ನಮ್ಮ ಬಲ ಕಾಲುಗಳೆಂಬ ಬೇರುಗಳಲ್ಲಿವೆ..


Team Udayavani, Apr 8, 2021, 1:08 AM IST

ನಮ್ಮ ಬಲ ಕಾಲುಗಳೆಂಬ ಬೇರುಗಳಲ್ಲಿವೆ..

ನಾನು ಎಂದಾಕ್ಷಣ ಅದನ್ನು “ಅಹಂ’ ಎಂದೇ ಅರ್ಥೈ ಸಬೇಕಿಲ್ಲ. ಅಹಂ ಇಲ್ಲದೆ ನಮ್ಮ ವ್ಯಕ್ತಿತ್ವ ಪರಿಪೂರ್ಣ ಎಂದೆನಿಸಿಕೊಳ್ಳದು. ಹಾಗೆಂದು ಈ ಅಹಂ ಅತಿಯಾದರೆ ಅದು ದುರಹಂಕಾರ. ಇದು ನಮ್ಮನ್ನು ವಿನಾಶದತ್ತ ತಳ್ಳುತ್ತದೆ. ಹಾಗಾದರೆ ಅಹಂಕಾರ ಪಡು ವಂತಿಲ್ಲವೇ? ಎಂಬ ಪ್ರಶ್ನೆ ನಮ್ಮನ್ನು ಕಾಡು ವುದು ಸಹಜ. ಅಹಂ ಇರಲೇಬೇಕು. ಆದರೆ ಈ ಅಹಂ ನಮ್ಮ ಇತಿಮಿತಿಯೊಳಗೆ ಇದ್ದರಷ್ಟೇ ಚೆನ್ನ. ಇಂತಹ ಅಹಂ ನಮ್ಮ ಜೀವನದ ಗುರಿಯನ್ನು ತಲುಪಲು ಏಣಿಯಾಗಬಹುದು.

ಸ್ವಾವಲಂಬನೆಯಲ್ಲಿಯೇ ಅವಲಂಬನೆ ಸಮ್ಮಿಳಿತವಾಗಿದೆ. ಸ್ವಾವಲಂಬನೆಯಿಂದ ನಾವು ಸದೃಢಗೊಳ್ಳಬಹುದು. ಅವಲಂಬನೆ ನಮ್ಮನ್ನು ಸ್ವಾವಲಂಬನೆಯ ಹಾದಿಯಲ್ಲಿ ಕೊಂಡೊಯ್ಯಬಹುದು. ಇಲ್ಲೂ ಹಾಗೆ ಅವಲಂಬನೆಗೂ ಮಿತಿ ಇದೆ. ಇದು ಹೆಚ್ಚಾದಲ್ಲಿ ಅದು ನಮ್ಮನ್ನು ಬಡಮೇಲು ಗೊಳಿಸಬಹುದು. ಒಂದು ಚೌಕಟ್ಟಿನಲ್ಲಿ ಅವಲಂಬನೆ ಕೇವಲ ನಮ್ಮನ್ನು ಮಾತ್ರವಲ್ಲದೆ ನಾವು ಅವಲಂಬಿಸಿರುವವರನ್ನು ಸ್ವಾವಲಂಬಿಗಳನ್ನಾಗಿ ಮಾಡಬಲ್ಲುದು.

ಅಮೆರಿಕದ ನದಿ ತೀರಗಳಲ್ಲಿ ಹಲವಾರು ವರ್ಷಗಳಿಂದ ಗಾಳಿ ಮಳೆಗೆ ಅಂಜದೆ ಗಟ್ಟಿಯಾಗಿ ನಿಂತಿರುವ ಮರಗಳನ್ನು ನೋಡಿದ ವಿಜ್ಞಾನಿಗಳಿಗೆ ಇದಕ್ಕೆ ಕಾರಣವೇನು? ಎಂಬ ಕುತೂಹಲ ಉಂಟಾಯಿತು. ಈ ಕೌತುಕದ ಹಿಂದಿನ ಕಾರಣವನ್ನು ಸಂಶೋಧಿಸಲು ಅವರು ಆ ಬಗ್ಗೆ ಅಧ್ಯಯನ ನಡೆಸಲು ಮುಂದಾದರು. ಮೊದಲು ಅದರ ಮರದ ಬುಡವನ್ನು ಅಗೆದು ಬೇರುಗಳನ್ನು ಪರೀಕ್ಷಿಸಿದರು. ಬೇರುಗಳು ಭೂಮಿಯೊಳಗೆ ಆಳವಾಗಿ ಚಾಚದೆ ಮೇಲಿನ ಪದರದಲ್ಲಿತ್ತು. ಅವರಿಗೆ ಮತ್ತಷ್ಟು ಆಶ್ಚರ್ಯವಾಯಿತು. ಆಳವಾಗಿ ಬೇರೂರಿದ್ದರೆ ತಾನೇ ಮರಗಳು ಗಟ್ಟಿಯಾಗಿ ನಿಲ್ಲುವುದು. ಹಾಗಾದರೆ ಈ ಮರಗಳು ಸಾವಿರಾರು ವರ್ಷ ಗಾಳಿ, ಮಳೆ, ಬಿರುಗಾಳಿಯನ್ನು ಎದುರಿಸಿ ನಿಂತಿದ್ದಾದರೂ ಹೇಗೆ ಎಂಬ ಪ್ರಶ್ನೆ ಅವರನ್ನು ಕಾಡತೊಡಗಿತು. ಕುತೂಹಲ ತಡೆಯಲಾರದೆ ಅವರು ಸಂಶೋಧನೆಯನ್ನು ಮುಂದುವರಿಸಿದಾಗ ಅವರಿಗೆ ಅಚ್ಚರಿಯ ದೃಶ್ಯ ಕಂಡು ಬಂತು. ಅದೇನೆಂದರೆ ಮರಗಳ ಬೇರುಗಳು ಅದೇ ಜಾತಿಯ ಇನ್ನೊಂದು ಮರದ ಬೇರಿಗೆ ಸುತ್ತಿಕೊಂಡಿದ್ದವು. ಮತ್ತೂ ಪರೀಕ್ಷಿಸಿದಾಗ ಅವೆರಡರ ಬೇರುಗಳು ಅದೇ ಜಾತಿಯ ಮಗದೊಂದು ಮರಕ್ಕೆ ಸುತ್ತಿಕೊಂಡಿವೆ. ಹೀಗೆ ಪ್ರತಿಯೊಂದೂ ಮರದ ಬೇರುಗಳು ಒಂದಕ್ಕೊಂದು ಸುತ್ತಿಕೊಂಡಿರುವುದರಿಂದ ಅವುಗಳಿಗೆ ಸಾವಿರಾರು ವರ್ಷಗಳಿಂದ ಯಾವುದೇ ಬಿರುಗಾಳಿಗೂ ನೆಲಕಚ್ಚದೆ ಸದೃಢವಾಗಿ ನಿಲ್ಲಲು ಸಾಧ್ಯವಾಗಿದೆ ಎಂಬುದು ವಿಜ್ಞಾನಿಗಳಿಗೆ ದೃಢಪಟ್ಟಿತು.

ನಮ್ಮ ಜೀವನವೂ ಅಷ್ಟೇ. ನಾವು ಎಲ್ಲ ಕಷ್ಟಗಳನ್ನು ಎದುರಿಸಿ ಗಟ್ಟಿಯಾಗಿ ಆತ್ಮ ಬಲದಿಂದ ನಿಲ್ಲಬೇಕು. ಯಾವುದಕ್ಕೂ ಹೆದರಬಾರದು. ನಮ್ಮ ಕಾಲುಗಳು ಭೂಮಿಯ ಮೇಲೆ ಬಲವಾಗಿ ಬೇರೂರಿ ಬೀಳದ ಹಾಗೆ ನಿಲ್ಲಬೇಕು. ಜೀವ ಅಮೂಲ್ಯ. ಮರಗಳಿಗೆ ಜೀವ ಇದ್ದಂತೆ ನಮಗೂ ಜೀವ ಇದೆ ತಾನೇ. ಹಾಗಾದರೆ ಭಯವೇಕೆ. ನಾವೆಲ್ಲರೂ ಒಗ್ಗಟ್ಟಾಗಿ ನಿಂತರೆ ಶತ್ರುಗಳೂ ನಮ್ಮ ಹತ್ತಿರ ಸುಳಿಯಲಾರರು. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದು ಇದಕ್ಕೇ ತಾನೆ. ಒಗ್ಗಟ್ಟು ನಮ್ಮ ಶಕ್ತಿಯನ್ನು ನೂರ್ಮಡಿ ಹೆಚ್ಚಿಸಬಲ್ಲುದು.

ನಮ್ಮನ್ನು ನಾವು ಮೊದಲು ಪರೀಕ್ಷಿಸಿಕೊಳ್ಳಬೇಕು. ನಮ್ಮಲ್ಲಿರುವ ಶಕ್ತಿಯನ್ನು ನಾವು ಹೊರಹಾಕಬೇಕು. ಮಾತ್ರವಲ್ಲ ಅದನ್ನು ಸರಿಯಾದ ಸಮಯದಲ್ಲಿ ಉಪಯೋಗಿಸಬೇಕು. ಈ ಮೂಲಕ ನಾವು ಕೂಡ ಬಲಿಷ್ಠರು ಎಂದು ಸಮಾಜಕ್ಕೆ ತೋರಿಸಿ ಕೊಡಬೇಕು.
ನಮ್ಮ ಬಲ ನಮ್ಮ ಕಾಲಲ್ಲಿ ಇರುವಾಗ ಇನ್ನೊಬ್ಬರ ಸಹಾಯ ನಮಗೆ ಬೇಕಿಲ್ಲ. ಅದುವೇ ಆತ್ಮನಿರ್ಭರ. ನಾವು ನಮ್ಮ ಕಾಲಲ್ಲಿ ಗಟ್ಟಿಯಾಗಿ ನಿಂತು ಎಲ್ಲವನ್ನು ಆತ್ಮ ಬಲದಿಂದ ಎದುರಿಸೋಣ.

- ಕೆ.ಪಿ.ಎ. ರಹೀಮ…, ಮಂಗಳೂರು

ಟಾಪ್ ನ್ಯೂಸ್

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

World Water Day: ಜುಳು ಜುಳು ಸದ್ದೇಕೆ ಉರಿ ಮೌನ

World Water Day: ಜುಳು ಜುಳು ಸದ್ದೇಕೆ ಉರಿ ಮೌನ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.