ಮೈಸೂರು ದಿನಚರಿಯಲ್ಲಿ ಪಾವನಾ

ಗೊಂಬೆ ಹುಡುಗಿಯ ಸಾಲು ಸಾಲು ಸಿನ್ಮಾ

Team Udayavani, Jun 14, 2020, 4:18 AM IST

mysore-paavana

“ಬೊಂಬೆಗಳ ಲವ್‌’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಸ್ಪರ್ಶಿಸಿದ ಪಾವನಾ, ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟು ಒಂದು ದಶಕ ಕಳೆದಿದೆ. ಇದುವರೆಗೆ 15 ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮಾಡಿದ ಚಿತ್ರಗಳು ದೊಡ್ಡ ಯಶಸ್ಸು ಕೊಡದಿದ್ದರೂ, ಗುರುತಿಸಿಕೊಳ್ಳುವಂತಹ ಪಾತ್ರಗಳನ್ನು ಮಾಡಿರುವ ತೃಪ್ತಿ ಪಾವನಾ ಅವರದು. ಸದ್ಯಕ್ಕೆ ಪಾವನಾ ಕೈಯಲ್ಲಿ ಮೂರು ಮತ್ತೆರೆಡು ಚಿತ್ರಗಳಿವೆ. ಹೊಸ ಕೆಥೆಗಳನ್ನೂ ಇದೀಗ ಕೇಳುವಂತೆ ಫೋನ್‌ ಕಾಲ್‌ಗ‌ಳು ಬರುತ್ತಿವೆ. ಸದ್ಯ ಲಾಕ್‌ಡೌನ್‌ ಸಡಿಲಗೊಂಡಿದೆ. ಇನ್ನು ಮೇಲೆ ಕಥೆ ಕೇಳುವ ಉತ್ಸಾಹದಲ್ಲೂ ಇದ್ದಾರೆ.

ಅಷ್ಟೇ ಅಲ್ಲ, ಅವರ ಅಭಿನಯದ “ರುದ್ರಿ’,”ಮೈಸೂರ್‌ ಡೈರೀಸ್‌’ ಮತ್ತು “ಕಲಿವೀರ’ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಇನ್ನೇನು ಸೆನ್ಸಾರ್‌ ಆಗಿ, ಪ್ರೇಕ್ಷಕರ ಮುಂದೆ ಬರಬೇಕಷ್ಟೇ. ಹಾಗೊಂದು ವೇಳೆ ಚಿತ್ರಮಂದಿರಗಳು ಆರಂಭಗೊಂಡರೆ, ನಿರ್ಮಾಪಕರು ಪರಿಸ್ಥಿತಿ ಅರಿತು ಸಿನಿಮಾ ಬಿಡುಗಡೆ ಮಾಡಬಹುದು. ಸದ್ಯಕ್ಕೆ ಏನೆಂಬುದು ಗೊತ್ತಿಲ್ಲ. ಚಿತ್ರೀಕರಣಕ್ಕಿನ್ನೂ ಅನುಮತಿ ಕೊಟ್ಟಿಲ್ಲವಾದ್ದರಿಂದ ಯಾವುದಕ್ಕೂ ಸ್ಪಷ್ಟನೆ ಇಲ್ಲ ಎಂಬುದು ಪಾವನಾ ಅವರ ಮಾತು. ಇನ್ನು, ಪಾವನಾ ಅಭಿನಯದ “ತೂತು ಮಡಿಕೆ’ ಎಂಬ ವಿಭಿನ್ನ ಚಿತ್ರ ಕೂಡ ರಿಲೀಸ್‌ಗೆ ರೆಡಿಯಾಗುತ್ತಿದೆ.

“ಮೆಹಬೂಬಾ’ ಸಿನಿಮಾ ಇನ್ನೇನು ಚಿತ್ರೀಕರಣ ಶುರುಗೊಂಡರೆ, ಒಂದಷ್ಟು ಶೂಟಿಂಗ್‌ ಆಗಬೇಕಿದೆ. ಈಗಾಗಲೇ ಒಳಾಂಗಣ ಚಿತ್ರೀಕರಣ ಆಗಿದ್ದು, ಮೈಸೂರಲ್ಲಿ ಹೊರಾಂಗಣ ಚಿತ್ರೀಕರಣ ಆಗಬೇಕಿದೆ ಎಂದು ವಿವರ ಕೊಡುತ್ತಾರೆ ಪಾವನಾ. ಎಲ್ಲರಂತೆಯೂ ಪಾವನಾ ಅವರಿಗೂ ಒಂದಷ್ಟು ಹೊಸ ನಿರೀಕ್ಷೆಗಳಿವೆ. ಈಗ “ಮೈಸೂರು ಡೈರೀಸ್‌’, “ರುದ್ರಿ’, “ಪ್ರಭುತ್ವ’, “ತೂತು ಮಡಿಕೆ’ ಹೀಗೆ ಕೆಲವು ಚಿತ್ರಗಳ ಮೇಲೆ ಪಾವನಾ ಅವರಿಗೆ ಹೆಚ್ಚು ನಿರೀಕ್ಷೆ ಇದೆ.

ಸದ್ಯ ಕನ್ನಡದ ಭರವಸೆಯ ನಾಯಕ ನಟಿಯರ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಿರುವ ಪಾವನಾಗೆ ಈಗ ಕೈಯಲ್ಲಿರುವ ಚಿತ್ರಗಳ ಹೊಸಬಗೆಯ ಪಾತ್ರಗಳು ಅವರ ಸಿನಿಬದುಕಿನಲ್ಲಿ ಹೊಸದೊಂದು ಮೈಲೇಜ್‌ ತಂದುಕೊಡುತ್ತದೆ ಎಂಬುದು ಅವರಿಗಿರುವ ಬಲವಾದ ನಂಬಿಕೆ. ಅದೆಲ್ಲಾ ಸರಿ, ಪಾವನಾ ಅವರೀಗ ಹೊಸದೊಂದು ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರದ ಮೋಷನ್‌ ಪೋಸ್ಟರ್‌ ನೋಡಿದರೆ ಅದೊಂದು ವಿಭಿನ್ನ ಪ್ರಯೋಗದ ಚಿತ್ರ ಅನ್ನೋದು ಗೊತ್ತಾಗುತ್ತದೆ.

ಆ ಸಿನಿಮಾ ಹೆಸರು “ರುದ್ರಿ’. ಹೌದು, ಈ ಚಿತ್ರದ ಮೇಲೂ ಪಾವನಾ ಅವರಿಗೆ ಇನ್ನಿಲ್ಲದ ವಿಶ್ವಾಸವಿದೆ. ಕಾರಣ, ಆ ಚಿತ್ರದ ಕಥೆ ಹಾಗು ಪಾತ್ರ. ಅಂದಹಾಗೆ, “ರುದ್ರಿ’ ಒಂದು ಮಹಿಳಾ ಪ್ರಧಾನವಾಗಿರುವ ಚಿತ್ರ. ಆದರ ಬಗ್ಗೆ ಹೇಳುವ ಪಾವನಾ, “ಈಗಾಗಲೇ ಚಿತ್ರದ ಫ‌ಸ್ಟ್‌ಲುಕ್‌ ಹೊರಬಂದಿದೆ. ಪುನೀತ್‌ರಾಜಕುಮಾರ್‌ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದು ವಿಶೇಷ. ಬಡಿಗೇರ್‌ ದೇವೇಂದ್ರ ನಿರ್ದೇಶಿಸಿದ್ದಾರೆ. “ರುದ್ರಿ’ ಚಿತ್ರದ ವಿಶೇಷವೆಂದರೆ, ಬಹುತೇಕ ಉತ್ತರ ಕರ್ನಾಟಕ ಭಾಗದ ಹಿನ್ನೆಲೆಯಲ್ಲೇ ಸಾಗಲಿದೆ. ಭಾಷೆ ಕೂಡ ಉತ್ತರ ಕರ್ನಾಟಕದಲ್ಲೇ ಇರಲಿದೆ.

ಒಂದು ಹೆಣ್ಣಿನ ಸುತ್ತ ನಡೆಯುವ ಕಥೆ ಇದಾಗಿದ್ದು, ಒಬ್ಬ ಹುಡುಗಿಯ ಆಸೆ, ಕನಸು, ನೋವು, ನಲಿವುಗಳ ಸುತ್ತ ಚಿತ್ರ ಸಾಗಲಿದೆ. ಹಳ್ಳಿಯ ಹೆಣ್ಣುಮಕ್ಕಳು ಹೇಗೆ ಸಣ್ಣ ಸಣ್ಣ ಅಂಶಗಳಿಗೆ ಖುಷಿಪಡುತ್ತಾರೆ. ತಮಗೆ ಎದುರಾಗುವ ಸಮಸ್ಯೆಗಳಿಂದ ಹೇಗೆ ತೊಂದರೆಗೊಳಪಡುತ್ತಾರೆ. ಆ ಬಳಿಕ ಹೇಗೆ ಅದರಿಂದ ಹೊರಬರುತ್ತಾರೆ ಎಂಬ ಅಂಶಗಳು “ರುದ್ರಿ’ ಚಿತ್ರದ ವಿಶೇಷ. ಅದೇನೆ ಇರಲಿ, ಲಾಕ್‌ಡೌನ್‌ನಿಂದಾಗಿ ತಮ್ಮ ಊರಲ್ಲೇ ಇರುವ ಪಾವನಾ, ಇಷ್ಟರಲ್ಲೇ ಬೆಂಗಳೂರಿಗೆ ಬರುವ ಇಂಗಿತ ವ್ಯಕ್ತಪಡಿಸುತ್ತಾರೆ. ಒಂದಷ್ಟು ಕಥೆ ಕೇಳುವುದರ ಜೊತೆ, ನಿಂತ ಚಿತ್ರಗಳ ಪಾತ್ರದ ತಯಾರಿ ಮಾಡಿಕೊಳ್ಳುವ ಬಗ್ಗೆಯೂ ಮಾತಾಡುತ್ತಾರೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.