BIAL ಗೆ ಪೀರ್‌ ಪ್ಲಾಟಿನಂ ಪುರಸ್ಕಾರ: ಅತಿ ಹೆಚ್ಚು ಅಂಕ ಪಡೆದ ವಿಶ್ವದ ಮೊದಲ ವಿಮಾನ ನಿಲ್ದಾಣ


Team Udayavani, Feb 17, 2022, 11:42 AM IST

BIAL ಗೆ ಪೀರ್‌ ಪ್ಲಾಟಿನಂ ಪುರಸ್ಕಾರ: ಅತಿ ಹೆಚ್ಚು ಅಂಕ ಪಡೆದ ವಿಶ್ವದ ಮೊದಲ ವಿಮಾನ ನಿಲ್ದಾಣ

ದೇವನಹಳ್ಳಿ: ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಿಸುವ ಬೆಂಗಳೂರು ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಲಿಮಿಟೆಡ್‌(ಬಿಐಎಎಲ್‌) ಕಟ್ಟಡದ ವಿನ್ಯಾಸ, ನಿರ್ಮಾಣ ಮತ್ತು ಕಾರ್ಯಾಚರಣೆಯಲ್ಲಿ ಸುಸ್ಥಿರತೆಗೆ ಗ್ರೀನ್‌ ಬಿಲ್ಡಿಂಗ್‌ ಸರ್ಟಿಫಿಕೇಷನ್‌ಇಂಕ್‌ (ಜಿಬಿಸಿಐ) ನೀಡುವ ಪ್ರತಿಷ್ಠಿತ ಪೀರ್‌ (ಪರ್ಫಾರ್ಮೆನ್ಸ್‌ ಎಕ್ಸೆಲೆನ್ಸ್‌ ಇನ್‌ ಎಲೆಕ್ಟ್ರಿಸಿಟಿ ರಿನಿವಲ್‌) ಪ್ಲಾಟಿನಂ ಸರ್ಟಿಫಿಕೇಷನ್‌ ಪಡೆದಿದೆ.

ಈ ಮಾನ್ಯತೆಯಿಂದ ಬಿಐಎಎಲ್‌ ತನ್ನ ವಿಮಾನ ನಿಲ್ದಾಣದ ವಿದ್ಯುತ್ಛಕ್ತಿ ಮೂಲಸೌಕರ್ಯಕ್ಕೆ 92/100 ಅಂಕ ಪಡೆದು ವಿಶ್ವದಲ್ಲೇ ಮೊದಲ ವಿಮಾನ ನಿಲ್ದಾಣ ನಿರ್ವಾಹಕ ಎನಿಸಿದೆ.
ಬಿಐಎಎಲ್‌ ವಿಮಾನ ನಿಲ್ದಾಣದ ವಿದ್ಯುತ್ಛಕ್ತಿ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಲು ಮತ್ತು ಸುಧಾರಿಸಲು ಪೀರ್‌ ಪ್ರಮಾಣೀಕರಣ ಪಡೆದಿದ್ದು ಇದು ಜಿಬಿಸಿಐನ ಕಠಿಣ ಪ್ರಮಾಣೀಕರಣ ಮತ್ತು ಪರಿಶೀಲನೆಯ ಪ್ರಕ್ರಿಯೆಗೆ ಒಳಪಟ್ಟಿತ್ತು. ಜಿಬಿಸಿಐ ವಿಶ್ವದ ಮುಂಚೂಣಿಯ ಸುಸ್ಥಿರತೆ ಮತ್ತು ಆರೋಗ್ಯ ಪ್ರಮಾಣೀಕರಣ ಹಾಗೂ ಅಧಿಕೃತತೆಯನ್ನು ನೀಡುವ ಸಂಸ್ಥೆಯಾಗಿದೆ ಮತ್ತು ಲೀಡ್‌ ಹಸಿರು ಕಟ್ಟಡ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿ ಹೊಂದಿದೆ. ಬಿಐಎಎಲ್‌ ಸುಸ್ಥಿರವಾಗಿ ನಿರ್ಮಿಸಲು ತನ್ನ ಬದ್ಧತೆಯ ಮೂಲಕ ಅಸಾಧಾರಣ ಕಾರ್ಯಕ್ಷಮತೆ ನಿರೂಪಿಸಿದೆ. ಇದು 6.8 ಮೆಗಾವ್ಯಾಟ್‌ನ ಸ್ಥಳದಲ್ಲಿ ಸೋಲಾರ್‌ ಪಿವಿ ವ್ಯವಸ್ಥೆಯನ್ನು ಹೊಂದಿದ್ದು, ಅದು ಗ್ರಿಡ್‌ ವೈಫ‌ಲ್ಯ ಮತ್ತು ದೀರ್ಘಾವಧಿ ವಿದ್ಯುತ್‌ ಸ್ಥಗಿತಗೊಂಡಾಗ
ನೆರವಾಗುತ್ತದೆ ಮತ್ತು ಇದರ ಶೇ.100ರಷ್ಟು ಶಕ್ತಿಯು ನವೀಕರಿಸಬಲ್ಲ ಶಕ್ತಿಯಾಗಿದೆ.

ಒಟ್ಟಾರೆಯಾಗಿ ಆಧುನಿಕ ವ್ಯವಸ್ಥೆಯು ವಿಮಾನ ನಿಲ್ದಾಣಕ್ಕೆ 14.7 ಮಿಲಿಯನ್‌ ಯೂನಿಟ್‌ಗಳ ವಿದ್ಯುತ್ಛಕ್ತಿ ಉಳಿತಾಯ ಮಾಡಲು ನೆರವಾಗಿದೆ. ಬಿಐಎಎಲ್‌ನ ಎಂ.ಡಿ.ಮತ್ತು ಸಿಇಒ ಹರಿ ಮರಾರ್‌, ಮಾತನಾಡಿ “ವಿದ್ಯುತ್ಛಕ್ತಿ ಉಳಿಸುವಲ್ಲಿ ನಮ್ಮ ಸತತ ಪರಿಶ್ರಮಕ್ಕೆ ಜಿಬಿಸಿಐನಿಂದ ಈ ಪುರಸ್ಕಾರ ಪಡೆದಿರುವುದು ನಮಗೆ ಬಹಳ ಹೆಮ್ಮೆತಂದಿದೆ.

ಇದನ್ನೂ ಓದಿ : ಪೀಣ್ಯ ಫ್ಲೈಓವರ್‌ ಕಳಪೆ ಕಾಮಗಾರಿ : ಮೇಲ್ಸೇತುವೆ, ಬ್ರಿಡ್ಜ್ ಗಳ ಪರೀಕ್ಷೆಗೆ ನಾಗರಿಕರ ಆಗ್ರಹ

ವಿಶ್ವಮಟ್ಟದ ವಿಮಾನ ನಿಲ್ದಾಣ ನಿರ್ವಹಿಸುವ ಸಂಸ್ಥೆಯಾಗಿ ಬಿಐಎಎಲ್‌ ಸ್ಥಳದಲ್ಲಿಯೇ ನವೀಕರಿಸಬಲ್ಲ ವಿದ್ಯುತ್ಛಕ್ತಿ ಉತ್ಪಾದನಾ ವ್ಯವಸ್ಥೆಗಳನ್ನು ಸ್ಥಾಪಿಸಲು, ಹೊರಗಿನಿಂದ ನವೀಕರಿಸಬಲ್ಲ ವಿದ್ಯುತ್‌ ಪಡೆಯಲು ಮತ್ತು 2020-21ರ ವೇಳೆಗೆ ನೆಟ್‌ ಎನರ್ಜಿ ನ್ಯೂಟ್ರಲ್‌ ಆಗಿಸುವ ದೀರ್ಘಾವಧಿಗುರಿ ಸಾಧಿಸಲು ಹಲವಾರು ಕ್ರಮ ಕೈಗೊಳ್ಳಲಾಗಿದೆ. ಪೀರ್‌ ಪ್ಲಾಟಿನಂ ರೇಟಿಂಗ್‌ ಮಾನ್ಯತೆಯು ನಮ್ಮ ಕಾರ್ಯನಿರ್ವಹಣೆಯನ್ನು ಉತ್ತೇಜಿಸಲಿದೆ ಎಂದರು.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.