ಡ್ರೆಜ್ಜರ್ನಲ್ಲಿ ತೈಲ ಸೋರಿಕೆಯಿಲ್ಲ: ಎನ್ಎಂಪಿಟಿ
ಕೆಟ್ಟು ಹೋದ ಭಗವತಿ ಪ್ರೇಮ್
Team Udayavani, Jul 7, 2020, 5:11 AM IST
ಸುರತ್ಕಲ್: ನವಮಂಗಳೂರು ಬಂದರಿನ ಹೂಳೆತ್ತಲು ಗುತ್ತಿಗೆ ಪಡೆದು ಬಂದಿದ್ದ ಮುಂಬಯಿಯ ಮಾರ್ಕೇಟರ್ ಲಿಮಿಟೆಡ್ನ ಭಗವತಿ ಪ್ರೇಮ್ ಡ್ರೆಜ್ಜರ್ ಕೆಟ್ಟು ಹೋದ ಪರಿಣಾಮ ಸುರತ್ಕಲ್ ಸಮೀಪದ ಗುಡ್ಡೆಕೊಪ್ಲದಲ್ಲಿ ಎನ್ಎಂಪಿಟಿ ಲಂಗರು ಹಾಕಿಸಿದ್ದು ಯಾವುದೇ ರೀತಿಯ ತೈಲ ಸೋರಿಕೆ ಆಗುತ್ತಿಲ್ಲ ಎಂದು ಮಂಡಳಿ ತಿಳಿಸಿದೆ.
ಮುಳುಗುವ ಸ್ಥಿತಿಯಲ್ಲಿದ್ದ ಈ ಡ್ರೆಜ್ಜರನ್ನು ಎನ್ಎಂಪಿಟಿ ಸಮುದ್ರ ಮಾಲಿನ್ಯವಾಗದಂತೆ ಎಲ್ಲ ಮುಂಜಾ ಗ್ರತಾ ಕ್ರಮ ಕೈಗೊಂಡಿತ್ತು. ಅದರಲ್ಲಿದ್ದ ಸಿಬಂದಿಯನ್ನು ರಕ್ಷಿಸಿ ಕಳೆದ ಡಿಸೆಂಬರ್ನಲ್ಲಿ ಅದರಲ್ಲಿದ್ದ ತೈಲ, ಕೀಲೆಣ್ಣೆಗಳನ್ನು ಅತ್ಯಾಧುನಿಕ ವ್ಯವಸ್ಥೆ ಬಳಸಿ ತೆಗೆಯಲಾಗಿತ್ತು. ಇದರ ನಿಗಾ ಕ್ಕಾಗಿ ಅಧಿ ಕಾರಿಗಳನ್ನು ನಿಯೋಜಿ ಸಲಾಗಿತ್ತು. ಬಂದರಿನ ಶುಲ್ಕ ಪಾವತಿಸಲು ವಿಫಲವಾದ ಬಳಿಕ ಬಂದರು ಮಂಡಳಿ ಇದನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಮುಂದಾಗಿದೆ. ಕಳೆದ ಜೂನ್ ತಿಂಗಳಲ್ಲಿ ಡ್ರೆಜ್ಜರ್ ವಾಲುತ್ತಿದ್ದು ಸಮುದ್ರ ಮಾಲಿನ್ಯದ ಭೀತಿಯಿದೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ ಎಂದು ಮಂಡಳಿ ತಿಳಿಸಿದೆ.
ಕಳೆದ ಅ.28ರಂದು ಅರಬ್ಬಿ ಸಮುದ್ರದಲ್ಲಿ ಕ್ಯಾರ್ ಚಂಡ ಮಾರುತ ಉಂಟಾದಾಗ ಭಾರೀ ಅಲೆಗಳ ಹೊಡೆತಕ್ಕೆ ಚುಕ್ಕಾಣಿ ಮುರಿದು ಮುಳುಗುವ ಸಂದರ್ಭ ಎದುರಾದಾಗ ಅದರಲ್ಲಿದ್ದ 15ಕ್ಕೂ ಮಿಕ್ಕಿ ಕಾರ್ಮಿಕರನ್ನು ರಕ್ಷಿಸಲಾಗಿತ್ತು. ಬಳಿಕ ಗುಡ್ಡೆಕೊಪ್ಲ ಬಳಿ ತಂದಿರಿಸಲಾಗಿತ್ತು. ಇದೀಗ ಈ ಡ್ರೆಜ್ಜರ್ ಮರಳಲ್ಲಿ ಹೂತು ಹೋಗಿದ್ದು ಮೇಲೆತ್ತಲು ಭಾರೀ ವೆಚ್ಚವಾಗಲಿದೆ. ಹೀಗಾಗಿ ಇದ್ದ ಜಾಗದಲ್ಲಿಯೇ ಒಡೆಯುವ ಇಲ್ಲವೆ ಸ್ಥಳಾಂತರ ಮಾಡುವ ಎರಡೇ ಆಯ್ಕೆ ಬಂದರು ಮುಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ