“ಕೋವಿಡ್ 19 ಶೂನ್ಯಕ್ಕಿಳಿಸುವುದೇ ನಮ್ಮ ಗುರಿ’
Team Udayavani, Apr 16, 2020, 4:56 AM IST
ಗದಗ: ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಶೂನ್ಯಕ್ಕಿಳಿಸು ವುದೇ ನಮ್ಮ ಗುರಿ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಕೋವಿಡ್ 19 ಪ್ರಕರಣ ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಡಿಮೆಯಿವೆ. ಕೋವಿಡ್ 19 ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಕೋವಿಡ್ 19 ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸಲಾಗುತ್ತಿದೆ. ಈ ಪ್ರಯತ್ನಕ್ಕೆ ಖಾಸಗಿ ಆಸ್ಪತ್ರೆಗಳು ಕೈಜೋಡಿಸಬೇಕು. ಐಎಸ್ಐ ಪ್ರಮಾಣಿತ ಪಿಪಿಇ ಕಿಟ್ಗಳಿಲ್ಲ ಎಂಬ ಕಾರಣಕ್ಕೆ ಖಾಸಗಿ ನರ್ಸಿಂಗ್ ಹೋಂ, ಕ್ಲಿನಿಕ್, ಆಸ್ಪತ್ರೆ ಮುಚ್ಚಿರುವುದು ಸರಿಯಲ್ಲ. ಸ್ಥಳೀಯವಾಗಿ ಸಾಕಷ್ಟು ಪಿಪಿಇ ಕಿಟ್ಗಳು ಸಿದ್ಧಗೊಳುತ್ತಿವೆ. ಅವುಗಳನ್ನು ಬಳಸಿ ಕೊಂಡು ಸಾರ್ವಜನಿಕರ ಸೇವೆಗೆ ಮುಂದಾಗಬೇಕೆಂದು ಅವರು ತಿಳಿಸಿದ್ದಾರೆ.