ಉಡುಪಿ: ಬೀಚ್ನಲ್ಲಿ ರಾತ್ರಿ ಸಂಚಾರ ಬಂದ್
Team Udayavani, Jan 24, 2022, 5:15 AM IST
ಪಣಂಬೂರು: ಇಲ್ಲಿನ ಕಡಲ ಕಿನಾರೆಯಲ್ಲಿ ಜನರು ವಿಹರಿಸಿ ಸಂತೋಷಪಟ್ಟರು.
ಉಡುಪಿ: ಕೊರೊನಾ ನಿಯಂತ್ರಣ ಸಂಬಂಧ ಬೀಚ್ಗಳಲ್ಲಿ ರಾತ್ರಿ 7ರ ಅನಂತರ ಸಾರ್ವಜನಿಕರ ಪ್ರವೇಶ ನಿರ್ಬಂಧ ಹೇರಿರುವ ಜಿಲ್ಲಾಡಳಿತದ ಕ್ರಮಕ್ಕೆ ಸಾರ್ವಜನಿಕರು, ಪ್ರವಾಸಿಗರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರವಿವಾರ ಸಂಜೆಯ ಅನಂತರ ಮಲ್ಪೆ ಬೀಚ್ನಲ್ಲಿ ಸಾರ್ವಜನಿಕರು, ಪ್ರವಾಸಿಗರ ಸಂಖ್ಯೆ ತೀರ ಕಡಿಮೆ ಇತ್ತು. ವಾರಾಂತ್ಯ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮಲ್ಪೆ ಬೀಚ್ಗೆ ಬರುತ್ತಿದ್ದರು. ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿ ಮಾಡಿರುವುದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಬೀಚ್ ಬದಿಯ ವ್ಯಾಪಾರಸ್ಥರಿಗೂ ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರ ವಹಿವಾಟು ಇರಲಿಲ್ಲ.
ಪಣಂಬೂರು ಬೀಚ್ನಲ್ಲಿ ಜನವಿಹಾರ
ಪಣಂಬೂರು: ವಾರಾಂತ್ಯದ ಕರ್ಫ್ಯೂವನ್ನು ಸರಕಾರ ಸಡಿಲಗೊಳಿಸಿದ್ದು ರವಿವಾರ ಪಣಂಬೂರು ಬೀಚ್ನಲ್ಲಿ ಜನಜಂಗುಳಿ ಕಂಡುಬಂತು. ಕಳೆದ ಎರಡು ವಾರ ಮನೆಯೊಳಗಿದ್ದ ಜನತೆ ಕುಟುಂಬ ಸಹಿತ ಸಮುದ್ರ ದಡಕ್ಕೆ ಬಂದು ಸಂತಸಪಟ್ಟರು. ಹೊರ ಜಿಲ್ಲೆಗಳ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಪೊಲೀಸ್ ಮತ್ತು ಬೀಚ್ ಲೈಪ್ ಗಾರ್ಡ್ಗಳು ನಿಗಾ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್