ಪೆಗಾಸಸ್ ಬೇಹು ನಿಜವಾದಲ್ಲಿ, ಅದು ಗಂಭೀರ ವಿಚಾರ: ಸುಪ್ರೀಂ
Team Udayavani, Aug 5, 2021, 11:05 PM IST
ನವದೆಹಲಿ: “ಪೆಗಾಸಸ್ಗೆ ಸಂಬಂಧಿಸಿದ ಬೇಹುಗಾರಿಕೆ ಆರೋಪವು ನಿಜವೇ ಆಗಿದ್ದಲ್ಲಿ, ಅದೊಂದು ಗಂಭೀರ ವಿಚಾರ’ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಜತೆಗೆ, ಈ ಕುರಿತು ತನಿಖೆಗೆ ಆಗ್ರಹಿಸಿ ಸಲ್ಲಿಸಿರುವ ಅರ್ಜಿಯ ಪ್ರತಿಯೊಂದನ್ನು ಕೇಂದ್ರ ಸರ್ಕಾರಕ್ಕೂ ಕಳುಹಿಸಿಕೊಡುವಂತೆ ಅರ್ಜಿದಾರರಾದ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಮತ್ತು ಹಿರಿಯ ಪತ್ರಕರ್ತ ಎನ್.ರಾಮ್ ಅವರಿಗೆ ಸೂಚಿಸಿದೆ.
“ಪೆಗಾಸಸ್ ಕುರಿತು ಬಂದಿರುವ ವರದಿಗಳು ಸತ್ಯವೇ ಆಗಿದ್ದಲ್ಲಿ, ಅದೊಂದು ಗಂಭೀರ ವಿಚಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಪ್ರಕರಣವು 2019ರಲ್ಲೇ ಒಮ್ಮೆ ವರದಿಯಾಗಿತ್ತು. ಆದರೂ, ಈ ಕುರಿತು ಅರ್ಜಿ ಸಲ್ಲಿಕೆಗೆ ಇಷ್ಟೊಂದು ವಿಳಂಬವಾಗಿದ್ದೇಕೆ’ ಎಂದು ಸಿಜೆಐ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ ಪ್ರಶ್ನಿಸಿದೆ.
ಜತೆಗೆ, ನೀವು ಅರ್ಜಿಯ ಪ್ರತಿಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟರೆ, ಸರ್ಕಾರದ ಪರವಾಗಿ ಯಾರಾದರೂ ಇಲ್ಲಿಗೆ ಬಂದು ನೋಟಿಸ್ ಸ್ವೀಕರಿಸಲು ಸಾಧ್ಯ ಎಂದು ಹೇಳಿ, ವಿಚಾರಣೆಯನ್ನು ಆ.10ಕ್ಕೆ ಮುಂದೂಡಿದೆ. ಇಸ್ರೇಲ್ನ ಎನ್ಎಸ್ಒ ಸಂಸ್ಥೆಯ ಬೇಹು ತಂತ್ರಾಂಶ ಬಳಸಿ ಕೇಂದ್ರ ಸರ್ಕಾರವು ರಾಜಕಾರಣಿಗಳು, ಪತ್ರಕರ್ತರು ಸೇರಿದಂತೆ ಹಲವು ಗಣ್ಯರ ಮೇಲೆ ಬೇಹುಗಾರಿಕೆ ನಡೆಸಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ಗೆ ಒಟ್ಟಾರೆ 9 ಅರ್ಜಿಗಳು ಸಲ್ಲಿಕೆಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್