ಕೋವಿಡ್ ನಿಂದಾಗಿ ಸ್ಥಗಿತಗೊಂಡಿದ್ದ ಅಂತಾರಾಜ್ಯ ಬಸ್ ಸಂಚಾರ ಪುನಾರಂಭ
Team Udayavani, Aug 27, 2020, 11:26 AM IST
ಕೆಜಿಎಫ್: ಕೋವಿಡ್ ವೈರಸ್ ದಿಗ್ಬಂಧನ ನಂತರ ಸ್ಥಗಿತಗೊಂಡಿದ್ದ ಅಂತಾರಾಜ್ಯ ಬಸ್ ಸಂಚಾರ ಬುಧವಾರ ಪುನಾರಂಭವಾಗಿದ್ದು, ನಗರದ ಬಸ್ ನಿಲ್ದಾಣದಲ್ಲಿ ಆಂಧ್ರ ಪ್ರದೇಶದ ಬಸ್ಗಳು ಕಾಣಿಸಿಕೊಂಡವು.
ಕುಪ್ಪಂನಿಂದ ಕೆಜಿಎಫ್ ಸಂಚರಿಸುವ ಬಸ್ಗಳು ಬುಧವಾರ ಹಲವು ಬಾರಿ ಸಂಚರಿಸಿದವು. ಹೊಸದಾಗಿ ಬಸ್ ಸಂಚಾರ
ಪ್ರಾರಂಭವಾಗಿದ್ದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಅದೇ ರೀತಿ ಇಲ್ಲಿನ ಬಸ್ ಡಿಪೋವಿನಿಂದ ಗಡಿವರೆಗೂ
ಸಂಚರಿಸುತ್ತಿದ್ದ ರಾಜ್ಯದ ಕೆಎಸ್ಆರ್ಟಿಸಿ ಬಸ್ಗಳು ಶಾಂತಿಪುರ ಮತ್ತು ವಿಕೋಟೆ ಊರಿನೊಳಗೆ ಹೋಗಿ ವಾಪಸ್ ಬಂದವು.
ಬಸ್ಗೆ ಹತ್ತುವಾಗ ಯಾವುದೇ ರೀತಿಯ ನಿರ್ಬಂಧಗಳನ್ನು ವಿಧಿಸಲಿಲ್ಲ. ಈಗಾಗಲೇ ಗಡಿ ಭಾಗದಲ್ಲಿರುವ ಎಲ್ಲಾ
ಚೆಕ್ಪೋಸ್ಟ್ಗಳನ್ನು ತಾಲೂಕು ಆಡಳಿತ ವಾಪಸ್ ಪಡೆದಿದೆ. ಇಷ್ಟು ದಿನಗಳ ಕಾಲ ನಿರ್ಬಂಧಿತ ಸಾರಿಗೆ ವ್ಯವಸ್ಥೆ ಈಗ
ಸುಗಮಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ