ಮಂತ್ರಿ ಆಗಲು ಯಾರ ಮನೆ ಮುಂದೇನೂ ನಿಲ್ಲಲ್ಲ : ಯತ್ನಾಳ 


Team Udayavani, Aug 22, 2019, 2:45 PM IST

yatnal

ಬಾಗಲಕೋಟೆ : ನನ್ನನ್ನು ಮಂತ್ರಿ ಮಾಡಿ ಎಂದು ಯಾರ ಮನೆ ಮುಂದೆಯೂ ಹೋಗಿ ನಿಂತಿಲ್ಲ ನಿಲ್ಲುವುದಿಲ್ಲ. ಯಡಿಯೂರಪ್ಪ ಮನೆಗೂ ನಾನು ಹೋಗಿ ಮಂತ್ರಿ ಮಾಡಿ ಎಂದು ಕೇಳಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಡಿ-ಬೇಡಿ, ಕೈ-ಕಾಲು  ಹಿಡಿದು  ಮಂತ್ರಿಯಾಗುಷ್ಟು  ಕೆಳ ರಾಜಕಾರಣ  ಮಾಡುವ  ವ್ಯಕ್ತಿ ನಾನಲ್ಲ. ಯಡಿಯೂರಪ್ಪ ಅವರಿಗೂ ಒತ್ತಡ ಹಾಕಿಲ್ಲ.

ಮುಂದಿನ ಸಂಪುಟ ವಿಸ್ತರಣೆ ವೇಳೆಯೂ ನಾನು ಒತ್ತಾಯ ಮಾಡಲ್ಲ.
ಸ್ವಾಮೀಜಿಗಳ ಮೂಲಕ ಬಿಎಸ್‌ವೈಗೆ ಒತ್ತಡ ಹಾಕಿಸಿಲ್ಲ. ಯಾರ ಮನೆಗೂ ಹೋಗಿ ನನ್ನ ಮಂತ್ರಿ ಮಾಡಿ ಎಂದು ಕೇಳಲ್ಲ ಎಂದರು.

ತ್ಯಾಗ ಅನಿವಾರ್ಯ :
ಕೆಲವು ಬಾರಿ ನಾವು ಔದಾರ್ಯ ತೋರಬೇಕಾಗುತ್ತದೆ. ತ್ಯಾಗ ಮಾಡಬೇಕಾಗುತ್ತದೆ. ಸಚಿವ ಸ್ಥಾನ ಕೊಡದಿದ್ದರೆ  ಭಿನ್ನಮತ ಎಂದು ಚಿಲ್ಲರೆ ರಾಜಕಾರಣ ನಾವು ಮಾಡಲ್ಲ. ಅಸಮಾಧಾನ ನನಗಿಲ್ಲ. ಮಾಧ್ಯಮದವರೇ ಊಹಾಪೋಹ ಸೃಷ್ಠಿ ಮಾಡುತ್ತಿದ್ದಾರೆ ಎಂದು ಹೇಳಿದರು.

ನಾನೊಬ್ಬ ಹಿರಿಯ ನಾಯಕ. ಬಿಜೆಪಿ ಕಟ್ಟುವುದರಲ್ಲಿ ನನ್ನ ಪಾತ್ರವಿದೆ. ನಡುವೆ ಬಂದು ಯಾರ ಕೈ- ಕಾಲು ಹಿಡಿದು ರಾಜಕಾರಣ ಮಾಡಿದವನಲ್ಲ. ಬಿಜೆಪಿ ಕೆಳಮಟ್ಟದಿಂದ ಬೆಳೆಸಿದ್ದೇನೆ. ಯಾರೂ ಶಾಸಕರಿಲ್ಲದಾಗ ನಾನು ಎಂಎಲ್‌ಎ ಆಗಿದ್ದವನು. ವಿಜಯಪುರ ಲೋಕಸಭೆ ಕ್ಷೇತ್ರದ ಮೊದಲ ಸಂಸದ ನಾನು ಎಂದರು.

ನನಗೆ 75 ವರ್ಷ ಆಗಿಲ್ಲ :
ಹಿರಿಯನ್ನೇ ಬಿಜೆಪಿ ಕಡೆಗನಿಸಿತಾ ಎಂಬ ಪ್ರಶ್ನೆಗೆ ಎಲ್.ಕೆ. ಅದ್ವಾನಿ ಅವರ  ಉದಾಹರಣೆ ನೀಡಿದ ಶಾಸಕ ಯತ್ನಾಳ, ಬಿಜೆಪಿಯಲ್ಲಿ ಅದ್ವಾನಿ ಅವರ ಪರಿಸ್ಥಿತಿ ಏನಾಗಿದೆ. ಕಾಲ ಕಾಲದಲ್ಲಿ ಒಂದೊಂದು ಯುಗ ಇರುತ್ತದೆ. ಆ ಯುಗದಲ್ಲಿ ಬೇರೆ ಬೇರೆ ಬೆಳವಣಿಗೆಯಾಗುತ್ತವೆ. ನನಗೇನೂ ವಯಸ್ಸಾಗಿಲ್ಲ. 75 ವರ್ಷ ಮೇಲಾಗಿದ್ದರೆ ನನ್ನನ್ನು ನಿವೃತ್ತಿ ಮಾಡುತ್ತಿದ್ದರು. ನನಗೀಗ 54 ವಯಸ್ಸು. ರಾಜ್ಯದ ನಂಬರ್ 1 ರಾಜಕಾರಣಿ ಆಗುವ ಅವಕಾಶ ಇವೆ ಎಂದರು.

ನನಗೂ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶ ದೊರೆಯುತ್ತವೆ. ನನ್ನ  ಮೇಲೇನು ಭ್ರಷ್ಟಾಚಾರದ ಆರೋಪವಿದೆಯೇ. ಏನಾದರೂ ಹಗರಣ ಮಾಡಿದ್ದೇನಾ. ಏನೂ ಇಲ್ಲ. ಒಬ್ಬ ಹಿಂದೂ ಮುಖಂಡ ಎಂದು ಜನ ನನ್ನನ್ನು ಒಪ್ಪಿಕೊಂಡಿದ್ದಾರೆ. ನನಗೆ ಭವಿಷ್ಯವಿದೆ. ನನಗೆ ಯುಗಾಂತ್ಯವಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವ ಸ್ಥಾನಕ್ಕಾಗಿ ಸ್ವಾಮೀಜಿಗಳ ಮೂಲಕ ಲಾಭಿ ನಡೆಸಿಲ್ಲ. ಪಕ್ಷವೇ ಗುರುತಿಸಿ ಕೊಡಬೇಕು. ಪಕ್ಷ ಯಾವ ಕಾರಣಗಳಿಂದ ನಿರ್ಣಯ ಕೈಗೊಂಡಿದೆಯೋ.  ಅದರಲ್ಲಿ ಒಳ್ಳೆಯ ಉದ್ದೇಶವಿರಬಹುದು. ನಾನು ಪಕ್ಷದ ರಾಜ್ಯಾಧ್ಯಕ್ಷನಾಗಬೇಕೆಂದು ಪ್ರಯತ್ನ ಮಾಡಿಲ್ಲ. ಕೇಂದ್ರ ಮಂತ್ರಿಯಾಗಲೂ ಪ್ರಯತ್ನಿಸಿಲ್ಲ ಎಂದರು.

ಈಶ್ವರಪ್ಪ ಟೀಕೆ ಮಾಡಲ್ಲ :
ಯತ್ನಾಳರನ್ನು ಕೇಳಿ ಬಿಜೆಪಿ ರಾಜ್ಯಾಧ್ಯಕ್ಷರನ್ನ ಮಾಡೋಕಾಗುತ್ತಾ ಎಂಬ  ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ, ಈಶ್ವರಪ್ಪ ಬಗ್ಗೆ ನನಗೆಬಹಳ ಗೌರವವಿದೆ. ಅವರು ಹಿರಿಯ ಹಿರಿಯ ನಾಯಕರು. ಅವರು ಯಾವಾಗಲೂ ನನಗೆ ಪ್ರೀತಿ ಮಾಡುತ್ತಾರೆ. ತಪ್ಪಿದಾಗ ತಿದ್ದಿದ್ದಾರೆ. ಅವರು ಕರೆದು ನನಗೆ ಹೊಡೆದರೂ ನನಗೆ ಸಿಟ್ಟಿಲ್ಲ. ನಾನು ಅದ್ವಾನಿ, ಅಮೀತ್ ಶಾ, ಮೋದಿ, ಅನಂತಕುಮಾರ, ಈಶ್ವರಪ್ಪ ಬಗ್ಗೆ ಟೀಕೆ ಮಾಡಲ್ಲ ಎಂದು ಹೇಳಿದರು.

ಟಾಪ್ ನ್ಯೂಸ್

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.