ಆನ್‌ಲೈನ್‌ ಶಿಕ್ಷಣದಿಂದ ಹೆತ್ತವರು ಹೈರಾಣ

ಮಕ್ಕಳಿಗಾಗಿ ಮೊಬೈಲ್‌ ಖರೀದಿಗೆ ಸಾಲ ಮಾಡುವ ಪರಿಸ್ಥಿತಿ

Team Udayavani, Jul 10, 2020, 6:12 AM IST

ಆನ್‌ಲೈನ್‌ ಶಿಕ್ಷಣದಿಂದ ಹೆತ್ತವರು ಹೈರಾಣ

ಮಹಾನಗರ: ಎಲ್‌ಕೆಜಿಯಿಂದ 10ನೇ ತರಗತಿವರೆಗಿನ ಆನ್‌ಲೈನ್‌ ತರಗತಿಗೆ ಸರಕಾರ ಅಸ್ತು ಎಂದ ಬೆನ್ನಲ್ಲೇ ಹೆತ್ತವರಿಗೆ ಹೊಸ ತಲೆನೋವು ಶುರುವಾಗಿದೆ. ಏಕೆಂದರೆ ಕೋವಿಡ್‌ ತಂದಿಟ್ಟ ಆರ್ಥಿಕ ಸಮಸ್ಯೆಯಿಂದ ಹೈರಾಣಾಗಿದ್ದವರು ಇದೀಗ ಇಲ್ಲದ ಹಣವನ್ನು ಹೊಂದಿಸಿಕೊಂಡು ಆನ್‌ಲೈನ್‌ ತರಗತಿಗೆಂದೇ ಪ್ರತ್ಯೇಕ ಮೊಬೈಲ್‌, ಲ್ಯಾಪ್‌ಟಾಪ್‌ ಖರೀದಿಸ ಬೇಕಾಗಿ ಬಂದಿದೆ.

ಕೋವಿಡ್‌ ಭೀತಿಯಿಂದ ದೇಶಾದ್ಯಂತ ಲಾಕ್‌ಡೌನ್‌ ಆದ ಪರಿಣಾಮ ಹಲವರು ಕೆಲಸ ಕಳೆದುಕೊಂಡಿದ್ದಾರೆ. ಹಲವು ಕಂಪೆನಿಗಳು ಉದ್ಯೋಗಿಗಳ ಸಂಬಳದಲ್ಲಿ ಕಡಿತ ಮಾಡಿದ್ದರೆ, ಇನ್ನು ಕೆಲವರಿಗೆ ರಜೆ ನೀಡಿ ಸಂಬಳವನ್ನೇ ಕೊಟ್ಟಿಲ್ಲ. ವರ್ಕ್‌ ಫ್ರಂ ಹೋಂ ಇರುವ ಉದ್ಯೋಗಿಗಳಿಗೆ ಅರ್ಧ ಸಂಬಳವನ್ನು ಮಾತ್ರ ನೀಡಲಾಗುತ್ತಿದೆ. ಹೀಗಿರುವಾಗ, ತಿಂಗಳ ಖರ್ಚು ಸಮತೂಗಿಸಲು ಸಂಬಳವನ್ನೇ ಆಶ್ರಯಿಸಿರುವ ಬಹುತೇಕ ಹೆತ್ತವರು ಇದೀಗ ಆನ್‌ಲೈನ್‌ ತರಗತಿಯಿಂದಾಗಿ ಹೈರಾಣಾಗಿದ್ದಾರೆ.

ಎಲ್‌ಕೆಜಿಯಿಂದಲೇ ಆನ್‌ಲೈನ್‌ ತರಗತಿಗಳು ಮಂಗಳೂರು ಸಹಿತ ಹಲವು ಕಡೆಗಳಲ್ಲಿ ಈಗಾಗಲೇ ಆರಂಭವಾಗಿವೆ. ಮನೆಯಲ್ಲೇ ಇರುವ ಹೆತ್ತವರು ತಮ್ಮ ಮೊಬೈಲ್‌, ಲ್ಯಾಪ್‌ಟಾಪ್‌ ಅನ್ನೇ ಮಕ್ಕಳಿಗೆ ನೀಡಿದರೆ, ಹೆತ್ತವರಿಬ್ಬರೂ ಉದ್ಯೋಗದಲ್ಲಿರುವ ಮನೆಗಳಲ್ಲಿ ಮಕ್ಕಳ ಆನ್‌ಲೈನ್‌ ತರಗತಿಗೆಂದೇ ಹೊಸ ಮೊಬೈಲ್‌, ಲ್ಯಾಪ್‌ಟಾಪ್‌ ಖರೀದಿಸಬೇಕಾಗಿ ಬಂದಿದೆ. ಲಾಕ್‌ಡೌನ್‌ನಿಂದ ಅರ್ಧ ಸಂಬಳಕ್ಕೆ ದುಡಿಯುತ್ತಿರುವ ಬಹುತೇಕ ಹೆತ್ತವರಿಗೆ ಇದು ಇನ್ನಷ್ಟು ಸಮಸ್ಯೆ ತಂದೊಡ್ಡಿದೆ.

ಕರೆ ಸ್ವೀಕರಿಸಲೂ ಸಮಸ್ಯೆ
ಇರುವ ಮೊಬೈಲ್‌ ಅನ್ನು ಮಕ್ಕಳ ಆನ್‌ಲೈನ್‌ ತರಗತಿಗೆ ನೀಡಿದರೆ, ತರಗತಿ ಮುಗಿಯುವವರೆಗೂ ಮೊಬೈಲ್‌ ಮಕ್ಕಳ ಕೈಯಲ್ಲಿರಬೇಕು. ವರ್ಕ್‌ ಫ್ರಂ ಹೋಂ ಮಾಡುವ ಹೆತ್ತವರಿಗೆ ಕಚೇರಿ ಕರೆ ಸ್ವೀಕರಿಸುವುದು, ಕಚೇರಿಯ ಆನ್‌ಲೈನ್‌ ಮೀಟಿಂಗ್‌ಗಳಿಗೆ ಹಾಜರಾಗುವುದು, ಇತರ ಪ್ರಮುಖ ಕರೆಗಳನ್ನು ಸ್ವೀಕರಿಸಲು ಅಗತ್ಯವಾಗಿ ಮೊಬೈಲ್‌ ಬೇಕಾಗುತ್ತದೆ. ಹೀಗಿರುವಾಗ ಮನೆಯಲ್ಲೇ ಇದ್ದರೂ ಮಕ್ಕಳಿಗೆ ತಮ್ಮ ಮೊಬೈಲ್‌ ನೀಡಲು ಸಮಸ್ಯೆಯಾಗುತ್ತದೆ. ಇಂತಹ ಹೆತ್ತವರೂ ಮಕ್ಕಳ ಭವಿಷ್ಯದ ಚಿಂತೆಯಿಂದ ಅನಿವಾರ್ಯವಾಗಿ ಹೊಸ ಮೊಬೈಲ್‌ ಖರೀದಿಸಬೇಕಾಗಿ ಬಂದಿದೆ. ನನಗೂ ಇದೇ ಅನುಭವವಾಗಿದೆ ಎನ್ನುತ್ತಾರೆ ಕೆಪಿಟಿಯ ಸಂದೀಪ್‌.

ತಡರಾತ್ರಿವರೆಗೂ ಅಧ್ಯಯನ ಗೋಳು
ಆನ್‌ಲೈನ್‌ ತರಗತಿ ಶುರುವಾದಂದಿನಿಂದ ಶಿಕ್ಷಕರಿಗೆ ತಡರಾತ್ರಿವರೆಗೂ ಅಧ್ಯಯನ ನಡೆಸಬೇಕಾದ ಹೊಸ ತಲೆನೋವು ಶುರುವಾಗಿದೆ. ಆನ್‌ಲೈನ್‌ ಶಿಕ್ಷಣವೆಂಬುದು ಶಿಕ್ಷಕರಿಗೂ ಹೊಸತು. ಮಕ್ಕಳ ಮನಸ್ಸಿಗೆ ತಲುಪುವಂತೆ ಬೋಧನ ಕ್ರಮವನ್ನು ಬದಲಿಸಿಕೊಳ್ಳಬೇಕು. ಇದಕ್ಕೆಲ್ಲ ಅಧ್ಯಯನ ಅಗತ್ಯ. ಈ ನಡುವೆ ಖಾಸಗಿ ಶಾಲೆಗಳ ಶಿಕ್ಷಕರಿಗೆ ಅರ್ಧ ಸಂಬಳ ನೀಡಲಾಗುತ್ತಿದ್ದರೂ ಆನ್‌ಲೈನ್‌ ತರಗತಿ ಹೆಸರಿನಲ್ಲಿ ಕೆಲಸದ ಅವಧಿ ಹೆಚ್ಚಳವಾಗಿದೆ.

ಸಾಲಕ್ಕೆ ಹೆತ್ತವರ ಮೊರೆ
ಪ್ರತಿ ತಿಂಗಳು ದುಡಿದ ಹಣ ಮನೆ ಬಾಡಿಗೆ, ವಿವಿಧ ಬಿಲ್‌ಗ‌ಳು, ಸಾಲಗಳ ಕಂತು ಕಟ್ಟಲು ಸಾಕಾಗುವುದಿಲ್ಲ. ಇದೀಗ ಅರ್ಧ ಸಂಬಳಕ್ಕೆ ದುಡಿಯುತ್ತಿರುವ ಹಲವುಹೆತ್ತವರಿಗೆ ಜೀವನ ನಡೆಸುವುದೇ ಕಷ್ಟವಾಗಿದೆ. ಅಂತಹದ್ದರಲ್ಲಿ ಇಬ್ಬರು ಮಕ್ಕಳ ಆನ್‌ಲೈನ್‌ ತರಗತಿಗಾಗಿ ಎರಡು ಮೊಬೈಲ್‌ಗ‌ಳನ್ನು ಹೊಸದಾಗಿ ಖರೀದಿಸಬೇಕಾಗಿದೆ. ಮೊಬೈಲ್‌ ಖರೀದಿಸಲು ಬೇರೆ ದಾರಿ ಕಾಣದೆ ಸಾಲ ಮಾಡಬೇಕಾದ ಪರಿಸ್ಥಿತಿ ಕೆಲವು ಹೆತ್ತವರಿಗೆ ಬಂದೊದಗಿದೆ. ನಗರದ ಕೆಲವು ಬ್ಯಾಂಕ್‌, ಸೊಸೈಟಿಗಳಲ್ಲಿ ಮಕ್ಕಳ ಆನ್‌ಲೈನ್‌ ಶಿಕ್ಷಣಕ್ಕೆ ಮೊಬೈಲ್‌ ಕೊಡಿಸಲು ಮತ್ತು ಹಣಕಾಸಿನ ಸಮಸ್ಯೆ ನಿವಾರಿಸಲೆಂದೇ ಹೆತ್ತವರು ತಮ್ಮ ಚಿನ್ನಾಭರಣವನ್ನು ಅಡವಿಡುತ್ತಿದ್ದಾರೆ. ಹೆತ್ತವರು ಸೊಸೈಟಿಗೆ ಬಂದಾಗ ಈ ಕಷ್ಟವನ್ನು ಹೇಳಿಕೊಳ್ಳುತ್ತಾರೆ ಎಂದು ಸೊಸೈಟಿಯೊಂದರ ಸಿಬಂದಿ ಹೇಳುತ್ತಾರೆ.

 ಹೆತ್ತವರಿಗೆ ಅನಗತ್ಯ ಒತ್ತಡ
ಆನ್‌ಲೈನ್‌ ಶಿಕ್ಷಣದಿಂದ ಮಕ್ಕಳು ಕಲಿಯುವಂತದ್ದೇನಿಲ್ಲ. ತರಗತಿ ಶಿಕ್ಷಣದಿಂದಲೇ ಚಿಕ್ಕ ಮಕ್ಕಳಿಗೆ ಹೆಚ್ಚು ಅರ್ಥವಾಗುವುದು. ಆದರೂ ಆನ್‌ಲೈನ್‌ ಶಿಕ್ಷಣ ಎಂಬುದಾಗಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಜತೆಗೆ ಹೆತ್ತವರಿಗೂ ಹೆಚ್ಚು ಒತ್ತಡ ನೀಡುತ್ತಿವೆ. ಮಕ್ಕಳ ಶಿಕ್ಷಣಕ್ಕೋಸ್ಕರ ಪ್ರತ್ಯೇಕವಾಗಿ ಮೊಬೈಲ್‌ ಖರೀದಿಸಬೇಕಾಗಿ ಬಂದಿದೆ.
-ಬಿಂದು ಕೊಂಚಾಡಿ, ಹೆತ್ತವರು

 ಋಣಾತ್ಮಕ ಪರಿಣಾಮ
ಆನ್‌ಲೈನ್‌ ಶಿಕ್ಷಣ ಕೇವಲ ಮಾಹಿತಿಯ ವರ್ಗಾವಣೆ ಮತ್ತು ಪಠ್ಯವನ್ನು ಹಾಗೆಯೇ ಮಕ್ಕಳಿಗೆ ತಲುಪಿಸುವಷ್ಟು ಮಾತ್ರ ಕೆಲಸ ನಿರ್ವಹಿಸಬಹುದೇ ವಿನಾ ಕ್ರಿಯಾತ್ಮಕ, ಸೃಜನಶೀಲ ಕಲಿಕೆಗೆ, ಕಲಿಸುವಿಕೆಗೆ ಅನುವು ಮಾಡಿಕೊಡುವುದಿಲ್ಲ. ಮಕ್ಕಳನ್ನು ಸಾಮಾಜಿಕ ಮಾಧ್ಯಮ ವ್ಯಸನಿಗಳನ್ನಾಗಿ ಮಾಡಲು ಹೆಬ್ಟಾಗಿಲನ್ನೇ ತೆರೆದು ಇಟ್ಟಿದೆ. ವಯಸ್ಸು, ಸಾಮರ್ಥ್ಯಕ್ಕನುಗುಣವಾದ ಕಲಿಕೆಗಿಂತ ಹೊರತಾದ ಕಲಿಕಾ ಪ್ರಕ್ರಿಯೆ ಇದಾಗಿರುವ ಕಾರಣ ಋಣಾತ್ಮಕ ಪರಿಣಾಮಗಳೇ ಹೆಚ್ಚಿವೆ. ಮನೆಯಿಂದ ಹೊರಹೋಗಲಾಗದ ಪರಿಸ್ಥಿತಿಯಲ್ಲಿ ಮನೆಯಲ್ಲಿಯೇ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣಕ್ಕೆ ಅವಲಂಬಿತವಾಗದೆ ಇತರ ವಿಚಾರಗಳನ್ನು ಕಲಿಸುವುದೇ (ತಂದೆ, ತಾಯಿ) ಉತ್ತಮ.
 -ವಾರಿಜಾಕ್ಷಿ, ಶಿಕ್ಷಕಿ

ಟಾಪ್ ನ್ಯೂಸ್

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Moodabidri ಮೆದುಳು ಜ್ವರ ಉಲ್ಬಣಿಸಿ ವಿದ್ಯಾರ್ಥಿನಿ ನಿಧನ

Moodabidri ಮೆದುಳು ಜ್ವರ ಉಲ್ಬಣಿಸಿ ವಿದ್ಯಾರ್ಥಿನಿ ನಿಧನ

Dakshina Kannada: ಮನೆಮನೆ ಭೇಟಿ ಮೂಲಕ ಮತದಾನ ಸೌಲಭ್ಯಕ್ಕೆ ಚಾಲನೆ

Dakshina Kannada: ಮನೆಮನೆ ಭೇಟಿ ಮೂಲಕ ಮತದಾನ ಸೌಲಭ್ಯಕ್ಕೆ ಚಾಲನೆ

Hajj Yatra: ಕಂತು ಪಾವತಿಗೆ ಎ. 27ರಂದು ಕೊನೆಯ ದಿನ

Hajj Yatra: ಕಂತು ಪಾವತಿಗೆ ಎ. 27ರಂದು ಕೊನೆಯ ದಿನ

Mangaluru ಪ್ರಧಾನಿಯ ಕೈ ಸೇರಿದ ಕರಾವಳಿ ಕಲಾವಿದನ “ಆಯಿಲ್‌ ಕ್ಯಾನ್ವಾಸ್‌’

Mangaluru ಪ್ರಧಾನಿಯ ಕೈ ಸೇರಿದ ಕರಾವಳಿ ಕಲಾವಿದನ “ಆಯಿಲ್‌ ಕ್ಯಾನ್ವಾಸ್‌’

ರಾಜ್ಯಪ್ರಶಸ್ತಿ ಪುರಸ್ಕೃತ ಕಲಾವಿದೆ ಗಿಡಿಗೆರೆ ರಾಮಕ್ಕ ನಿಧನ

ರಾಜ್ಯಪ್ರಶಸ್ತಿ ಪುರಸ್ಕೃತ ಕಲಾವಿದೆ ಗಿಡಿಗೆರೆ ರಾಮಕ್ಕ ನಿಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

7-

Obsessive Psychiatry: ಗೀಳು ಮನೋರೋಗ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

5-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.