ಮಧ್ವಾಚಾರ್ಯರ ಜಾಗತಿಕ ಪರಿಕಲ್ಪನೆ


Team Udayavani, Jan 18, 2022, 5:42 AM IST

ಮಧ್ವಾಚಾರ್ಯರ ಜಾಗತಿಕ ಪರಿಕಲ್ಪನೆ

ಆಚಾರ್ಯ ಮಧ್ವರ ಸಿದ್ಧಾಂತವನ್ನು ಈಗ ದ್ವೆತ ಮತ ಎಂದು ಹೇಳುತ್ತಾರಾ ದರೂ ಇದರ ಪ್ರಾಚೀನ ಹೆಸರು ತಣ್ತೀವಾದ. ಏಕದೇವ: ದೇವನೊಬ್ಬನೇ ಎಂಬ ತಣ್ತೀ ಬಹು ಪ್ರಾಚೀನ. ವೈದಿಕ ಕ ವಾš¾ಯ “ಏಕೋದೇವಃ’ ಎಂದು ಹೇಳಿದೆ. ಆದ್ದರಿಂದ ಈಗ ಜನಸಾಮಾನ್ಯರ ಭಾಷೆಯಲ್ಲಿ ಹೇಳುವ ಅನೇಕಾ ನೇಕ ದೇವರುಗಳು ಸ್ವತಂತ್ರನಾದ ಭಗವಂತನ ಕಲ್ಪನೆಯಲ್ಲಿಲ್ಲ, ಹಾಗೆಂದು ಸರ್ವಥಾ ನಿರಾಕರಿಸುವಂತೆಯೂ ಇಲ್ಲ. ಅವ ರವರ ಸಾಮರ್ಥ್ಯ ಬೇರೆಯಷ್ಟೆ. ಸರ್ವತಂತ್ರ ಸ್ವತಂತ್ರನಾದ ಭಗವಂತನನ್ನು ಆಚಾರ್ಯ ಮಧ್ವರು ನಾರಾಯಣ ಎಂದರು. ವೇದಗಳೂ ಸಹಿತ ಎಲ್ಲ ಶಬ್ದಗಳೂ ಭಗವಂತನನ್ನೇ ಹೇಳುತ್ತವೆ, ಯಾವುದೇ ಭಾಷೆಯಲ್ಲಿ ಕರೆದರೂ ಅದು ಒಬ್ಬ ದೇವನಿಗೇ ಸಲ್ಲುತ್ತದೆ. ಈಗ ಪರಿಗಣಿಸುವ ನಾನಾ ದೇವರನ್ನು ದೇವತೆಗಳು ಎಂದು ಪರಿಗಣಿಸಲಾಗಿದೆ. ಇವರು ದೇವರನ್ನು ಸಾಕ್ಷಾತ್ಕರಿಸಿಕೊಂಡ ಉತ್ತಮ ಜೀವರು. ಹೀಗಾಗಿ ಭಗವಂತ ಬಿಂಬನೆನಿಸಿದರೆ ಜೀವರು ಪ್ರತಿಬಿಂಬ.

ಪ್ರಪಂಚದ ಬಂಧನ: ಜೀವರುಗಳು ಸದಾ ಪ್ರಾಪಂಚಿಕ ವ್ಯವಹಾರದಲ್ಲಿ ಮುಳುಗಿರುವುದನ್ನು ವ್ಯಾಪಕ ಅರ್ಥದಲ್ಲಿ ಸಂಸಾರ ಎಂದು ಕರೆ ಯಲಾಗಿದೆ. ಕೌಟುಂಬಿಕ ಅರ್ಥ ವಲ್ಲ. ಪ್ರಪಂಚದ ಬಂಧನದಿಂದ ಬಿಡು ಗಡೆಗೊಳ್ಳುವುದೇ ಜೀವರು ಗಳ ಪರಮಧ್ಯೇಯ.

ಪ್ರಪಂಚದ ಸೃಷ್ಟಿ: ಪಂಚಭೂತ- ತನ್ಮಾತ್ರೆ-ಕೋಶ-ಇಂದ್ರಿಯಗಳು ಈ ಐದರಿಂದಾಗಿ ಪ್ರ-ಪಂಚ ಎಂಬ ಹೆಸರು ಬಂತು. ಇದರಲ್ಲಿ ಐದು ರೂಪಗಳ ಪ್ರಾಣತಣ್ತೀಗಳೂ ಇವೆ. ಭಗವಂತ ನಿಯಂತ್ರಿಸುತ್ತಿದ್ದಾನೆ. ಪ್ರಪಂಚದಲ್ಲಿ ಜಡ-ಜಡ ಭೇದ, ಜಡ-ಜೀವರ ಭೇದ, ಜಡ-ಪರಮಾತ್ಮ ಭೇದ, ಜೀವ- ಜೀವರ ಭೇದ, ಜೀವ-ಪರಮಾತ್ಮ ಭೇದ. ಇದು ಪ್ರಕೃತಿ ನಿಯಮ, ಬದಲಾಯಿಸಲಾಗದು. ಒಬ್ಬನಂತೆ ಇನ್ನೊಬ್ಬ, ಮರದಂತೆ ಇನ್ನೊಂದು ಮರ, ಒಂದು ಎಲೆಯಂತೆ ಇನ್ನೊಂದು ಎಲೆ ಇರುವುದಿಲ್ಲ.

ಭಿನ್ನಭಿನ್ನ ಸ್ವಭಾವ: ಮನುಷ್ಯನೂ ಸೇರಿದಂತೆ ಎಲ್ಲ ಪ್ರಾಣಿಗಳ ಸ್ವಭಾವವೂ ಭಿನ್ನ ಭಿನ್ನ. ಅವರವರ ಸ್ವಭಾವಕ್ಕೆ ತಕ್ಕಂತೆ ಉದ್ಧಾರ ಸಾಧ್ಯ. ಆತನ ಬೆಳವಣಿಗೆಯೂ ಸ್ವಭಾವಕ್ಕೆ ತಕ್ಕಂತೆ, ವಾತಾವರಣ ಬೆಳವಣಿಗೆ ಮೇಲೆ ಪರಿಣಾಮ ಬೀರುವುದಾದರೂ ಒಳಗಿನ ಸ್ವಭಾವ ಪ್ರಧಾನ ಪಾತ್ರ ವಹಿಸುತ್ತದೆ. ಗೀತೆಯ ಚಾತುರ್ವಣ್ಯ ಪದ್ಧತಿ ವಿಷಯದಲ್ಲಿ ವರ್ಣವೇ ಬೇರೆ, ಜಾತಿಯೇ ಬೇರೆ ಎಂದು ತಿಳಿಸಿದ್ದಾರೆ. ಯಾವುದೇ ಜಾತಿಯಲ್ಲಿ ಸಾತ್ವಿಕ, ರಾಜಸ, ತಾಮಸ ಜನಿಸಬಹುದು ಮತ್ತು ಜಾತಿ ಆಧಾರದಲ್ಲಿ ಬದಲಾಗುವುದೂ ಇಲ್ಲ. ಸಾತ್ವಿಕ, ರಾಜಸ, ತಾಮಸ ಗುಣ ಗಳು ಜೀವರ ಇತಿಹಾಸಕ್ಕೆ (ಜನ್ಮಾಂತರ) ತಕ್ಕನಾಗಿ ಬರುತ್ತದೆ. ಮಧ್ವಾಚಾರ್ಯರು ಮೋಕ್ಷಾಪೇಕ್ಷಿಗಳು, ನಿತ್ಯ ಸಂಸಾರಿಗಳು, ನಿತ್ಯ ನಾರಕಿಗಳು ಎಂಬ ಜೀವತ್ತೈವಿಧ್ಯ ವರ್ಗೀಕರಣವನ್ನು ಹೇಳುವ ಮುನ್ನ ಜೈನಧರ್ಮದವರೂ ಜೀವ  ಹೇಳಿದ್ದರು. ಪ್ರಸಕ್ತ ಸಮಾಜವನ್ನು ಸೂಕ್ಷ್ಮ ದೃಷ್ಟಿಯಿಂದ ನೋಡಿದರೆ ತಿಳಿಯುತ್ತದೆ.ದಾಸತ್ವ, ಸೇವತ್ವ: ಭಗವಂತನ ಅಸ್ತಿತ್ವ, ಆತನ ಮಹಿಮೆಯನ್ನು ಜೀವರು ಸದಾ ಸ್ಮರಿಸಿಕೊಂಡು ದಾಸನಾಗಿ ಇರಬೇಕು, ಆತನಿಂದಲೇ ಸೃಷ್ಟಿಯಾದ ಪ್ರಪಂಚವನ್ನೂ ಅದೇ ರೀತಿ ಪ್ರೀತಿಸಬೇಕು. ಕರ್ತವ್ಯಕರ್ಮದಿಂದ ವಿಮುಖರಾಗಬಾರದು ಎಂಬ ಶ್ರೀಕೃಷ್ಣನ ಸಂದೇಶವಿದೆ. ದುಃಖಿತರು, ದೀನದಲಿತರಿಗೆ ನೆರ ವಾಗುವುದು ಜೀವರ ಆದ್ಯ ಕರ್ತವ್ಯ. ಇದೂ ಭಗವಂತನ ಪೂಜೆ.

ಎಲ್ಲೆಲ್ಲೂ ದೇವರು
ಜಗತ್ತು ಸತ್ಯವೋ-ಅಸತ್ಯವೋ? ಜಗತ್ತನ್ನು ನಾವು ನೋಡುತ್ತಿರುವುದರಿಂದ ಸತ್ಯ ಹೌದು. ಅಸತ್ಯವೆಂದರೆ ಸುಳ್ಳಾಗಿರದೆ, ಭಗವಂತನ ನೀತಿಯನುಸಾರ ನಡೆಯುವ ವ್ಯವಸ್ಥೆಯಲ್ಲಿದೆ. ಇದು ನಿತ್ಯವೂ ನಮಗೆ ಸಿಗುವುದಿಲ್ಲ ಎಂಬ ಅನಿತ್ಯ ಅರ್ಥವೂ ಇದೆ. ದೇವರನ್ನು ವಿಗ್ರಹದಲ್ಲಿ ಕಾಣುವುದೇ ವಿನಾ ವಿಗ್ರಹವೇ ದೇವರಲ್ಲ. ದೇವರು ಎಲ್ಲ ಕಡೆ ಇದ್ದಾನೆಂದಾದಾಗ ವಿಗ್ರಹದಲ್ಲಿರಲು ಸಾಧ್ಯವಿಲ್ಲವೆ? ಮಧ್ವರು ಹೀಗಾಗಿಯೇ ಬಾಲ್ಯದಲ್ಲಿಯೇ ಕಲ್ಲು, ಮಣ್ಣು, ಮರಗಳನ್ನೂ ಮುಟ್ಟಿ ನಮಸ್ಕರಿಸಿದ್ದರು. ಯಾರೂ ಕಾಣದಂತೆ ಬಾಳೆಹಣ್ಣನ್ನು ತಿನ್ನಲು ಕನಕದಾಸರಿಗೆ ಸಾಧ್ಯವಾಗದೆ ಹೋದದ್ದು ಇದೇ ಕಾರಣಕ್ಕಾಗಿ.. ದೇವರಿಗೆ ಕಾಣದಂತೆ ಏನನ್ನಾದರೂ ಮಾಡಲು ಸಾಧ್ಯವೆ? ಆಧುನಿಕರು ಬಳಸುವ ಪದ “ಅಂತಃಸಾಕ್ಷಿ’ ಇದೇ. ಇದುವೇ ಸಾಕ್ಷೀಪ್ರಜ್ಞೆ ಎಂದು ಪೇಜಾವರ ಶ್ರೀಗಳು ಹೇಳುತ್ತಿದ್ದರು.
ಪ್ರತಿಮಾ ಉಪಾಸನೆ ಪ್ರಾಥಮಿಕ ಸ್ತರದ್ದು, ಅಂತರ್‌ ಉಪಾಸನೆ (ತನ್ನೊಳಗಿನ ದೇವರ ಉಪಾಸನೆ, ಭಗವಂತನನ್ನು ತೃಪ್ತಿಪಡಿಸಲು ಪ್ರಾಮಾಣಿಕ ಜೀವನ ಮಾಡಬೇಕು), ಅನಂತರದ ಎಲ್ಲರೊಳಗೆ ಇರುವ ಭಗವಂತನ ಆರಾಧನೆ ವ್ಯಾಪ್ತೋಪಾಸನೆ ಅತಿ ಎತ್ತರದ್ದು ಎನ್ನುತ್ತಾರೆ ಭಾವೀ ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.