ಭಾರಿ ಮಳೆಗೆ 4 ಎಕರೆ ಜಾಗದಲ್ಲಿ ಬೆಳೆದ ಈರುಳ್ಳಿ ಬೆಳೆ ಸಂಪೂರ್ಣ ನಾಶ
Team Udayavani, Oct 8, 2020, 11:57 AM IST
ಗದಗ: ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಸತತ ಮಳೆಯಿಂದ ಹಾಳಾದ ನಾಲ್ಕು ಎಕರೆಯಲ್ಲಿ ಬೆಳೆದ ಈರುಳ್ಳಿಯನ್ನು ತಾಲೂಕಿನ ಸಂಭಾಪುರ ಗ್ರಾಮದ ಭೀಮರೆಡ್ಡಿ ಹಾಗೂ ಗೋವಿಂದರೆಡ್ಡಿ ಬಂಡಿ ಸಹೋದರರು ಟ್ರಾಕ್ಟರ್ ಮೂಲಕ ಹರಗಿದ್ದಾರೆ.
ಈರುಳ್ಳಿ ಈಗಾಗಲೇ ಸುಮಾರು ಒಂದೂವರೆ ಅಡಿಯಷ್ಟು ಬೆಳೆದಿತ್ತು. ಗಡ್ಡೆ ಕಟ್ಟುವ ಹಂತದಲ್ಲಿತ್ತು. ಉತ್ತಮ ಬೆಲೆಯ ನಿರೀಕ್ಷೆಯೂ ಇತ್ತು. ಆದರೆ, ಸೆ.8ರ ಬಳಿಕ ಸುರಿದ ಸತತ ಮಳೆಯಿಂದ ಕಣ್ಣೀರಿಡುವಂತಾಗಿದೆ. ನಿರಂತರ ಸುರಿದ ಮಳೆಯಿಂದ ಸುಳಿರೋಗ ಬಾಧಿಸುತ್ತಿದೆ.
ರೋಗ ನಿಯಂತ್ರಣಕ್ಕಾಗಿ ಎರಡು ಬಾರಿ ಕ್ರಿಮಿನಾಶಕ ಸಿಂಪಡಿಸಲಾಯಿತು. ಆದರೆ ಬಿಟ್ಟೂ ಬಿಡದೆ ಮಳೆ ಸುರಿದಿದ್ದರಿಂದ ಈ ಪ್ರಯತ್ನ ಫಲಿಸಲಿಲ್ಲ. ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದರಿಂದ ಈರುಳ್ಳಿ ಗಡ್ಡೆ ಭೂಮಿಯಲ್ಲೇ ಕೊಳೆಯುತ್ತಿದೆ. ಭೂಮಿ ಒಣಗಲು ಇನ್ನಷ್ಟು ದಿನಗಳು ¸ಬೇಕಾಗುವುದರಿಂದ ಸದ್ಯಕ್ಕೆ ಈರುಳ್ಳಿ ಮೇಲಿನ ಆಸೆ ಬಿಟ್ಟು, ಹರಗಿದ್ದೇವೆ ಎಂಬುದು ಭೀಮರೆಡ್ಡಿ ಬಂಡಿ ಅವರ ನೋವಿನ ನುಡಿ.
ಇದನ್ನೂ ಓದಿ :ವಿಷಪೂರಿತ ಹಾವು ಕಡಿದ ಬಾಲಕರ ರಕ್ಷಣೆ : ಸೂಕ್ತ ಚಿಕಿತ್ಸೆ ನೀಡಿದತಜ್ಞರ ಕಾರ್ಯಕ್ಕೆ ಶ್ಲಾಘನೆ
ಈ ಬಾರಿ ಈರುಳ್ಳಿ ಕೈಹಿಡಿಯುವ ನಿರೀಕ್ಷೆಯೊಂದಿಗೆ ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದಿದ್ದೆವು. ಆದರೆ, ವಿಪರೀತ ಮಳೆಯಾಗಿದ್ದರಿಂದ ಬೆಳೆ ಕೊಳೆಯುವಂತಾಗಿತ್ತು. ಹೀಗಾಗಿ ಈರುಳ್ಳಿಯನ್ನು ಹರಗಿದ್ದೇವೆ. ಬಿತ್ತನೆ, ಕ್ರಿಮಿನಾಶಕ, ಕೃಷಿ ಕಾರ್ಮಿಕರ ಕೂಲಿ ಸೇರಿದಂತೆ ಪ್ರತಿ ಎಕರೆಗೆ 10- 12 ಸಾವಿರ ರೂ. ಖರ್ಚು ಮಾಡಿದ್ದು, ಆ ಹಣವೂ ಮರಳಿಲ್ಲ. ಹಿಂಗಾರಿಗೆ ಮತ್ತೆ ಸಾಲ
ಮಾಡುವಂತಾಗಿದೆ ಎನ್ನುತ್ತಾರೆ ಗೋವಿಂದ ರೆಡ್ಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
ಲೋಕಸಭಾ ಕಣದಲ್ಲಿ ನಾರಿಶಕ್ತಿ ಪ್ರದರ್ಶನ: ಕಾಂಗ್ರೆಸ್ನಿಂದ 6, ಬಿಜೆಪಿಯಿಂದ 2 ಮಹಿಳೆಯರು
Lok Sabha Polls; ರಾಜ್ಯದ ಕಣ ಅಂತಿಮ: 474 ಅಭ್ಯರ್ಥಿಗಳು
MUST WATCH
ಹೊಸ ಸೇರ್ಪಡೆ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ