ಕಳೆ ಏರಿಸಿಕೊಂಡ ಪಣಂಬೂರು, ಮಲ್ಪೆ ಬೀಚ್
Team Udayavani, Jan 31, 2022, 7:40 AM IST
ಪಣಂಬೂರು: ಕೊರೊನಾ ಕಾರಣ ಹೇರಲಾಗಿದ್ದ ನಿರ್ಬಂಧಗಳೆಲ್ಲ ಬಹುತೇಕ ಹಿಂದೆಗೆಯಲ್ಪಟ್ಟದ್ದರಿಂದ ರವಿವಾರ ಪಣಂಬೂರು ಬೀಚ್ನಲ್ಲಿ ಜನ ಜಂಗುಳಿ ಕಂಡುಬಂತು.
ಸ್ಥಳೀಯರು ಮಾತ್ರವಲ್ಲದೆ, ರಾಜ್ಯದ ವಿವಿಧೆಡೆಯಿಂದ ದೇವಸ್ಥಾನ ಪ್ರವಾಸದ ಜತೆಗೆ ಪಣಂಬೂರು ಬೀಚ್ಗೂ ಜನರು ಕುಟುಂಬ ಸಹಿತವಾಗಿ ಬಂದು ಸಮುದ್ರದಲ್ಲಿ ಆಟವಾಡಿ ಸಂಭ್ರಮ ಪಟ್ಟರು.
ಬೀಚ್ನ ಶುದ್ಧ ಗಾಳಿ ಆಸ್ವಾದಿಸಬೇಕೆಂಬ ಕಾರಣ ಕೊರೊನಾ ಮುಂಜಾಗ್ರತೆಯಾದ ಮಾಸ್ಕ್ಗಳು ಬ್ಯಾಗ್ ಸೇರುತ್ತಿವೆ. ಪೊಲೀಸರು ಮತ್ತು ಬೀಚ್ ಲೈಫ್ ಗಾರ್ಡ್ಗಳು ಯಾವುದೇ ಅವಘಡಕ್ಕೆ ಎಡೆಯಾಗದಂತೆ ನಿಗಾ ವಹಿಸಿದ್ದರು.
ಇದನ್ನೂ ಓದಿ:ಮತ್ತೆ ಸುಪ್ರೀಂ ಕೋರ್ಟ್ ಅಂಗಳಕ್ಕೆ ಪೆಗಾಸಸ್ ಗೂಢಚರ್ಯೆ ವಿವಾದ
ಮಲ್ಪೆಯಲ್ಲಿ ಜನರಾಶಿ
ಕೋವಿಡ್ ನಿರ್ಬಂಧಗಳಿಂದಾಗಿ ಬಿಕೋ ಎನ್ನುತ್ತಿದ್ದ ಮಲ್ಪೆ ಬೀಚ್ ಪ್ರವಾಸಿಗರ ಆಗಮನದಿಂದ ಕಳೆ ಪಡೆದುಕೊಂಡಿದೆ. ಈ ವಾರಾಂತ್ಯ ಮಲ್ಪೆ ಸಹಿತ ಜಿಲ್ಲೆಯ ಕಡಲ ತೀರಗಳು ಚಟುವಟಿಕೆಯಿಂದ ಕೂಡಿದ್ದವು. ಸ್ಥಳೀಯರು, ದೂರದ ಊರುಗಳ ಪ್ರವಾಸಿ ಗರು ಮಲ್ಪೆಯಲ್ಲಿ ವಾರಾಂತ್ಯವನ್ನು ಸಂಭ್ರಮಿ ಸಿದರು. ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಕಾರಣದಿಂದಾಗಿ ಜನಸಾಮಾನ್ಯರ ಹೊರಗಿನ ಓಡಾಟ ಹೆಚ್ಚಾಗಿರದ ಕಾರಣ ಇದುವರೆಗೆ ಪ್ರವಾಸೀ ತಾಣಗಳು ಖಾಲಿಯಾಗಿದ್ದವು. ಈಗ ಮಲ್ಪೆ ಸಹಿತ ಜಿಲ್ಲೆಯ ಕಡಲ ತೀರಗಳಲ್ಲಿ ಜನರ ಸಂಜೆಯ ವಿಹಾರ, ಮೋಜಿನಾಟ ಮತ್ತೆ ಆರಂಭವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ