಬ್ಬಿಣದ ಪಟ್ಟಿಗಳಿವೆ. ಗ್ರಾಮ ಚಾವಡಿಯ ಹಂಚಿನ ಮೇಲೆ ಮೂರು ಕಲಶಗಳು ಶೋಭಿಸುತ್ತಿವೆ. ದೇವಸ್ಥಾನದ ಮುಗುಳಿ (ಕಲಶ)ಯನ್ನು ಹೋಲುತ್ತಿದ್ದು, ಇದು ಮಣ್ಣಿನ ರಚನೆಯದ್ದಾಗಿದೆ.

ಅನುದಾನ ಈಗಿಲ್ಲ
ಈಗ ಅನುದಾನ ಇಲ್ಲ. ಸರಕಾರದಿಂದ ಬಿಡುಗಡೆಯಾದಲ್ಲಿ ಹೊಸ ಕಟ್ಟಡ ಕಟ್ಟುವ ಬಗ್ಗೆ ಯೋಜನೆ ರೂಪಿಸಲಾಗುತ್ತದೆ.
– ರಮೇಶಬಾಬು
ತಹಶೀಲ್ದಾರ್‌, ಪುತ್ತೂರು

ಸಮಸ್ಯೆ ಉಂಟಾಗಿಲ್ಲ
ಹಳೆ ಕಟ್ಟಡವಾದರೂ ಈ ತನಕ ಸಮಸ್ಯೆ ಆಗಿಲ್ಲ. ಕಂದಾಯ ನಿರೀಕ್ಷಕರ ವ್ಯಾಪ್ತಿಯ ಎಲ್ಲ ಕೆಲಸಗಳು ಇಲ್ಲಿ ನಡೆಯುತ್ತವೆ.
-ರವಿ, ಕಂದಾಯ ನಿರೀಕ್ಷಕ, ಪುತ್ತೂರು

ಟಾಪ್ ನ್ಯೂಸ್

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Venur: ನಾಯಿಯನ್ನು ಹೊತ್ತೊಯ್ದ ಚಿರತೆ! ವೈರಲ್ ಆಯ್ತು ಸಿಸಿಟಿವಿ ದೃಶ್ಯ

Venur: ನಾಯಿಯನ್ನು ಹೊತ್ತೊಯ್ದ ಚಿರತೆ! ವೈರಲ್ ಆಯ್ತು ಸಿಸಿಟಿವಿ ದೃಶ್ಯ

Uppinangady ಬೆಲೆಬಾಳುವ ಮರ ಕಡಿದು ಸಾಗಾಟ

Uppinangady ಬೆಲೆಬಾಳುವ ಮರ ಕಡಿದು ಸಾಗಾಟ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.