ಅಯೋಧ್ಯೆ ಯಾತ್ರೀ ನಿವಾಸಕ್ಕೆ ನಿವೇಶನ: ಪೇಜಾವರ ಶ್ರೀಗಳಿಗೆ ಮುಖ್ಯಮಂತ್ರಿ ಯೋಗಿ ಭರವಸೆ
Team Udayavani, Nov 3, 2020, 11:27 PM IST
ಉಡುಪಿ: ಕರ್ನಾಟಕ ಸರಕಾರದಿಂದ ಅಯೋಧ್ಯೆಯಲ್ಲಿ ಯಾತ್ರೀ ನಿವಾಸ ನಿರ್ಮಿಸಲು ಸೂಕ್ತ ನಿವೇಶನವನ್ನು ಒದಗಿಸುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪೇಜಾವರ ಶ್ರೀಗಳಿಗೆ ಭರವಸೆ ನೀಡಿದ್ದಾರೆ.
ಯಾತ್ರೀ ಭವನ ನಿರ್ಮಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಭೂಮಿ ಮಂಜೂರಾತಿಗೆ ಆದಿತ್ಯನಾಥ್ ಅವರಿಗೆ ಪತ್ರ ಬರೆದಿರುವುದನ್ನು ಪೇಜಾವರ ಶ್ರೀಗಳು ಗಮನಕ್ಕೆ ತಂದಾಗ ಶೀಘ್ರವೇ ಭೂಮಿಯನ್ನು ಮಂಜೂರು ಮಾಡುವುದಾಗಿ ತಿಳಿಸಿದರು.
ಪೇಜಾವರ ಶ್ರೀಗಳು ಮಂಗಳ ವಾರ ನೈಮಿಷಾರಣ್ಯಕ್ಕೆ ಭೇಟಿ ನೀಡಿ ಚಕ್ರತೀರ್ಥದಲ್ಲಿ ಸ್ನಾನ ಮಾಡಿದರು. ಗೋಮತಿ ನದಿ ಸ್ನಾನ ಮಾಡಿ ವ್ಯಾಸ ಗದ್ದುಗೆಯ ದರ್ಶನ ಪಡೆದರು. ಸಂಜೆ ಹರಿದ್ವಾರಕ್ಕೆ ಭೇಟಿ ನೀಡಿದರು. ಹರಿದ್ವಾರದಲ್ಲಿ ಬುಧವಾರ ಬೆಳಗ್ಗೆ ಗಂಗಾ ಸ್ನಾನ ಮಾಡಿ ಬದರಿಗೆ ತೆರಳುವರು. ಗುರುವಾರ ಬದರಿನಾರಾಯಣನ ದರ್ಶನ ಮಾಡಿ ಹರಿದ್ವಾರಕ್ಕೆ ಬಂದು ದಿಲ್ಲಿಗೆ ಪ್ರಯಾಣಿಸುವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ