ಬದಲಾಗುತ್ತಿದೆ ಕಚೇರಿಗಳ ಸ್ವರೂಪ


Team Udayavani, May 23, 2020, 11:16 AM IST

ಬದಲಾಗುತ್ತಿದೆ ಕಚೇರಿಗಳ ಸ್ವರೂಪ

ಮಣಿಪಾಲ: ಕೋವಿಡ್‌ ವೈರಸ್‌ ಕಚೇರಿಗಳ ಕಾರ್ಯಶೈಲಿಯ ಮೇಲೆ ಅಗಾಧ ಪರಿಣಾಮ ಬೀರಿರುವುದು ಈಗ ಸರ್ವವಿಧಿತ. ಮನೆಯಿಂದಲೇ ಕೆಲಸ ಮಾಡುವ ಶೈಲಿಯನ್ನು ಹೆಚ್ಚಿನೆಲ್ಲ ಕಂಪೆನಿಗಳು ಅಳವಡಿಸಿಕೊಂಡಿವೆ. ಇದೀಗ ಹಲವು ಜಾಗತಿಕ ಕಂಪೆನಿಗಳು ವರ್ಕ್‌ ಫ್ರಂ ಹೋಮ್‌ ಪದ್ಧತಿಯನ್ನು ಖಾಯಂ ನೆಲೆಯಲ್ಲಿ ಅಳವಡಿಸಿಕೊಳ್ಳುವುದರ ಜತೆಗೆ ಸಾಮಾಜಿಕ ಅಂತರ ಪಾಲನೆ ಹಾಗೂ ಇತರ ಸುರಕ್ಷಾ ವಿಧಾನಗಳ ಪಾಲನೆಗೆ ಅನುಕೂಲವಾಗುವ ಶೈಲಿಯನ್ನು ಕಚೇರಿಗಳಲ್ಲಿ ಅಳವಡಿಸಿಕೊಳ್ಳಲು ಮುಂದಾಗಿವೆ. ಒಟ್ಟಾರೆಯಾಗಿ ಕೋವಿಡ್‌ ವೈರಸ್‌ ಭವಿಷ್ಯದಲ್ಲಿ ಕಚೇರಿಗಳ ಸ್ವರೂಪವನ್ನೇ ಬದಲಾಯಿಸಲಿದೆ.

ಫ್ಲೆಕ್ಸಿಬಲ್‌ ವರ್ಕಿಂಗ್‌
ಫ್ಲೆಕ್ಸಿಬಲ್‌ ವರ್ಕಿಂಗ್‌ ಅಂದರೆ ನೌಕರರು ಮಾನಸಿಕವಾಗಿ ತಾವು ಸುರಕ್ಷಿತ ಎಂದು ಭಾವಿಸುವ ಕೆಲಸದ ಶೈಲಿಯ ಬಗ್ಗೆ ಗಂಭೀರವಾದ ಚಿಂತನೆ ನಡೆಯುತ್ತಿದೆ. ಇದರ ಸಾಧಕಬಾಧಕಗಳನ್ನು ಅಳೆದಾಗ ಅನುಕೂಲಗಳೇ ಹೆಚ್ಚಿರುವುದು ತಿಳಿದು ಬಂದಿದೆ.

ಆಧುನಿಕ ಸಂವಹನ ಸೌಲಭ್ಯಗಳು ಪ್ರಪಂಚದ ಯಾವ ಮೂಲೆಯಲ್ಲಿ ಬೇಕಾದರೂ ಕುಳಿತು ಕಚೇರಿಯ ಕೆಲಸ ಮಾಡಲು ಅನುಕೂಲ ಮಾಡಿಕೊಟ್ಟಿವೆ. ಹೀಗಾಗಿ ನೌಕರರು ಕಚೇರಿಗೆ ಹೋಗಿಯೇ ಕೆಲಸ ಮಾಡಬೇಕೆಂಬ ಪದ್ಧತಿ ಸದ್ಯದಲ್ಲೇ ಇತಿಹಾಸಕ್ಕೆ ಸೇರಬಹುದು ಎನ್ನುತ್ತಾರೆ ನ್ಯೂಜಿಲ್ಯಾಂಡ್‌ನ‌ ಪ್ರಧಾನಿ ಜಸಿಂಡಾ ಅರ್ಡೆರ್‌.

ನಾಲ್ಕು ದಿನದ ವಾರ
ನ್ಯೂಜಿಲ್ಯಾಂಡ್‌ನ‌ಲ್ಲಿ ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸ ಮಾಡುವ ಹೊಸ ಪದ್ಧತಿಯನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಇದರ ಹಿಂದಿನ ಉದ್ದೇಶವಾಗಿದ್ದರೂ ಜತೆಗೆ ಹೊಸ ಶೈಲಿಯ ಶ್ರಮ ಸಂಸ್ಕೃತಿಗೆ ನಾಂದಿ ಹಾಡುವ ಅಗತ್ಯ ಉಂಟಾಗಿದೆ ಎನ್ನುತ್ತಿದ್ದಾರೆ ಅರ್ಡೆರ್‌.

ನೌಕರರು ರೆಡಿ
ಕ್ರಮೇಣ ಕಚೇರಿಗಳು ಪ್ರಾರಂಭವಾಗುತ್ತಿದ್ದರೂ ನೌಕರರು ಮನೆಯಿಂದಲೇ ಕೆಲಸ ಮಾಡುವ ಪದ್ಧತಿಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು ತಿಳಿಸುತ್ತದೆ ಒಂದು ಸಮೀಕ್ಷೆ. ಕಚೇರಿಯಲ್ಲಿ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ. ಅಲ್ಲದೆ ಪ್ರಯಾಣಿಸುವಾಗಲೂ ಸೋಂಕಿಗೆ ತುತ್ತಾಗಬಹುದು ಎಂಬ ಭೀತಿ ನೌಕರರಿಗಿದೆ. ಈ ಹಿನ್ನೆಲೆಯಲ್ಲಿ ವರ್ಕ್‌ ಫ್ರಂ ಹೋಮ್‌ ಸುರಕ್ಷಿತ ಎನ್ನುತ್ತಿದ್ದಾರೆ ನೌಕರರು.

ರಿಮೋಟ್‌ ಹೈರಿಂಗ್‌
ಫೇಸ್‌ಬುಕ್‌ “ರಿಮೋಟ್‌ ಹೈರಿಂಗ್‌’ ಎಂದರೆ ದೂರದಿಂದಲೇ ಕೆಲಸ ಮಾಡುವ ನೌಕರರ ನೇಮಕಾತಿಗೆ ಆದ್ಯತೆ ನೀಡಲು ನಿರ್ಧರಿಸಿದೆ. ಜುಲೈಯಲ್ಲಿ ರಿಮೋಟ್‌ ಹೈರಿಂಗ್‌ ಪ್ರಾರಂಭಿಸುತ್ತೇವೆ. ಮುಂದಿನ 5-10 ವರ್ಷಗಳಲ್ಲಿ ಫೇಸ್‌ಬುಕ್‌ನ ಶೇ. 50 ಸಿಬಂದಿ ಕಚೇರಿಗೆ ಹೋಗದೆಯೇ ಕೆಲಸ ಮಾಡಲಿದ್ದಾರೆ ಎಂದಿದ್ದಾರೆ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌.
ಇದರ ಬೆನ್ನಿಗೆ ಟ್ವಿಟ್ಟರ್‌ ಸೇರಿದಂತೆ ಸಿಲಿಕಾನ್‌ ವ್ಯಾಲಿಯ ಇತರ ಕೆಲವು ದೈತ್ಯ ಕಂಪೆನಿಗಳು ಕೂಡ ನೌಕರರು ಬಯಸಿದರೆ ಖಾಯಂ ಆಗಿ ವರ್ಕ್‌ ಫ್ರಂ ಹೋಮ್‌ ಮಾಡಬಹುದು ಎಂದಿವೆ.

ಕಂಪೆನಿಗಳಿಗೂ ಲಾಭ
ವರ್ಕ್‌ ಪ್ರಂ ಹೋಮ್‌ನಿಂದ ಕಂಪೆನಿಗಳಿಗೂ ಲಾಭಗಳಿವೆ. ಮುಖ್ಯವಾಗಿ ನೌಕರರ ಆರೋಗ್ಯದ ಸುರಕ್ಷೆಗಾಗಿ ಮಾಡುವ ಖರ್ಚು ಉಳಿತಾಯವಾಗುತ್ತದೆ. ಜತೆಗೆ ವಿದ್ಯುತ್‌, ಆಹಾರ ಇತ್ಯಾದಿ ಖರ್ಚುಗಳು ಗಣನೀಯವಾಗಿ ಕಡಿತವಾಗುತ್ತವೆ. ಸಾಮಾಜಿಕ ಅಂತರ ಪಾಲನೆ ನಿಯಮಗಳಿಂದಾಗಿ ಕಚೇರಿಗಳಲ್ಲಿ ಹೆಚ್ಚು ಸ್ಥಳವಕಾಶ ಸೃಷ್ಟಿಸುವ ಅಗತ್ಯವಿತ್ತು. ವರ್ಕ್‌ ಫ್ರಂ ಹೋದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ.

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.