ಆಪರೇಷನ್ ಎಂಟಿಬಿ
Team Udayavani, Jul 14, 2019, 5:49 AM IST
ಬೆಂಗಳೂರು: ಶನಿವಾರ ಬೆಳಗ್ಗೆ 5ರಿಂದ ಆರಂಭವಾದ ಆಪರೇಷನ್ ಎಂಟಿಬಿ ನಾಗರಾಜ್ ಕುತೂಹಲದ ವಿದ್ಯಮಾನಗಳಿಗೆ ಸಾಕ್ಷಿಯಾಯಿತು.
ಎಂಟಿಬಿ ನಾಗರಾಜ್ ನಿವಾಸಕ್ಕೆ ಶನಿವಾರ ಭೇಟಿ ನೀಡಿದ್ದ ಸಚಿವ ಡಿ.ಕೆ. ಶಿವಕುಮಾರ್ ಒಂದು ಸುತ್ತು ಮಾತುಕತೆ ನಡೆಸಿ ಅನಂತರ ಅವರನ್ನು ಸಿದ್ದರಾಮಯ್ಯ ಬಳಿ ಕರೆತಂದರು. ಸಿದ್ದರಾಮಯ್ಯ ಸುಮಾರು ನಾಲ್ಕು ತಾಸು ಕಾಲ ಎಂಟಿಬಿ ಜತೆ ಮಾತುಕತೆ ನಡೆಸಿದರು. ಡಿಸಿಎಂ ಡಾ| ಜಿ. ಪರಮೇಶ್ವರ್, ಸಚಿವ ಜಮೀರ್ ಅಹಮದ್ ಉಪಸ್ಥಿತರಿದ್ದರು.
ಎಂಟಿಬಿ ಕೆಲವು ಷರತ್ತುಗಳನ್ನು ಇಟ್ಟಿದ್ದಾರೆ ಎನ್ನಲಾಗಿದೆ. ಒಂದು ಹಂತದಲ್ಲಿ ಸಿದ್ದರಾಮಯ್ಯ ಸಿಎಂ ಆದರೆ ರಾಜೀನಾಮೆ ವಾಪಸ್ ಪಡೆಯುವುದಾಗಿ ಹೇಳಿದ್ದಾಗಿ ವರದಿಯಾಗಿದೆ.
“ರಾಜೀನಾಮೆ ವಾಪಸ್ ಪಡೆದು ಸರಕಾರದಲ್ಲಿ ಮುಂದುವರಿ, ಏನೇ ಸಮಸ್ಯೆ ಇದ್ದರೆ ನಾನು ನೋಡಿ ಕೊಳ್ಳುತ್ತೇನೆ” ಎಂದು ಸಿದ್ದರಾಮಯ್ಯ ಹೇಳಿದಾಗ, “ಡಾ| ಕೆ. ಸುಧಾಕರ್ ಜತೆ ಮಾತನಾಡಿ ತೀರ್ಮಾನಿಸುತ್ತೇನೆ’ ಎಂದು ಎಂಟಿಬಿ ತಿಳಿಸಿದರು ಎನ್ನಲಾಗಿದೆ.
ಹೀಗಾಗಿ ಜಮೀರ್ ಅಹಮದ್ ಮತ್ತು ಎಚ್.ಸಿ. ಮಹದೇವಪ್ಪ ಅವರು ಎಂಟಿಬಿ ನಾಗರಾಜ್ ಜತೆ ಲೀಲಾ ಪ್ಯಾಲೇಸ್ ಹೋಟೆಲ್ಗೆ ತಲುಪಿದರು. ಆದರೆ ಎಂಟಿಬಿ ನಾಗರಾಜ್ ಒಬ್ಬರೇ ಬಂದರೆ ಮಾತ್ರ ಭೇಟಿಯಾಗಲು ನಿರ್ಧರಿಸಿದ್ದ ಸುಧಾಕರ್, ಕಾಂಗ್ರೆಸ್ ನಾಯಕರ ಭೇಟಿಗೆ ನಿರಾಕರಿಸಿದರು.
ಈ ಮಧ್ಯೆ ಡಾ| ಕೆ. ಸುಧಾಕರ್ ಭೇಟಿಗಾಗಿ ಅವರ ಮನೆಗೆ ಹೋಗಿದ್ದ ಸಚಿವ ಡಿ.ಕೆ. ಶಿವಕುಮಾರ್ ಅವರು ಸುಧಾಕರ್ ಮನೆಯಲ್ಲಿ ಇಲ್ಲದ ಕಾರಣ ವಾಪಸಾಗಿದ್ದರು. ಯಾರನ್ನೂ ಭೇಟಿ ಮಾಡದ ಸುಧಾಕರ್ ತಮಗಾಗಿ ಕಾಯುತ್ತಿದ್ದ ವಿಶೇಷ ವಿಮಾನದಲ್ಲಿ ಮುಂಬಯಿಗೆ ಧಾವಿಸಿದರು.
ನಾನು ಇನ್ನೂ ಕಾಂಗ್ರೆಸ್ನಲ್ಲೇ ಇದ್ದೇನೆ, ಮುಂದೇನೂ ಇರುತ್ತೇನೆ. ಸಂಧಾನ ಸಭೆ ಎಲ್ಲ ಚೆನ್ನಾಗಿ ನಡೆದಿದೆ. ನಾವು ಎಲ್ಲ ಒಳ್ಳೆ ರೀತಿಯಾಗಿ ಪ್ರಯತ್ನ ಮಾಡುತ್ತಿದ್ದೇವೆ.
-ಎಂಟಿಬಿ ನಾಗರಾಜ್,
ಕಾಂಗ್ರೆಸ್ ನಾಯಕ
ಎಂಟಿಬಿ ನಾಗರಾಜ್ ಕಾಂಗ್ರೆಸ್ನಲ್ಲಿ ಇದ್ದಾರೆ, ಇಲ್ಲೇ ಇರುತ್ತಾರೆ. ರಾಜೀನಾಮೆ ವಾಪಸ್ ಪಡೆಯುವ ಬಗ್ಗೆ ಕಾದು ನೋಡಿ, ನಿಮಗೇ ಗೊತ್ತಾಗುತ್ತದೆ.
-ಜಮೀರ್ ಅಹಮದ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ