ಬೂದಿ ಬಣ್ಣಕ್ಕೆ ತಿರುಗಿದ ಈರುಳ್ಳಿ: ರೈತರಲ್ಲಿ ಆತಂಕ
Team Udayavani, Aug 27, 2020, 2:52 PM IST
ಮುದಗಲ್ಲ: ಕಳೆದೊಂದು ತಿಂಗಳಿಂದ ಈ ಭಾಗದಲ್ಲಿ ಮುಸುಕಿದ ವಾತಾವರಣ ಇರುವುದರಿಂದ ಈರುಳ್ಳಿ ಬೆಳೆಗೆ ರೋಗ ಬಂದು ಹಾಳಾಗಿದ್ದು, ರೈತರನ್ನು ಕಂಗಾಲಾಗಿಸಿದೆ. ಬೇಸಿಗೆಯಲ್ಲಿ ಬೆಳೆದ ಈರುಳ್ಳಿಗೆ ಕೋವಿಡ್ ಕಗ್ಗಂಟಾದರೇ, ಮುಂಗಾರು ಬೆಳೆ ಈರುಳ್ಳಿಗೆ ಕಳೆದ ಮೋಡ ಮುಸುಕಿನ ವಾತಾವರಣ ಮತ್ತು ಆಗಾಗ ಸುರಿಯು ಜಿಟಿ ಜಿಟಿ ಮಳೆ ಪರಿಣಾಮ ವಾತಾವರಣ ತಂಪಾಗಿ ಸೂರ್ಯನ ಕಿರಣಗಳು ಈರುಳ್ಳಿಗೆ ತಾಗದೇ ರೋಗ ಹರಡಿ ಸಂಪೂರ್ಣ ಬೂದಿ ಬಣ್ಣಕ್ಕೆ ತಿರುಗಿದೆ. ಈರುಳ್ಳಿ ನಾಟಿ ಮಾಡಿ ಒಂದೂವರೆ,ಎರಡು ತಿಂಗಳು ಗತಿಸಿದ್ದು ರೋಗ ಬಾಧಿಸುತ್ತಿದೆ. ವಿಶೇಷವಾಗಿ ಕಿಲಾರಹಟ್ಟಿ, ಆಮದಿಹಾಳ, ನಾಗರಹಾಳ, ನಾಗಲಾಪೂರ, ಕನ್ನಾಳ, ತಲೇಖಾನ, ಹಡಗಲಿ, ಹಡಗಲಿ ತಾಂಡಾ. ದೆಸಾಯಿ ಭೋಗಾಪೂರ, ಛತ್ತರ, ಕುಮಾರಖೇಡ, ತೊಡಕಿ, ಉಳಿಮೇಶ್ವರ, ಪಿಕಳಿಹಾಳ, ಆಶಿಹಾಳ, ಬಯ್ನಾಪೂರ, ಖೈರವಾಡಗಿ, ಅಡವಿಭಾವಿ ಹಾಗೂ ತಿಮ್ಮಾಪೂರ ಸೇರಿದಂತೆ ಹಲವಡೆ ನಾಟಿ ಮಾಡಲಾದ ಈರುಳ್ಳಿಗೆ ರೋಗ ಕಾಣಿಸಿಕೊಂಡಿದೆ. ಆರಂಭದಲ್ಲಿ ಈರುಳ್ಳಿ ಗರಿಗಳ ಮೇಲೆ ಚುಕ್ಕೆ ಕಾಣಿಸಿಕೊಂಡು ಗರಿ ಹಳದಿ ಬಣ್ಣಕ್ಕೆ ತಿರುಗಿದ ವಾರದಲ್ಲಿಯೇ ಸಂಪೂರ್ಣ ಒಣಗಿ ಮುದುಡಿದಂತಾಗಿದೆ. ಇದರಿಂದಾಗಿ ಈರುಳ್ಳಿ ಇಳುವರಿ ಕುಸಿತವಾಗುತ್ತದೆ ಎಂದು ಕನ್ನಾಳ ಗ್ರಾಮದ ರೈತ ಹನುಮನಗೌಡ ಅಳಲು ತೋಡಿಕೊಂಡಿದ್ದಾನೆ.
ಬೆಲೆ ಪಾತಾಳಕ್ಕೆ: ಪ್ರತಿವರ್ಷ ಸುಮಾರು 3000 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿತ್ತು. ಆದರೆ ಈ ಬಾರಿ ಮಾರ್ಚ್ ತಿಂಗಳಲ್ಲಿ ದರ ಕುಸಿತ ಹಾಗೂ ಕೊರೊನಾ ಲಾಕ್ಡೌನ್ನಿಂದ ಈರುಳ್ಳಿಗೆ ಹೊಡೆತ ಬಿದ್ದಿದೆ. ಲಿಂಗಸುಗೂರು ತಾಲೂಕಿನಲ್ಲಿ 1500 ಎಕರೆ ಹಾಗೂ ಮಸ್ಕಿ ತಾಲೂಕಿನಲ್ಲಿ 800 ಎಕರೆಯಲ್ಲಿ ರೈತರು ಈರುಳ್ಳಿ ನಾಟಿ ಮಾಡಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಶೇಖರ ಪತ್ರಿಕೆಗೆ ತಿಳಿಸಿದ್ದಾರೆ.
ಕೊಳವೆ ಬಾವಿ ನೀರು ನಂಬಿ ಈರುಳ್ಳಿ ಬೆಳೆಯುವ ರೈತರಿಗೆ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಒಂದೆಡೆಯಾದರೆ ಅಂತರ್ಜಲ ಕುಸಿತ ಮಧ್ಯೆಯೂ ಅಲ್ಪಸ್ವಲ್ಪ ನೀರನ್ನೆ ನಂಬಿ ಬೆಳೆಯುವ ಈರುಳ್ಳಿಗೆ ಒಂದೂವರೆ ಎಕರೆಗೆ 40 ರಿಂದ45 ಸಾವಿರ ಖರ್ಚು ಬಂದಿದೆ. ಮಾರುಕಟ್ಟೆಯಲ್ಲಿ 650 ರಿಂದ 700ರೂ.ಗೆ ಈರುಳ್ಳಿ ಮಾರಾಟವಾಗುತ್ತಿದೆ.
– ಸಂತೋಷ, ಈರುಳ್ಳಿ ಬೆಳೆಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ