ಆಗಸ್ಟ್ ತನಕ ಕ್ರಿಕೆಟ್ ಶಿಬಿರ ಇಲ್ಲ: ಸೌರವ್ ಗಂಗೂಲಿ
Team Udayavani, Jun 30, 2020, 6:16 AM IST
ಹೊಸದಿಲ್ಲಿ: ಭಾರತೀಯ ಕ್ರಿಕೆಟಿಗರ ಅಭ್ಯಾಸ ಶಿಬಿರವನ್ನು ಆಗಸ್ಟ್ ತನಕ ಏರ್ಪಡಿಸಲು ಸಾಧ್ಯವಿಲ್ಲ ಎಂಬುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಇದರಿಂದ ಭಾರತದ ಕ್ರಿಕೆಟ್ ಋತು ಸದ್ಯದಲ್ಲಿ ಆರಂಭವಾಗುವ ಯಾವುದೇ ಸಾಧ್ಯತೆ ಇಲ್ಲವಾಗಿದೆ.
“ಕೋವಿಡ್-19 ಇನ್ನೂ ನಿಯಂತ್ರಣಕ್ಕೆ ಬಾರದ ಕಾರಣ ಭಾರತದ ಕ್ರಿಕೆಟಿಗರಿಗೆ ಅಭ್ಯಾಸ ಶಿಬಿರವನ್ನು ಏರ್ಪಡಿಸುವ ಸಾಧ್ಯತೆ ಸದ್ಯಕ್ಕಿಲ್ಲ. ಆಗಸ್ಟ್ ಬಳಿಕವೇ ಈ ಬಗ್ಗೆ ಯೋಚಿಸಬೇಕಾಗುತ್ತದೆ’ ಎಂದು ಗಂಗೂಲಿ ಹೇಳಿದರು.
ಸದ್ಯ ಶ್ರೇಯಸ್ ಅಯ್ಯರ್, ಚೇತೇಶ್ವರ್ ಪೂಜಾರ ಮತ್ತು ರೋಹಿತ್ ಮಾತ್ರ ಅಭ್ಯಾಸ ಆರಂಭಿಸಿದ್ದಾರೆ. ಉಳಿದವರು ಲಾಕ್ಡೌನ್ ಅವಧಿಯನ್ನು ಕುಟುಂಬದವರೊಂದಿಗೆ ಕಳೆಯುತ್ತಿದ್ದಾರೆ.