ಭಾರತದ ವಿರುದ್ಧ ಪಾಕಿಸ್ಥಾನ-ಚೀನ ಮಸಲತ್ತು?


Team Udayavani, Oct 2, 2021, 6:30 AM IST

ಭಾರತದ ವಿರುದ್ಧ ಪಾಕಿಸ್ಥಾನ-ಚೀನ ಮಸಲತ್ತು?

ಹೊಸದಿಲ್ಲಿ: ಸದಾ ಭಾರತದ ವಿರುದ್ಧ ವಿಷ ಕಾರುವಂತಹ ಪಾಕಿಸ್ಥಾನ ಮತ್ತು ಚೀನ ಈಗ ಪರಸ್ಪರ ಕೈಜೋಡಿಸಿಕೊಂಡು ಹೊಸ ಮಸಲತ್ತು ಮಾಡುತ್ತಿವೆಯೇ?

ಗುಪ್ತಚರ ಮೂಲಗಳಿಂದ ಹೊರಬಿದ್ದಿರುವ ಆಘಾತಕಾರಿ ಮಾಹಿತಿಯೊಂದು ಇಂಥ ಸುಳಿವನ್ನು ನೀಡಿದೆ. ಚೀನವು ತನ್ನ ಗಡಿಗಳಲ್ಲಿನ ಮುಖ್ಯ ಕಚೇರಿಗಳಲ್ಲಿ ಪಾಕಿಸ್ಥಾನದ ಸೇನಾಧಿ ಕಾರಿ ಗಳನ್ನು ನೇಮಕ ಮಾಡಿರುವುದೇ ಈ ಅನುಮಾನಕ್ಕೆ ಕಾರಣ.

ಚೀನದ ವೆಸ್ಟರ್ನ್ ಥಿಯೇಟರ್‌ ಕಮಾಂಡ್‌ ಮತ್ತು ಸದರ್ನ್ ಥಿಯೇ ಟರ್‌ ಕಮಾಂಡ್‌ನ‌ಲ್ಲಿ ಪಾಕಿಸ್ಥಾನದ ಸೇನಾಧಿಕಾರಿಗಳನ್ನು ನಿಯೋ ಜಿಸ ಲಾಗಿದೆ ಎಂದು ಗುಪ್ತಚರ ಸಂಸ್ಥೆಗಳು ವರದಿ ಮಾಡಿವೆ.

ಎರಡೂ ದೇಶಗಳ ನಡುವಿನ ಗುಪ್ತಚರ ಮಾಹಿತಿ ವಿನಿಮಯ ಒಪ್ಪಂದದಂತೆ ಈ ನಿಯೋಜನೆ ನಡೆದಿದೆ ಎಂದು ಹೇಳಲಾಗುತ್ತಿದೆಯಾದರೂ ಇದರ ಹಿಂದೆ ಭಾರತದ ವಿರುದ್ಧ ಕತ್ತಿಮಸೆಯುವ ಸಂಚು ಇರುವ ಸಾಧ್ಯತೆಯೂ ಹೆಚ್ಚಾಗಿದೆ. ಪಾಕ್‌ ಮತ್ತು ಡ್ರ್ಯಾಗನ್‌ ರಾಷ್ಟ್ರದ ಈ ಬಾಂಧವ್ಯದ ಮೇಲೆ ಭಾರತವೂ ಕಣ್ಣಿಟ್ಟಿದ್ದು, ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

ಯುದ್ಧ ತರಬೇತಿ ನೀಡುವ ಆಯೋಗ
ಚೀನದ ಪೀಪಲ್ಸ್‌ ಲಿಬರೇಷನ್‌ ಆರ್ಮಿ(ಪಿಎಲ್‌ಎ)ಯ ವೆಸ್ಟರ್ನ್ ಥಿಯೇಟರ್‌ ಕಮಾಂಡ್‌ನ‌ ಕೆಲಸವೇ ಭಾರತ ದೊಂದಿಗಿನ ಹಾಗೂ ಕ್ಸಿನ್‌ಜಿಯಾಂಗ್‌ ಮತ್ತು ಟಿಬೆಟ್‌ ಸ್ವಾಯತ್ತ ಪ್ರದೇಶದೊಂದಿಗಿನ ಗಡಿ ರಕ್ಷಣೆ. ಕಳೆದ ತಿಂಗಳಷ್ಟೇ ಚೀನವು ಈ ಕಮಾಂಡ್‌ನ‌ ಹೊಸ ಕಮಾಂಡರ್‌ ಆಗಿ ಜನರಲ್‌ ವಾಂಗ್‌ ಹೈಜಿಯಾಂಗ್‌ರನ್ನು ನೇಮಕ ಮಾಡಿತ್ತು.

ಇದನ್ನೂ ಓದಿ:ರಾಜಸ್ಥಾನ ಸಿಎಂ ಗೆಹ್ಲೋಟ್ ನನ್ನ ಸ್ನೇಹಿತ; ಪ್ರಧಾನಿ ಶ್ಲಾಘನೆ

ಈಗ ಏಕಾಏಕಿ ಚೀನದ ಕೇಂದ್ರ ಸೇನಾ ಆಯೋಗದ ಜಂಟಿ ಸಿಬಂದಿ ವಿಭಾಗದಲ್ಲಿ ಪಾಕಿಸ್ಥಾನ ಸೇನೆಯ ಕರ್ನಲ್‌ ಹುದ್ದೆಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ವಿಶೇಷವೆಂದರೆ ಯುದ್ಧ ತಂತ್ರ, ಚೀನದ ಸಶಸ್ತ್ರ ಪಡೆಗಳಿಗೆ ತರಬೇತಿ, ವ್ಯೂಹಾತ್ಮಕ ಕಾರ್ಯತಂತ್ರ ರೂಪಿಸುವ ಕೆಲಸವನ್ನು ಈ ಆಯೋಗ ಮಾಡುತ್ತದೆ.

ನಡೆದಿದೆಯೇ ಕುತಂತ್ರ?
ಈಗಾಗಲೇ ಒಂದೆಡೆ ಗಡಿ ಪ್ರದೇಶಗಳಲ್ಲಿ ಉಗ್ರರನ್ನು ಒಳನುಸುಳುವಂತೆ ಮಾಡಿ, ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲು ಪಾಕಿಸ್ಥಾನವು ತುದಿಗಾಲಲ್ಲಿ ನಿಂತಿದೆ. ಇತ್ತೀಚೆಗಷ್ಟೇ ನುಸುಳುವಿಕೆಗೆ ಯತ್ನಿಸಿದ್ದ ಹಲವು ಉಗ್ರರನ್ನು ನಮ್ಮ ಭದ್ರತಾ ಪಡೆ ಹೊಡೆದುರುಳಿಸಿದೆ. ಇನ್ನೊಂದೆಡೆ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಚೀನದ ಸೇನೆಗಳು ವಾಪಸಾತಿ ಪ್ರಕ್ರಿಯೆ ನಡೆಸುತ್ತಿರುವ ನಡುವೆಯೇ ಪೂರ್ವ ಲಡಾಖ್‌ನಲ್ಲಿ ಭಾರೀ ಸಂಖ್ಯೆಯ ಚೀನೀ ಸೈನಿಕರ ನಿಯೋಜನೆ ಪ್ರಕ್ರಿಯೆ ನಡೆಯುತ್ತಲೇ ಇದೆ.

ಮತ್ತೊಂದೆಡೆ ಸೇನಾ ಸಾಮಗ್ರಿ ಖರೀದಿ ಸಂಬಂಧಿ ಪ್ರಾಜೆಕ್ಟ್ ಗಳಿಗೆಂದು ಬೀಜಿಂಗ್‌ನಲ್ಲಿರುವ ಚೀನದ ರಾಯಭಾರ ಕಚೇರಿಯಲ್ಲೂ 10 ಮಂದಿ ಹೆಚ್ಚುವರಿ ಪಾಕ್‌ ಸೇನಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಪಾಕಿಸ್ಥಾನ ಮತ್ತು ಡ್ರ್ಯಾಗನ್‌ ರಾಷ್ಟ್ರವು ಭಾರತದ ವಿರುದ್ಧ ಯಾವುದೋ ಕುತಂತ್ರ ರೂಪಿಸುತ್ತಿರುವ ಶಂಕೆ ಬಲವಾಗುತ್ತಿದೆ.

ಟಾಪ್ ನ್ಯೂಸ್

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.